ವಿಚಾರಣೆಯಲ್ಲಿ ಅಬ್ದುಲ್ ಮತೀನ್ ತಾಹಾ ಸೂಚನೆ ಮೇರೆಗೆ ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಸ್ಫೋಟಕ್ಕೆ ಷರೀಫ್ ಸಂಚು ರೂಪಿಸಿದ್ದ ಎಂಬುದು ಗೊತ್ತಾಗಿದೆ. ಈ ಹಿಂದೆ ನಡೆದ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಪೋಟದ ಪ್ರಯೋಗ ಹಾಗೂ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲೂ ಈತ ಸಹಕಾರ ನೀಡಿದ್ದ. ಈ ಸಹಾಯಕ್ಕಾಗಿ ತಲೆಮರೆಸಿಕೊಂಡಿರುವ ಶಂಕಿತರಿಂದ ಹಣ ಪಡೆದುಕೊಂಡಿದ್ದ. ಅದಕ್ಕೆ ಪೂರಕ ಸಾಕ್ಷ್ಯಾಧಾರಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ.