ಮೈಸೂರು: ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕರ ದೀಕ್ಷಾ ಸುವರ್ಣ ಮಹೋತ್ಸವ ಮೈಸೂರಿನಲ್ಲಿ ನೆರವೇರಿತು. ಚಾರುಕೀರ್ತಿ ಭಟ್ಟಾರಕರು ಸನ್ಯಾಸ ದೀಕ್ಷೆ ಪಡೆದು ಗುರುವಾರಕ್ಕೆ (12–12–1969) ಐವತ್ತು ವರ್ಷ ತುಂಬಿದ್ದರಿಂದ, ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಾಕೃತ ಸಮಾವೇಶದಲ್ಲೂ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು.ಕೋಟೆ ಶಾಂತಿನಾಥ ಜೈನ ಬಸದಿಯಲ್ಲಿಯೂ ದೀಕ್ಷಾ ಸುವರ್ಣ ಮಹೋತ್ಸವ ಆಚರಿಸಲಾಯಿತು.