‘ಜೂನ್ 28ರಂದು ಬೆಳಿಗ್ಗೆ 10.10ರಿಂದ 10.20ರ ಅವಧಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬ್ಯಾಂಕ್ಗೆ ಬಂದಿದ್ದ ದುಷ್ಕರ್ಮಿಗಳು, ನಗದು ಕೇಂದ್ರದಲ್ಲಿದ್ದ ನೌಕರ ಎ. ವೇಲು ಎಂಬುವರ ಗಮನ ಬೇರೆಡೆ ಸೆಳೆದಿದ್ದರು. ಕೇಂದ್ರದ ತೆರೆದ ಕ್ಯಾಬಿನ್ನೊಳಗೆ ಕೈ ಹಾಕಿ ಹಣ ಕದ್ದಿದ್ದಾರೆ. ನಂತರ, ಒಬ್ಬೊಬ್ಬರಾಗಿ ಬ್ಯಾಂಕ್ನಿಂದ ಹೊರಟು ಹೋಗಿದ್ದಾರೆ. ಈ ದೃಶ್ಯಗಳು ಸೆರೆಯಾಗಿವೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.