‘ತಮ್ಮ ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಕಳುಹಿಸಿರುವುದಾಗಿ ಹೇಳಿ ವಿಜೇಶ್ ಪರಿಚಯ ಮಾಡಿಕೊಂಡಿದ್ದ. ‘ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದ ವಿರುದ್ಧದ ವಿಷಯವನ್ನು ಸಂಧಾನ ಮಾಡಿಕೊಳ್ಳಿ. ಇದಕ್ಕೆ ಪ್ರತಿಯಾಗಿ₹ 30 ಕೋಟಿ ಕೊಡುತ್ತೇವೆ. ಅದನ್ನು ತೆಗೆದುಕೊಂಡು, ವಾರದೊಳಗೆ ಬೆಂಗಳೂರು ಬಿಟ್ಟು ಹೋಗಿ. ಇಲ್ಲದಿದ್ದರೆ, ನಿಮ್ಮ ಬ್ಯಾಗ್ನಲ್ಲಿ ಬಾಂಬ್ ಇರಿಸಿ ಭಯೋತ್ಪಾದಕ ಕೃತ್ಯದ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ. ಇದಕ್ಕೂ ಒಪ್ಪದಿದ್ದರೆ, ಕೊಲೆ ಮಾಡುತ್ತೇವೆ’ ಎಂದೂ ವಿಜೇಶ್ ಬೆದರಿಸಿದ್ದಾರೆ’ ಎಂದೂ ದೂರಿನಲ್ಲಿಉಲ್ಲೇಖಿಸಿದ್ದಾರೆ.