‘ಆಭರಣಗಳನ್ನು ಮಾರಲು ಇದೇ 2ರಂದು ಮಾಗಡಿ ಮುಖ್ಯರಸ್ತೆಗೆ ಬಂದಿದ್ದ ಆರೋಪಿ, ಮಹಾವೀರ್ ಜ್ಯುವೆಲ್ಸ್ ಮಳಿಗೆ ಬಳಿ ನಿಂತಿದ್ದ. ಆತನ ವರ್ತನೆ ಬಗ್ಗೆ ಅನುಮಾನಗೊಂಡ ಗಸ್ತಿನಲ್ಲಿದ್ದ ಹೆಡ್ ಕಾನ್ಸ್ಟೆಬಲ್ ಶರಣಪ್ಪ ಹಾಗೂ ಕಾನ್ಸ್ಟೆಬಲ್ ಅರ್ಜುನ್ ಕಾಂಬಳೆ, ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಅವಾಗಲೇ ಆರೋಪಿ, ಕಳ್ಳತನ ಮಾಡಿದ್ದ ಸಂಗತಿ ಬಾಯ್ಬಿಟ್ಟ’ ಎಂದು ಮಾಹಿತಿ ನೀಡಿದರು.