ಬೆಂಗಳೂರು: ಸೀಗೆಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಚ್ಚಿನಿಂದ ಕುರಿಯ ಶಿರಚ್ಛೇದ ಮಾಡಲಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿಡಿಯೊ ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು, ಸ್ಥಳೀಯರನ್ನು ವಿಚಾರಣೆ ನಡೆಸುತ್ತಿದ್ದಾರೆ.
‘ಸೀಗೆಹಳ್ಳಿಯಲ್ಲಿ ಇತ್ತೀಚೆಗೆ ಊರ ಹಬ್ಬವಿತ್ತು. ಹರಕೆ ಹೊತ್ತಿದ್ದ ಜನರು, ಕುರಿಗಳನ್ನು ಬಲಿ ಕೊಟ್ಟಿರುವುದಾಗಿ ಗೊತ್ತಾಗಿದೆ. ವ್ಯಕ್ತಿಯೊಬ್ಬ, ಪಂಚಾಯಿತಿ ಕಚೇರಿ ಎದುರೇ ಕುರಿಯೊಂದರ ಶಿರಚ್ಛೇದ ಮಾಡಿದ್ದಾನೆ. ಇದೇ ವಿಡಿಯೊವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿರುವ ಸ್ಥಳೀಯರೊಬ್ಬರು, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.