ಲಾಕ್ಡೌನ್ ಪರಿಹಾರವಾಯಿತೇ?
‘ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಹೇರಿದ ಬಳಿಕ ದೂರದ ಪ್ರದೇಶಗಳಿಗೂ ಹಿಮಾಲಯ, ಮೌಂಟ್ ಎವರೆಸ್ಟ್, ಗೌರಿಶಂಕರ ಸ್ಪಷ್ಟವಾಗಿ ಕಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಇದೇ ವೇಳೆ ಬೆಂಗಳೂರಿನಲ್ಲಿ ಹರಿಯುವ ವೃಷಭಾವತಿ ನದಿಯೂ ಶುದ್ಧವಾಗಿತ್ತು ಎಂದು ಹಲವರು ತಿಳಿಸಿದರು. ಇದನ್ನು ಗಮನಿಸಿದರೆ ಪರಿಸರ ಸಂರಕ್ಷಣೆಗಾಗಿ ಕೊರೊನಾ ಪ್ರಕೃತಿಯೇ ಹುಡುಕಿಕೊಂಡ ಪರಿಹಾರದ ಮಾರ್ಗ ಇರಬಹುದಾ? ಎಂಬ ಪ್ರಶ್ನೆ ಮೂಡಿದೆ’ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.