<p><strong>ಬೆಂಗಳೂರು:</strong> ರಾಮಸೇವಾ ಮಂಡಲಿ ಟ್ರಸ್ಟ್ ಸಂಸ್ಥಾಪಕ ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮರಣಾರ್ಥ ನೀಡುವ ಎಸ್ವಿಎನ್ ರಾಷ್ಟ್ರೀಯ ಪ್ರಶಸ್ತಿಗೆ ತಾಳ ವಾದಕ (ಘಟಂ) ವಿದ್ವಾನ್ ಟಿ.ಎಚ್. ವಿನಾಯಕರಾಮ್, ಸಂಗೀತ ಕಲಾ ಆಚಾರ್ಯ ಸಹೋದರರಾದ ಟಿ.ಎನ್. ತ್ಯಾಗರಾಜನ್, ಟಿ.ಎನ್. ತಾರನಾಥನ್ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ಮಾರ್ಚ್ 16 ಕನಕಪುರ ರಸ್ತೆಯ ನೆಟ್ಟಿಗೆರೆ ಎಸ್ವಿಎನ್ ಸ್ಮಾರಕ ಸಭಾಂಗಣದಲ್ಲಿ ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮರಣಾರ್ಥ ಸಂಗೀತ ಹಬ್ಬ ನಡೆಯಲಿದೆ. ಮಾರ್ಚ್ 17ರಂದು ಬಸವನಗುಡಿ ಎಪಿಎಸ್ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. </p>.<p>ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮಾಜಿ ಸಂಸದ ಕೆ.ಸಿ. ರಾಮಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಪಿಟೀಲು ವಾದಕ ಕುಮರೇಶ್ ರಾಜಗೋಪಾಲನ್, ಸಂಗೀತ ಕಲಾರತ್ನ ಎಂ. ಸೂರ್ಯಪ್ರಸಾದ್ ಭಾಗವಹಿಸುವರು ಎಂದು ರಾಮಸೇವಾ ಮಂಡಲಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎನ್. ರಾಮಪ್ರಸಾದ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಮಸೇವಾ ಮಂಡಲಿ ಟ್ರಸ್ಟ್ ಸಂಸ್ಥಾಪಕ ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮರಣಾರ್ಥ ನೀಡುವ ಎಸ್ವಿಎನ್ ರಾಷ್ಟ್ರೀಯ ಪ್ರಶಸ್ತಿಗೆ ತಾಳ ವಾದಕ (ಘಟಂ) ವಿದ್ವಾನ್ ಟಿ.ಎಚ್. ವಿನಾಯಕರಾಮ್, ಸಂಗೀತ ಕಲಾ ಆಚಾರ್ಯ ಸಹೋದರರಾದ ಟಿ.ಎನ್. ತ್ಯಾಗರಾಜನ್, ಟಿ.ಎನ್. ತಾರನಾಥನ್ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ಮಾರ್ಚ್ 16 ಕನಕಪುರ ರಸ್ತೆಯ ನೆಟ್ಟಿಗೆರೆ ಎಸ್ವಿಎನ್ ಸ್ಮಾರಕ ಸಭಾಂಗಣದಲ್ಲಿ ಎಸ್.ವಿ. ನಾರಾಯಣಸ್ವಾಮಿ ರಾವ್ ಸ್ಮರಣಾರ್ಥ ಸಂಗೀತ ಹಬ್ಬ ನಡೆಯಲಿದೆ. ಮಾರ್ಚ್ 17ರಂದು ಬಸವನಗುಡಿ ಎಪಿಎಸ್ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. </p>.<p>ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮಾಜಿ ಸಂಸದ ಕೆ.ಸಿ. ರಾಮಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಪಿಟೀಲು ವಾದಕ ಕುಮರೇಶ್ ರಾಜಗೋಪಾಲನ್, ಸಂಗೀತ ಕಲಾರತ್ನ ಎಂ. ಸೂರ್ಯಪ್ರಸಾದ್ ಭಾಗವಹಿಸುವರು ಎಂದು ರಾಮಸೇವಾ ಮಂಡಲಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಎನ್. ರಾಮಪ್ರಸಾದ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>