ಬೆಂಗಳೂರು: ನಗರದ ಫ್ರೇಜರ್ ಟೌನ್ನಲ್ಲಿ ಶ್ರವಣ ಆರೈಕೆಯ ಧ್ವನಿ ಕೇಂದ್ರವು ಗುರುವಾರದಿಂದ ಕಾರ್ಯಾರಂಭ ಮಾಡಿತು. ನಗರದಲ್ಲಿ ಆರಂಭವಾಗಿರುವ ವಿಶ್ವದರ್ಜೆಯ ಮೊದಲ ಧ್ವನಿ ಕೇಂದ್ರ ಇದು.
ವೈಡೆಕ್ಸ್ ಇಂಡಿಯಾದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ಪವಾರ್, ‘ಈ ಕೇಂದ್ರವು ಶಾಬ್ದಿಕ ತಾಣದ ಪರಿಕರಗಳ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿ ಬಳಕೆದಾರರು ಶಬ್ದಗಳ ಸಂಪರ್ಕ ಮತ್ತು ಸ್ಪಷ್ಟತೆಯನ್ನು ಅನುಭವಿಸಬಹುದು. ಶೂನ್ಯ ವಿಳಂಬ ತಂತ್ರಜ್ಞಾನದೊಂದಿಗೆ ಶುದ್ಧ ಮತ್ತು ನೈಸರ್ಗಿಕ ಧ್ವನಿಯನ್ನು ತಲುಪಿಸುವ ಸಾಧನಗಳು ಇಲ್ಲಿವೆ’ ಎಂದರು.
ಕಾರ್ಟಿ ಸೌಂಡ್ ಸೆಂಟರ್ ನಿರ್ದೇಶಕ ಕೆ.ಡಿ. ರಾಜೇಶ್, ‘ಶ್ರವಣ ನಷ್ಟವು ಯಾರಿಗಾದರೂ, ಯಾವ ವಯಸ್ಸಿನಲ್ಲಿ ಬೇಕಾದರೂ ಸಂಭವಿಸಬಹುದು. ಆದರೆ, ಅದು ಸಾಮಾನ್ಯ ಜೀವನ ನಡೆಸಲು ತೊಂದರೆಯಾಗಬಾರದು. ಈ ಕೇಂದ್ರದಲ್ಲಿರುವ ಆಧುನಿಕ ತಂತ್ರಜ್ಞಾನದ ಸಾಧನಗಳು ಜನರ ಶ್ರವಣ ಸಾಮರ್ಥ್ಯವನ್ನು ಸುಧಾರಿಸುತ್ತವೆ’ ಎಂದರು.
ಮಾಜಿ ಕ್ರಿಕೆಟಿಗ ಸೈಯದ್ ಕೀರ್ಮಾನಿ ಕೇಂದ್ರವನ್ನು ಉದ್ಘಾಟಿಸಿದರು.