ಬಿಬಿಎಂಪಿಯ ಆಧಿಕಾರಿಗಳು ಉಪಯೋಗಿಸುವ ಸುಮಾರು 30 ವಾಹನಗಳ ಮೂಲಕ ಪೂರ್ವ, ಪಶ್ಚಿಮ ದಕ್ಷಿಣ ವಲಯಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಅನಿಲ್ ಕುಮಾರ್ ಮಾತನಾಡಿ,'ಕರೋನಾ ಸೋಂಕು ಹರಡದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದೇಶದಿಂದ ನಗರಕ್ಕೆ ಬಂದಿರುವ ಸುಮಾರು 30,000 ನಾಗರಿಕರನ್ನು ಗುರುತಿಸಿ ಬಿಬಿಎಂಪಿ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಕೈಮೇಲೆ ಮುದ್ರೆ ಹಾಕಲು ಕ್ರಮ ವಹಿಸಿದ್ದಾರೆ' ಎಂದು ತಿಳಿಸಿದರು.
'ಕರೋನ ನಿಯಂತ್ರಿಸುವ ಸಲುವಾಗಿ ಬಿಬಿಎಂಪಿ ಕೇಂದ್ರ ಕಚೇರಿಯ 6ನೇ ಮಹಡಿಯಲ್ಲಿ ಸನ್ನದ್ಧತಾ ಕೊಠಡಿ (ವಾರ್ ರೂಂ) ಸ್ಥಾಪಿಸಿದ್ದು, ಸೋಮವಾರ ಚಾಲನೆ ನೀಡಲಾಗುವುದು' ಎಂದು ತಿಳಿಸಿದರು.