<p><strong>ಬೆಂಗಳೂರು</strong>: ಬೆಂಗಳೂರು–ದಿಂಡಿಗಲ್ವರೆಗಿರುವ ಹೆದ್ದಾರಿಯಲ್ಲಿ ಸೋಮನಹಳ್ಳಿ ಬಳಿ ನಿರ್ಮಿಸಿರುವ ಟೋಲ್ನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶುಲ್ಕ ಸಂಗ್ರಹಿಸುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹಾರೋಹಳ್ಳಿ ತಾಲ್ಲೂಕು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>‘ರಾಷ್ಟ್ರೀಯ ಹೆದ್ದಾರಿ ಕಾಯ್ದೆ 2024ರ ಪ್ರಕಾರ ಟೋಲ್ನಿಂದ 20 ಕಿ.ಮೀ ಸುತ್ತಮುತ್ತಲಿನ ಸ್ಥಳೀಯರಿಂದ ಶುಲ್ಕ ಸಂಗ್ರಹಿಸದಂತೆ ಆದೇಶವಿದ್ದರೂ ಟೋಲ್ ಗುತ್ತಿಗದಾರರು ಹಾರೋಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶುಲ್ಕ ಸಂಗ್ರಹಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.</p>.<p>ಹಾರೋಹಳ್ಳಿ, ಮರಳವಾಡಿ ಸೇರಿದಂತೆ ಟೋಲ್ ಸುತ್ತಮುತ್ತಲಿರುವ ಗ್ರಾಮಸ್ಥರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ಮುಚ್ಚಿರುವ ಟೋಲ್ ಸಮೀಪದ ಬಿಡಬ್ಲ್ಯುಎಸ್ಎಸ್ಬಿ ರಸ್ತೆಯನ್ನು ತೆರವುಗೊಳಿಸಬೇಕು. ಟೋಲ್ನಲ್ಲಿ ಸಿಬ್ಬಂದಿ ನಿಯೋಜಿಸುವ ಮೊದಲು ಪೊಲೀಸ್ ಠಾಣೆಯಲ್ಲಿ ಆ ವ್ಯಕ್ತಿಯ ವಿವರವನ್ನು ಪಡೆದುಕೊಳ್ಳಬೇಕು. ಹಾರೋಹಳ್ಳಿ ಮಾರ್ಗದಲ್ಲಿ ಸರ್ವೀಸ್ ರಸ್ತೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.</p>.<p>‘ಬೇಡಿಕೆಗಳು ಈಡೇರದಿದ್ದರೆ ಜೂನ್ 18ರಂದು ಹಾರೋಹಳ್ಳಿಯಿಂದ ಸೋಮನಹಳ್ಳಿ ಟೋಲ್ ಮೂಲಕ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಲಾಗುತ್ತದೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.</p>.<p>ಪ್ರತಿಭಟನೆಯಲ್ಲಿ ಸಮತಾ ಸೈನಿಕದಳ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಜಿ.ಗೋವಿಂದ ನಾಯ್ಕ್, ಕೆಬ್ಬೆದೊಡ್ಡಿ ಗೋವಿಂದ, ಸುರೇಶ್, ಹಾರೋಹಳ್ಳಿ ಚಂದ್ರು, ರುದ್ರೇಶ್ ಬೆಣದಕಲ್ಲುದೊಡ್ಡಿ, ಮರಳವಾಡಿ ಮಂಜು, ಬನಶಂಕರಿ ನಾಗು ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೆಂಗಳೂರು–ದಿಂಡಿಗಲ್ವರೆಗಿರುವ ಹೆದ್ದಾರಿಯಲ್ಲಿ ಸೋಮನಹಳ್ಳಿ ಬಳಿ ನಿರ್ಮಿಸಿರುವ ಟೋಲ್ನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶುಲ್ಕ ಸಂಗ್ರಹಿಸುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹಾರೋಹಳ್ಳಿ ತಾಲ್ಲೂಕು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.</p>.<p>‘ರಾಷ್ಟ್ರೀಯ ಹೆದ್ದಾರಿ ಕಾಯ್ದೆ 2024ರ ಪ್ರಕಾರ ಟೋಲ್ನಿಂದ 20 ಕಿ.ಮೀ ಸುತ್ತಮುತ್ತಲಿನ ಸ್ಥಳೀಯರಿಂದ ಶುಲ್ಕ ಸಂಗ್ರಹಿಸದಂತೆ ಆದೇಶವಿದ್ದರೂ ಟೋಲ್ ಗುತ್ತಿಗದಾರರು ಹಾರೋಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶುಲ್ಕ ಸಂಗ್ರಹಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.</p>.<p>ಹಾರೋಹಳ್ಳಿ, ಮರಳವಾಡಿ ಸೇರಿದಂತೆ ಟೋಲ್ ಸುತ್ತಮುತ್ತಲಿರುವ ಗ್ರಾಮಸ್ಥರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ಮುಚ್ಚಿರುವ ಟೋಲ್ ಸಮೀಪದ ಬಿಡಬ್ಲ್ಯುಎಸ್ಎಸ್ಬಿ ರಸ್ತೆಯನ್ನು ತೆರವುಗೊಳಿಸಬೇಕು. ಟೋಲ್ನಲ್ಲಿ ಸಿಬ್ಬಂದಿ ನಿಯೋಜಿಸುವ ಮೊದಲು ಪೊಲೀಸ್ ಠಾಣೆಯಲ್ಲಿ ಆ ವ್ಯಕ್ತಿಯ ವಿವರವನ್ನು ಪಡೆದುಕೊಳ್ಳಬೇಕು. ಹಾರೋಹಳ್ಳಿ ಮಾರ್ಗದಲ್ಲಿ ಸರ್ವೀಸ್ ರಸ್ತೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.</p>.<p>‘ಬೇಡಿಕೆಗಳು ಈಡೇರದಿದ್ದರೆ ಜೂನ್ 18ರಂದು ಹಾರೋಹಳ್ಳಿಯಿಂದ ಸೋಮನಹಳ್ಳಿ ಟೋಲ್ ಮೂಲಕ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಲಾಗುತ್ತದೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.</p>.<p>ಪ್ರತಿಭಟನೆಯಲ್ಲಿ ಸಮತಾ ಸೈನಿಕದಳ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಜಿ.ಗೋವಿಂದ ನಾಯ್ಕ್, ಕೆಬ್ಬೆದೊಡ್ಡಿ ಗೋವಿಂದ, ಸುರೇಶ್, ಹಾರೋಹಳ್ಳಿ ಚಂದ್ರು, ರುದ್ರೇಶ್ ಬೆಣದಕಲ್ಲುದೊಡ್ಡಿ, ಮರಳವಾಡಿ ಮಂಜು, ಬನಶಂಕರಿ ನಾಗು ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>