ಮಲ್ಲೇಶ್ವರ ನಿವಾಸಿಯೊಬ್ಬರು ಜೆ.ಪಿ. ನಗರದ ಶಾಂತಿ ಸಾಗರ್ ಹೋಟೆಲ್ ಮುಂಭಾಗದಲ್ಲಿ ಶನಿವಾರ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನವನ್ನು ಜಯನಗರ ಸಂಚಾರ ಪೊಲೀಸ್ ಠಾಣೆಯ ಟೋಯಿಂಗ್ ಸಿಬ್ಬಂದಿ ಎಳೆದೊಯ್ದಿದ್ದರು. ಟೋಯಿಂಗ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದ ವಾಹನ ಮಾಲೀಕರು, ದ್ವಿಚಕ್ರ ವಾಹನವನ್ನು ಬಿಡುವಂತೆ ಮನವಿ ಮಾಡಿದ್ದರು. ‘₹ 1,150 ದಂಡ ಶುಲ್ಕವಿದೆ. ದಂಡವಿಲ್ಲದೇ ವಾಹನ ಬಿಟ್ಟುಕೊಡಲು ₹ 800 ಲಂಚ ನೀಡಬೇಕು’ ಎಂದು ಟೋಯಿಂಗ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದರು. ಈ ಕುರಿತು ವಾಹನ ಮಾಲೀಕರು ಎಸಿಬಿಯ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.