ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆಯಲ್ಲೇ ಉಳಿಯಿರಿ ಸುರಕ್ಷಿತವಾಗಿರಿ-’ ಅಭಿಯಾನ

Last Updated 23 ಮಾರ್ಚ್ 2020, 3:20 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್ ಸೋಂಕು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಕುರಿತು ಬಿಬಿಎಂಪಿ 'ಮನೆಯಲ್ಲೇ ಉಳಿಯಿರಿ ಸುರಕ್ಷಿತವಾಗಿರಿ' ಅಭಿಯಾನದ ಹಮ್ಮಿಕೊಂಡಿದೆ.

ಪಾಲಿಕೆ ಆಯುಕ್ತ .ಬಿ.ಹೆಚ್. ಅನಿಲ್ ಕುಮಾರ್, ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಪಾಲಿಕೆ ವಿಶೇಷ ಆಯುಕ್ತ (ಯೋಜನೆ ಮತ್ತು ಆರೋಗ್ಯ) ರವಿಕುಮಾರ್‌ ಸುರಪುರ ಹಾಗೂ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ ರಾಜು ಅವರು ಅಭಿಯಾನಕ್ಕೆ ಚಾಲನೆ ನೀಡಿದರು.

ಬಿಬಿಎಂಪಿಯ ಆಧಿಕಾರಿಗಳು ಉಪಯೋಗಿಸುವ ಸುಮಾರು 30 ವಾಹನಗಳ ಮೂಲಕ ಪೂರ್ವ, ಪಶ್ಚಿಮ ದಕ್ಷಿಣ ವಲಯಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಅನಿಲ್ ಕುಮಾರ್ ಮಾತನಾಡಿ,'ಕರೋನಾ ಸೋಂಕು ಹರಡದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದೇಶದಿಂದ ನಗರಕ್ಕೆ ಬಂದಿರುವ ಸುಮಾರು 30,000 ನಾಗರಿಕರನ್ನು ಗುರುತಿಸಿ ಬಿಬಿಎಂಪಿ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಕೈಮೇಲೆ ಮುದ್ರೆ ಹಾಕಲು ಕ್ರಮ ವಹಿಸಿದ್ದಾರೆ' ಎಂದು ತಿಳಿಸಿದರು.
'ಕರೋನ ನಿಯಂತ್ರಿಸುವ ಸಲುವಾಗಿ ಬಿಬಿಎಂಪಿ ಕೇಂದ್ರ ಕಚೇರಿಯ 6ನೇ ಮಹಡಿಯಲ್ಲಿ ಸನ್ನದ್ಧತಾ ಕೊಠಡಿ (ವಾರ್ ರೂಂ) ಸ್ಥಾಪಿಸಿದ್ದು, ಸೋಮವಾರ ಚಾಲನೆ ನೀಡಲಾಗುವುದು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT