ಇದೇ 25 ರಂದು ಯುಗಾದಿ ಇದ್ದು, ಹಬ್ಬದ ಆಚರಣೆಯಿಂದ ಜನತೆ ದೂರ ಉಳಿಯುವ ಸಾಧ್ಯತೆ ಇದೆ. ಮನೆಯಲ್ಲೇ ಸರಳವಾಗಿ ಯುಗಾದಿ ಆಚರಿಸಲು ರಾಜ್ಯ ಸರ್ಕಾರವೂ ಜನತೆಗೆ ಮನವಿ ಮಾಡಲಿದೆ. ಹಬ್ಬ, ಜಾತ್ರೆ, ರಥೋತ್ಸವ, ಮಸೀದಿಗಳಲ್ಲಿ ನಮಾಜ್ ಮತ್ತು ಚರ್ಚ್ಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಿದರೆ, ವೈರಸ್ ಹರಡಲು ಹಾಸಿಗೆ ಹಾಸಿಕೊಟ್ಟಂತಾಗುತ್ತದೆ ಎಂದು ಅವರು ತಿಳಿಸಿದರು.