<p><strong>ಬೆಂಗಳೂರು</strong>: ‘ರಾಜ್ಯದಲ್ಲಿಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಕಾರಣ, ಮದುವೆ ಸಮಾರಂಭಗಳು, ಮಂದಿರ–ಮಸೀದಿಗಳ ಮೇಲೆನಿಯಂತ್ರಣಹೇರಲುಚಿಂತನೆನಡೆಸಲಾಗಿದೆ’ ಎಂದುಕಂದಾಯಸಚಿವಆರ್.ಅಶೋಕ್ಹೇಳಿದರು. </p>.<p>‘ಸ್ಮಾರ್ಟ್ ಪದ್ಮನಾಭ ನಗರ‘ ಕಾರ್ಯಕ್ರಮದಡಿ, ರಾಷ್ಟ್ರೀಯ ಯುವ ಪ್ರತಿಷ್ಠಾನದ ವತಿಯಿಂದ 100 ಮಕ್ಕಳಿಗೆ ಉಚಿತವಾಗಿ ಟ್ಯಾಬ್ಗಳನ್ನು ವಿತರಿಸಿ ಅವರು ಮಾತನಾಡಿದರು.</p>.<p>‘ಹಬ್ಬಗಳ ಸಂದರ್ಭದಲ್ಲಿ ಮಂದಿರ–ಮಸೀದಿಗಳಲ್ಲಿ ಹೆಚ್ಚು ಜನ ಸೇರುತ್ತಾರೆ. ಅಲ್ಲದೆ, ಮದುವೆ ಸಮಾರಂಭಗಳಲ್ಲಿಯೂ ಜನಜಂಗುಳಿ ಹೆಚ್ಚು. ಅದಕ್ಕಾಗಿ ಈ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದರು.</p>.<p>‘ಕೋವಿಡ್ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಆದ್ಯತೆ. ಆದರೆ, ಲಾಕ್ಡೌನ್ ಹೇರಿಕೆ ಸರ್ಕಾರದ ಕೊನೆಯ ಪರ್ಯಾಯ ಕ್ರಮ. ಎಲ್ಲರೂ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದರು.</p>.<p>ರಾಷ್ಟ್ರೀಯಯುವಪ್ರತಿಷ್ಠಾನದಸಂಸ್ಥಾಪಕಪ್ರಮೋದ್ಶ್ರೀನಿವಾಸ್ಮಾತನಾಡಿ, ‘ಆನ್ಲೈನ್ ತರಗತಿಗೆ ಹಾಜರಾಗಲು ಬೇಕಾದ ಸ್ಮಾರ್ಟ್ ಫೋನ್ ಅಥವಾ ಇನ್ನಿತರ ಸಾಧನಗಳು ಇಲ್ಲದೆ ಅನೇಕ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದರು. ಅಂತಹ ಆಯ್ದ 100 ಮಕ್ಕಳಿಗೆ ಉಚಿತವಾಗಿ ಟ್ಯಾಬ್ ನೀಡಿದ್ದೇವೆ’ ಎಂದರು.</p>.<p>‘ಸಾರ್ವಜನಿಕ ಶಿಕ್ಷಣಇಲಾಖೆಇತ್ತೀಚೆಗೆನಡೆಸಿದಸಮೀಕ್ಷೆಯಲ್ಲಿ 93.01 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ33ರಷ್ಟು ವಿದ್ಯಾರ್ಥಿಗಳ ಬಳಿಸ್ಮಾರ್ಟ್ ಫೋನ್ಗಳಿಲ್ಲ. ಈ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ರಾಜ್ಯದಲ್ಲಿಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಕಾರಣ, ಮದುವೆ ಸಮಾರಂಭಗಳು, ಮಂದಿರ–ಮಸೀದಿಗಳ ಮೇಲೆನಿಯಂತ್ರಣಹೇರಲುಚಿಂತನೆನಡೆಸಲಾಗಿದೆ’ ಎಂದುಕಂದಾಯಸಚಿವಆರ್.ಅಶೋಕ್ಹೇಳಿದರು. </p>.<p>‘ಸ್ಮಾರ್ಟ್ ಪದ್ಮನಾಭ ನಗರ‘ ಕಾರ್ಯಕ್ರಮದಡಿ, ರಾಷ್ಟ್ರೀಯ ಯುವ ಪ್ರತಿಷ್ಠಾನದ ವತಿಯಿಂದ 100 ಮಕ್ಕಳಿಗೆ ಉಚಿತವಾಗಿ ಟ್ಯಾಬ್ಗಳನ್ನು ವಿತರಿಸಿ ಅವರು ಮಾತನಾಡಿದರು.</p>.<p>‘ಹಬ್ಬಗಳ ಸಂದರ್ಭದಲ್ಲಿ ಮಂದಿರ–ಮಸೀದಿಗಳಲ್ಲಿ ಹೆಚ್ಚು ಜನ ಸೇರುತ್ತಾರೆ. ಅಲ್ಲದೆ, ಮದುವೆ ಸಮಾರಂಭಗಳಲ್ಲಿಯೂ ಜನಜಂಗುಳಿ ಹೆಚ್ಚು. ಅದಕ್ಕಾಗಿ ಈ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದರು.</p>.<p>‘ಕೋವಿಡ್ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಆದ್ಯತೆ. ಆದರೆ, ಲಾಕ್ಡೌನ್ ಹೇರಿಕೆ ಸರ್ಕಾರದ ಕೊನೆಯ ಪರ್ಯಾಯ ಕ್ರಮ. ಎಲ್ಲರೂ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದರು.</p>.<p>ರಾಷ್ಟ್ರೀಯಯುವಪ್ರತಿಷ್ಠಾನದಸಂಸ್ಥಾಪಕಪ್ರಮೋದ್ಶ್ರೀನಿವಾಸ್ಮಾತನಾಡಿ, ‘ಆನ್ಲೈನ್ ತರಗತಿಗೆ ಹಾಜರಾಗಲು ಬೇಕಾದ ಸ್ಮಾರ್ಟ್ ಫೋನ್ ಅಥವಾ ಇನ್ನಿತರ ಸಾಧನಗಳು ಇಲ್ಲದೆ ಅನೇಕ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದರು. ಅಂತಹ ಆಯ್ದ 100 ಮಕ್ಕಳಿಗೆ ಉಚಿತವಾಗಿ ಟ್ಯಾಬ್ ನೀಡಿದ್ದೇವೆ’ ಎಂದರು.</p>.<p>‘ಸಾರ್ವಜನಿಕ ಶಿಕ್ಷಣಇಲಾಖೆಇತ್ತೀಚೆಗೆನಡೆಸಿದಸಮೀಕ್ಷೆಯಲ್ಲಿ 93.01 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ33ರಷ್ಟು ವಿದ್ಯಾರ್ಥಿಗಳ ಬಳಿಸ್ಮಾರ್ಟ್ ಫೋನ್ಗಳಿಲ್ಲ. ಈ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>