‘ವ್ಯವಸ್ಥೆ ಪ್ರಶ್ನಿಸುವ ನಿಷ್ಠೂರತೆ, ಸವಾಲುಗಳನ್ನು ಹಾಕುವ ದೃಢತೆಯನ್ನು ಸಾಮಾನ್ಯ ಜನರೂ ಬೆಳೆಸಿಕೊಳ್ಳಬೇಕು.
ಮತದಾನದ ಹಕ್ಕು ಚಲಾಯಿಸುವುದಷ್ಟೇ ಜನರು ಸೀಮಿತವಾಗಬಾರದು,
ಅಧಿಕಾರಕ್ಕೇರಿದ ಸರ್ಕಾರ, ನಮ್ಮ ಸುತ್ತಲ ಸಮಾಜ ಹೇಗೆ ಸಾಗುತ್ತಿದೆ ಎನ್ನುವ ಅರಿವು ಹೊಂದಬೇಕು. ಜನರು ಪ್ರಶ್ನಿಸುವ, ಹೋರಾಟ ಮಾಡುವ ಮನೋಭಾವ ಕಳೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.