‘ಎಸ್.ಕೆ. ವಾಸುದೇವ್, ಸಿ.ಆರ್. ಮಂಜುನಾಥ್ ಅವರು ಅಕ್ರಮ ಪ್ರಕರಣಕ್ಕೆ ನೇರವಾಗಿ ಹೊಣೆಗಾರರು. ಇವರ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಮಂಡಳಿ ನೌಕರರಿಗೆ ತಕ್ಕುದ್ದಲ್ಲದ ರೀತಿಯಲ್ಲಿ ವರ್ತಿಸಿ, ಕರ್ತವ್ಯ ನಿರ್ಲಕ್ಷ್ಯ ತೋರಿಸಿದ್ದೀರಿ. ಇದರಿಂದ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಅತಿ ಸೂಕ್ತ ಎಂದು ಪರಿಗಣಿಸಲಾಗಿದೆ. ನಿಮ್ಮನ್ನು ಕರ್ತವ್ಯದಲ್ಲಿ ಮುಂದುವರಿಸಿದರೆ ಸಾಕ್ಷಿ, ದಾಖಲೆಗಳನ್ನು ನಾಶಪಡಿಸುವ ಅವಕಾಶವಿರುವುದರಿಂದ ಅಮಾನತಿನಲ್ಲಿಡಲಾಗುತ್ತಿದೆ. ನಿಮ್ಮ ಕೇಂದ್ರ ಸ್ಥಾನವನ್ನು ಬೆಂಗಳೂರಿಗೆ ಬದಲಾಯಿಸಲಾಗಿದೆ. ಇಲಾಖಾ ವಿಚಾರಣೆ ನಡೆಸಲಾಗುತ್ತದೆ’ ಎಂದು ಜ.3ರಂದು ನೀಡಿರುವ ಆದೇಶದಲ್ಲಿ ಮಂಡಳಿ ಅಧ್ಯಕ್ಷರು ವಿವರಿಸಿದ್ದಾರೆ.