<p>ಬೆಂಗಳೂರು: ಕೆಲವು ದುಷ್ಕರ್ಮಿಗಳು ಬೀದಿನಾಯಿಗಳನ್ನು ಮತ್ತು ಸಾಕುನಾಯಿಗಳನ್ನು ಸಾಯಿಸುತ್ತಿದ್ದಾರೆ ಎಂದು ಚಿಕ್ಕಬೆಳ್ಳಂದೂರು ನಿವಾಸಿಗಳು ಆರೋಪಿಸಿದ್ದಾರೆ.</p>.<p>ಬಡಾವಣೆಯ ಸುತ್ತ–ಮುತ್ತ ಪ್ರಾಣಿಗಳ ಮೂಳೆಗಳು ಮತ್ತು ದೇಹದ ಇನ್ನಿತರೆ ಅಂಗಾಂಗಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು, ಕ್ಯೂಪಾದಂತಹ ಪ್ರಾಣಿ ದಯಾ ಸಂಘಗಳ ಗಮನಕ್ಕೂ ತಂದಿದ್ದಾರೆ. ಕ್ಯಾಪಾದ ಸದಸ್ಯ ತೇಜೇಶ್ವರ್ ಅವರು ವರ್ತೂರು ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ನಾಯಿಗಳ ಮೂಳೆಗಳು ಬಿದ್ದಿರುವುದನ್ನು ತೋರಿಸಿದ್ದಾರೆ.</p>.<p>‘ಈ ನಾಯಿಗಳನ್ನು ಯಾರು ಸಾಯಿಸಿದ್ದಾರೆ ಎಂಬ ಶಂಕೆ ನಮಗಿದೆಯೋ ಅವರ ಮನೆಯಿಂದ ಕೇವಲ ಐದು ಅಡಿ ದೂರದಲ್ಲಿ ನಾಯಿಗಳ ತಲೆ ಬುರುಡೆ, ಮೂಳೆಗಳು ಬಿದ್ದಿವೆ. ನಾಯಿಗಳನ್ನು ಸಾಯಿಸಿ, ಸುಡಲಾಗಿದೆ. ಆದರೆ, ಬುರುಡೆಗಳು ಸಿಕ್ಕಿವೆ’ ಎಂದು ತೇಜೇಶ್ವರ್ ಹೇಳಿದ್ದು, ಈ ಕುರಿತು ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.</p>.<p>‘ನಾಯಿಗಳ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಮನೆಯಲ್ಲಿ ಏರ್ಗನ್ ಪತ್ತೆಯಾಗಿದೆ. ಇದಕ್ಕೆ ಪರವಾನಗಿ ಅಗತ್ಯವಿಲ್ಲ. ನಾಯಿಗಳ ಮೂಳೆಗಳ ಜೊತೆಯಲ್ಲಿ, ಹಂದಿಗಳ ಮೂಳೆಗಳೂ ಪತ್ತೆಯಾಗಿವೆ’ ಎಂದು ವರ್ತೂರು ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<p>‘ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುವ ಐವರು ಸೇರಿ ಈ ರೀತಿ ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ. ಈ ಪ್ರಾಣಿಗಳ ಮಾಂಸದಿಂದಲೇ ಆಹಾರ ತಯಾರಿಸುತ್ತಿರುವ ಶಂಕೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕೆಲವು ದುಷ್ಕರ್ಮಿಗಳು ಬೀದಿನಾಯಿಗಳನ್ನು ಮತ್ತು ಸಾಕುನಾಯಿಗಳನ್ನು ಸಾಯಿಸುತ್ತಿದ್ದಾರೆ ಎಂದು ಚಿಕ್ಕಬೆಳ್ಳಂದೂರು ನಿವಾಸಿಗಳು ಆರೋಪಿಸಿದ್ದಾರೆ.</p>.<p>ಬಡಾವಣೆಯ ಸುತ್ತ–ಮುತ್ತ ಪ್ರಾಣಿಗಳ ಮೂಳೆಗಳು ಮತ್ತು ದೇಹದ ಇನ್ನಿತರೆ ಅಂಗಾಂಗಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು, ಕ್ಯೂಪಾದಂತಹ ಪ್ರಾಣಿ ದಯಾ ಸಂಘಗಳ ಗಮನಕ್ಕೂ ತಂದಿದ್ದಾರೆ. ಕ್ಯಾಪಾದ ಸದಸ್ಯ ತೇಜೇಶ್ವರ್ ಅವರು ವರ್ತೂರು ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ನಾಯಿಗಳ ಮೂಳೆಗಳು ಬಿದ್ದಿರುವುದನ್ನು ತೋರಿಸಿದ್ದಾರೆ.</p>.<p>‘ಈ ನಾಯಿಗಳನ್ನು ಯಾರು ಸಾಯಿಸಿದ್ದಾರೆ ಎಂಬ ಶಂಕೆ ನಮಗಿದೆಯೋ ಅವರ ಮನೆಯಿಂದ ಕೇವಲ ಐದು ಅಡಿ ದೂರದಲ್ಲಿ ನಾಯಿಗಳ ತಲೆ ಬುರುಡೆ, ಮೂಳೆಗಳು ಬಿದ್ದಿವೆ. ನಾಯಿಗಳನ್ನು ಸಾಯಿಸಿ, ಸುಡಲಾಗಿದೆ. ಆದರೆ, ಬುರುಡೆಗಳು ಸಿಕ್ಕಿವೆ’ ಎಂದು ತೇಜೇಶ್ವರ್ ಹೇಳಿದ್ದು, ಈ ಕುರಿತು ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.</p>.<p>‘ನಾಯಿಗಳ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಮನೆಯಲ್ಲಿ ಏರ್ಗನ್ ಪತ್ತೆಯಾಗಿದೆ. ಇದಕ್ಕೆ ಪರವಾನಗಿ ಅಗತ್ಯವಿಲ್ಲ. ನಾಯಿಗಳ ಮೂಳೆಗಳ ಜೊತೆಯಲ್ಲಿ, ಹಂದಿಗಳ ಮೂಳೆಗಳೂ ಪತ್ತೆಯಾಗಿವೆ’ ಎಂದು ವರ್ತೂರು ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<p>‘ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುವ ಐವರು ಸೇರಿ ಈ ರೀತಿ ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ. ಈ ಪ್ರಾಣಿಗಳ ಮಾಂಸದಿಂದಲೇ ಆಹಾರ ತಯಾರಿಸುತ್ತಿರುವ ಶಂಕೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>