<p><strong>ಬೆಂಗಳೂರು:</strong> ‘ಆಡಳಿತ ನಡೆಸುತ್ತಿರುವ ಸರ್ಕಾರಗಳು ಬಡತನ ನಿರ್ಮೂಲನೆ ಯತ್ತ ಚಿತ್ತ ಹರಿಸದೆ ಮಂದಿರ, ಮಸೀದಿಯತ್ತ ಓಡುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಈ ವ್ಯವಸ್ಥೆಯ ಬಗ್ಗೆ ಎಲ್ಲೆಡೆ ಅಸಮಾಧಾನವಿದೆ’ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಹೇಳಿದರು.</p>.<p>ಭಾರತ ಯಾತ್ರಾ ಕೇಂದ್ರ, ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಮಂಗಳವಾರ ಹಮ್ಮಿಕೊಂಡಿದ್ದ ಜಯ<br />ಪ್ರಕಾಶ್ ನಾರಾಯಣ್–121 ಸಮಾರಂಭ<br />ದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರಿಗೆ ‘ಜೆ.ಪಿ.ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ಬಡತನ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿಲ್ಲ. ಕೋವಿಡ್ ನಂತರವಂತೂ ಈ ಅಂತರ ಹೆಚ್ಚಾಗಿದೆ. ಮತ್ತೊಂದು ಕಡೆ ಭಾರತದ ಶ್ರೀಮಂತರು ವಿಶ್ವದ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಅವರಿಗೆ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರವಿದೆ. ಜಮೀನು, ಅರಣ್ಯ, ನದಿ ಪಾತ್ರಗಳನ್ನೂ ಅವರಿಗೆ ಧಾರೆ ಎರೆಯಲಾಗುತ್ತಿದೆ. ಅದಕ್ಕಾಗಿ ಪ್ರಜಾಪ್ರಭುತ್ವವನ್ನೇ ಬಲಿ<br />ಕೊಡಲಾಗುತ್ತಿದೆ’ ಎಂದು ಕಳವಳ<br />ವ್ಯಕ್ತಪಡಿಸಿದರು.</p>.<p>‘ವ್ಯವಸ್ಥೆ ಪ್ರಶ್ನಿಸುವ ನಿಷ್ಠೂರತೆ, ಸವಾಲುಗಳನ್ನು ಹಾಕುವ ದೃಢತೆಯನ್ನು ಸಾಮಾನ್ಯ ಜನರೂ ಬೆಳೆಸಿಕೊಳ್ಳಬೇಕು.<br />ಮತದಾನದ ಹಕ್ಕು ಚಲಾಯಿಸುವುದಷ್ಟೇ ಜನರು ಸೀಮಿತವಾಗಬಾರದು,<br />ಅಧಿಕಾರಕ್ಕೇರಿದ ಸರ್ಕಾರ, ನಮ್ಮ ಸುತ್ತಲ ಸಮಾಜ ಹೇಗೆ ಸಾಗುತ್ತಿದೆ ಎನ್ನುವ ಅರಿವು ಹೊಂದಬೇಕು. ಜನರು ಪ್ರಶ್ನಿಸುವ, ಹೋರಾಟ ಮಾಡುವ ಮನೋಭಾವ ಕಳೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.</p>.<p>‘ಬಳ್ಳಾರಿಯಲ್ಲಿ 25 ಸಾವಿರ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿ<br />ದ್ದಾರೆ. ಸರ್ಕಾರ ಅದನ್ನು ಹಳೆಯ ಸಮಸ್ಯೆ ಎನ್ನುತ್ತದೆ. ರಾಮಮಂದಿರ ವಿವಾದ ಹೊಸ ಸಮಸ್ಯೆಯೇ? ಮಂದಿರ ಸಮಸ್ಯೆ ಬಗೆಹರಿಸುವ ಮನಸ್ಸು ಮಾಡುವ ಸರ್ಕಾರಗಳಿಗೆ ಕೂಲಿ ಕಾರ್ಮಿಕರ ಸಮಸ್ಯೆಗಳು ಗೌಣವಾಗಿವೆಯೇ’ ಎಂದು ಪ್ರಶ್ನಿಸಿದರು.</p>.<p>‘ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯ ಘೋಷಣೆಗಳು ಹಿಂದೆ ನಾವೆಲ್ಲ ಬಳಸಿದವುಗಳು. ಅವರ ಯಾತ್ರೆ ರಾಜಕೀಯ ಕಾರಣಗಳಿಗಾಗಿ ನಡೆಯುತ್ತಿದೆ. ಜನರು ಅಂತಹ ಸಣ್ಣಸಣ್ಣ ಯಾತ್ರೆಗಳನ್ನು ತಮ್ಮ ಮಟ್ಟದಲ್ಲೇ ನಡೆಸಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬೇಕು’ ಎಂದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ‘ಜಯಪ್ರಕಾಶ್ ನಾರಾಯಣ್ ಅವರದು ನಿಸ್ವಾರ್ಥ ಚಳವಳಿ. ಅವರ ಹೋರಾಟದ ಪ್ರವಾಹದಲ್ಲಿ ಈಜಿದ ಎಲ್ಲರೂ<br />ರಾಜಕಾರಣದಲ್ಲಿ ಬೆಳೆದರು. ಆದರೆ, ಜೆಪಿ ಮಾತ್ರ ಎಂದೂ ಅಧಿಕಾರ ಬಯಸಲಿಲ್ಲ’ ಎಂದು ಸ್ಮರಿಸಿದರು.</p>.<p>ಮಾಜಿ ಶಾಸಕ ಬಿ.ಆರ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಸಾಮಾಜಿಕ ಹೋರಾಟಗಾರ ಎಚ್.ಕೆ.ವಿವೇಕಾನಂದ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಆಡಳಿತ ನಡೆಸುತ್ತಿರುವ ಸರ್ಕಾರಗಳು ಬಡತನ ನಿರ್ಮೂಲನೆ ಯತ್ತ ಚಿತ್ತ ಹರಿಸದೆ ಮಂದಿರ, ಮಸೀದಿಯತ್ತ ಓಡುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಈ ವ್ಯವಸ್ಥೆಯ ಬಗ್ಗೆ ಎಲ್ಲೆಡೆ ಅಸಮಾಧಾನವಿದೆ’ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಹೇಳಿದರು.</p>.<p>ಭಾರತ ಯಾತ್ರಾ ಕೇಂದ್ರ, ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಮಂಗಳವಾರ ಹಮ್ಮಿಕೊಂಡಿದ್ದ ಜಯ<br />ಪ್ರಕಾಶ್ ನಾರಾಯಣ್–121 ಸಮಾರಂಭ<br />ದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅವರಿಗೆ ‘ಜೆ.ಪಿ.ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>‘ಬಡತನ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿಲ್ಲ. ಕೋವಿಡ್ ನಂತರವಂತೂ ಈ ಅಂತರ ಹೆಚ್ಚಾಗಿದೆ. ಮತ್ತೊಂದು ಕಡೆ ಭಾರತದ ಶ್ರೀಮಂತರು ವಿಶ್ವದ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಅವರಿಗೆ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರವಿದೆ. ಜಮೀನು, ಅರಣ್ಯ, ನದಿ ಪಾತ್ರಗಳನ್ನೂ ಅವರಿಗೆ ಧಾರೆ ಎರೆಯಲಾಗುತ್ತಿದೆ. ಅದಕ್ಕಾಗಿ ಪ್ರಜಾಪ್ರಭುತ್ವವನ್ನೇ ಬಲಿ<br />ಕೊಡಲಾಗುತ್ತಿದೆ’ ಎಂದು ಕಳವಳ<br />ವ್ಯಕ್ತಪಡಿಸಿದರು.</p>.<p>‘ವ್ಯವಸ್ಥೆ ಪ್ರಶ್ನಿಸುವ ನಿಷ್ಠೂರತೆ, ಸವಾಲುಗಳನ್ನು ಹಾಕುವ ದೃಢತೆಯನ್ನು ಸಾಮಾನ್ಯ ಜನರೂ ಬೆಳೆಸಿಕೊಳ್ಳಬೇಕು.<br />ಮತದಾನದ ಹಕ್ಕು ಚಲಾಯಿಸುವುದಷ್ಟೇ ಜನರು ಸೀಮಿತವಾಗಬಾರದು,<br />ಅಧಿಕಾರಕ್ಕೇರಿದ ಸರ್ಕಾರ, ನಮ್ಮ ಸುತ್ತಲ ಸಮಾಜ ಹೇಗೆ ಸಾಗುತ್ತಿದೆ ಎನ್ನುವ ಅರಿವು ಹೊಂದಬೇಕು. ಜನರು ಪ್ರಶ್ನಿಸುವ, ಹೋರಾಟ ಮಾಡುವ ಮನೋಭಾವ ಕಳೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.</p>.<p>‘ಬಳ್ಳಾರಿಯಲ್ಲಿ 25 ಸಾವಿರ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿ<br />ದ್ದಾರೆ. ಸರ್ಕಾರ ಅದನ್ನು ಹಳೆಯ ಸಮಸ್ಯೆ ಎನ್ನುತ್ತದೆ. ರಾಮಮಂದಿರ ವಿವಾದ ಹೊಸ ಸಮಸ್ಯೆಯೇ? ಮಂದಿರ ಸಮಸ್ಯೆ ಬಗೆಹರಿಸುವ ಮನಸ್ಸು ಮಾಡುವ ಸರ್ಕಾರಗಳಿಗೆ ಕೂಲಿ ಕಾರ್ಮಿಕರ ಸಮಸ್ಯೆಗಳು ಗೌಣವಾಗಿವೆಯೇ’ ಎಂದು ಪ್ರಶ್ನಿಸಿದರು.</p>.<p>‘ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯ ಘೋಷಣೆಗಳು ಹಿಂದೆ ನಾವೆಲ್ಲ ಬಳಸಿದವುಗಳು. ಅವರ ಯಾತ್ರೆ ರಾಜಕೀಯ ಕಾರಣಗಳಿಗಾಗಿ ನಡೆಯುತ್ತಿದೆ. ಜನರು ಅಂತಹ ಸಣ್ಣಸಣ್ಣ ಯಾತ್ರೆಗಳನ್ನು ತಮ್ಮ ಮಟ್ಟದಲ್ಲೇ ನಡೆಸಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬೇಕು’ ಎಂದರು.</p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ‘ಜಯಪ್ರಕಾಶ್ ನಾರಾಯಣ್ ಅವರದು ನಿಸ್ವಾರ್ಥ ಚಳವಳಿ. ಅವರ ಹೋರಾಟದ ಪ್ರವಾಹದಲ್ಲಿ ಈಜಿದ ಎಲ್ಲರೂ<br />ರಾಜಕಾರಣದಲ್ಲಿ ಬೆಳೆದರು. ಆದರೆ, ಜೆಪಿ ಮಾತ್ರ ಎಂದೂ ಅಧಿಕಾರ ಬಯಸಲಿಲ್ಲ’ ಎಂದು ಸ್ಮರಿಸಿದರು.</p>.<p>ಮಾಜಿ ಶಾಸಕ ಬಿ.ಆರ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಸಾಮಾಜಿಕ ಹೋರಾಟಗಾರ ಎಚ್.ಕೆ.ವಿವೇಕಾನಂದ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>