ಕೊರಿಯರ್ ಕೊಡುವ ನೆಪದಲ್ಲಿ ಉಷಾ ಬಾಲಕೃಷ್ಣನ್ (75) ಎಂಬುವರ ಮನೆಗೆ ಹೋಗಿದ್ದ ನವೀನ್ ಗೌಡ, ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿದ್ದ. ಮನೆಯ ಒಳಗೆ ನುಗ್ಗಿದ್ದ ಆರೋಪಿ, ವೃದ್ಧೆಯನ್ನು ಬೆದರಿಸಿ, ಬೀರುವಿನಲ್ಲಿ ಹುಡುಕಾಡಿದ್ದ. ಅಲ್ಲಿ ಏನೂ ಸಿಗದೇ ಇದ್ದಾಗ ಮಹಿಳೆ ಬಳಿ ಇದ್ದ ನಾಲ್ಕು ಚಿನ್ನದ ಬಳೆಗಳು ಮತ್ತು ಕಿವಿಯೋಲೆ ದೋಚಿ ಪರಾರಿಯಾಗಿದ್ದ.