‘ಈ ನಾಯಿಗಳನ್ನು ಯಾರು ಸಾಯಿಸಿದ್ದಾರೆ ಎಂಬ ಶಂಕೆ ನಮಗಿದೆಯೋ ಅವರ ಮನೆಯಿಂದ ಕೇವಲ ಐದು ಅಡಿ ದೂರದಲ್ಲಿ ನಾಯಿಗಳ ತಲೆ ಬುರುಡೆ, ಮೂಳೆಗಳು ಬಿದ್ದಿವೆ. ನಾಯಿಗಳನ್ನು ಸಾಯಿಸಿ, ಸುಡಲಾಗಿದೆ. ಆದರೆ, ಬುರುಡೆಗಳು ಸಿಕ್ಕಿವೆ’ ಎಂದು ತೇಜೇಶ್ವರ್ ಹೇಳಿದ್ದು, ಈ ಕುರಿತು ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.