‘ಹೈಕೋರ್ಟ್ ಸಿಬ್ಬಂದಿಯೊಬ್ಬರಿಂದ ಮೇ 10ರಂದು ಬೆಳಿಗ್ಗೆ 11.53ಕ್ಕೆ ಬೆಂಗಳೂರಿನ ಸರ್ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ ಸಿಬ್ಬಂದಿ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದಾರೆ. ಅದಾದ 11 ಗಂಟೆಗಳ ನಂತರ ಪ್ರಯೋಗಾಲಯ ಅದನ್ನು ಪಡೆದುಕೊಂಡಿದೆ. ಮೇ 11ರ ಮಧ್ಯಾಹ್ನ 1 ಗಂಟೆಗೆ ಮಾದರಿ ಪರೀಕ್ಷೆ ಮಾಡಲಾಗಿದೆ. 1.33ರ ವೇಳೆಗೆ ಫಲಿತಾಂಶ ಸಿದ್ಧಗೊಂಡಿದೆ. ಆದರೂ, ವರದಿಯನ್ನು ಸಂಬಂಧಿಸಿದವರಿಗೆ ತಲುಪಿಸಿಲ್ಲ. ಅವರು 12ರ ರಾತ್ರಿ ಮೃತಪಟ್ಟಿದ್ದಾರೆ’ ಎಂದು ಪೀಠ ವಿವರಿಸಿತು.