‘ಟಿಪ್ಪು ಸುಲ್ತಾನ್ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಇಂತಹ ಮಹಾನ್ ವ್ಯಕ್ತಿಯ ಆಚರಣೆಯನ್ನು ಸರ್ಕಾರ ಏಕಾಏಕಿ ನಿಷೇಧಿಸಿರುವುದು ನಿಜಕ್ಕೂ ಖಂಡನೀಯ.ಮುಖ್ಯಮಂತ್ರಿಗಳ ಆದೇಶಕ್ಕೆ ಪ್ರಗತಿಪರ ಸಂಘಟನೆಗಳು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಈ ಆದೇಶ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎನ್.ವಿ.ನರಸಿಂಹಯ್ಯ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.