<p><strong>ಬೆಂಗಳೂರು:</strong> ಕೇಂದ್ರ ಬಜೆಟ್ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ ಮಾಡಿರುವುದನ್ನು ಅಖಿಲ ಭಾರತ ಶ್ರೀಗಂಧ ಬೆಳೆಗಾರರು ಹಾಗೂ ಮರ ಸಂಸ್ಕೃತಿ ಸಂಘಟನೆ (ಎಐಎಸ್ಜಿಟಿಎ) ಸ್ವಾಗತಿಸಿದೆ.</p>.<p>ಭಾರತದಲ್ಲಿ ಶ್ರೀಗಂಧ ಹಾಗೂ ವೃಕ್ಷ ಕೃಷಿಯ ಆರ್ಥಿಕ, ಪರಿಸರ ಹಾಗೂ ಜೀವನೋಪಾಯ ಸಾಮರ್ಥ್ಯವನ್ನು ಉತ್ತೇಜಿಸುವ ಕ್ರಮ ಇದಾಗಿದೆ. ಸುಸ್ಥಿರ ಕೃಷಿಯೊಂದಿಗೆ ಶ್ರೀಗಂಧದ ಮರ ಬೆಳೆಯಲು ಹಾಗೂ ಗ್ರಾಮೀಣ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗಲಿದೆ ಎಂದು ಸಂಘಟನೆ ಅಧ್ಯಕ್ಷ ಕೆ. ಅಮರನಾರಾಯಣ ತಿಳಿಸಿದ್ದಾರೆ.</p>.<p>ಶ್ರೀಗಂಧ ಕ್ಷೇತ್ರದಲ್ಲಿ ಇರುವ ನಿಯಂತ್ರಣ ಹಾಗೂ ಮಾರುಕಟ್ಟೆ ಸಂಬಂಧಿತ ಸವಾಲುಗಳನ್ನು ಸರಳೀಕರಿಸಿ ಪರಿಸರ ಸಂರಕ್ಷಣೆ, ಕಾರ್ಬನ್ ಸಂಗ್ರಹಣೆ, ರೈತರ ದೀರ್ಘಕಾಲೀನ ಭದ್ರತೆಗೂ ಕೊಡುಗೆ ನೀಡಲಿದೆ ಎಂದು ತಿಳಿಸಿದ್ದಾರೆ.</p>.<p>‘ಶ್ರೀಗಂಧ ನೀತಿಯನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ನಾವೂ ಸಹಕಾರ ನೀಡುತ್ತೇವೆ. ಭಾರತವು ಶ್ರೀಗಂಧ ಉತ್ಪಾದನೆಯಲ್ಲಿ ಜಾಗತಿಕ ನಾಯಕತ್ವ ಸಾಧಿಸುವಂತೆ ನೀತಿ ನಿರ್ಧಾರಗಳನ್ನು ನಿರಂತರ ಸಂವಾದದ ಮೂಲಕ ಜಾರಿಗೊಳಿಸಬೇಕು’ ಎಂದು ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೇಂದ್ರ ಬಜೆಟ್ನಲ್ಲಿ ಶ್ರೀಗಂಧ ಕೃಷಿ ನೀತಿ ಘೋಷಣೆ ಮಾಡಿರುವುದನ್ನು ಅಖಿಲ ಭಾರತ ಶ್ರೀಗಂಧ ಬೆಳೆಗಾರರು ಹಾಗೂ ಮರ ಸಂಸ್ಕೃತಿ ಸಂಘಟನೆ (ಎಐಎಸ್ಜಿಟಿಎ) ಸ್ವಾಗತಿಸಿದೆ.</p>.<p>ಭಾರತದಲ್ಲಿ ಶ್ರೀಗಂಧ ಹಾಗೂ ವೃಕ್ಷ ಕೃಷಿಯ ಆರ್ಥಿಕ, ಪರಿಸರ ಹಾಗೂ ಜೀವನೋಪಾಯ ಸಾಮರ್ಥ್ಯವನ್ನು ಉತ್ತೇಜಿಸುವ ಕ್ರಮ ಇದಾಗಿದೆ. ಸುಸ್ಥಿರ ಕೃಷಿಯೊಂದಿಗೆ ಶ್ರೀಗಂಧದ ಮರ ಬೆಳೆಯಲು ಹಾಗೂ ಗ್ರಾಮೀಣ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗಲಿದೆ ಎಂದು ಸಂಘಟನೆ ಅಧ್ಯಕ್ಷ ಕೆ. ಅಮರನಾರಾಯಣ ತಿಳಿಸಿದ್ದಾರೆ.</p>.<p>ಶ್ರೀಗಂಧ ಕ್ಷೇತ್ರದಲ್ಲಿ ಇರುವ ನಿಯಂತ್ರಣ ಹಾಗೂ ಮಾರುಕಟ್ಟೆ ಸಂಬಂಧಿತ ಸವಾಲುಗಳನ್ನು ಸರಳೀಕರಿಸಿ ಪರಿಸರ ಸಂರಕ್ಷಣೆ, ಕಾರ್ಬನ್ ಸಂಗ್ರಹಣೆ, ರೈತರ ದೀರ್ಘಕಾಲೀನ ಭದ್ರತೆಗೂ ಕೊಡುಗೆ ನೀಡಲಿದೆ ಎಂದು ತಿಳಿಸಿದ್ದಾರೆ.</p>.<p>‘ಶ್ರೀಗಂಧ ನೀತಿಯನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ನಾವೂ ಸಹಕಾರ ನೀಡುತ್ತೇವೆ. ಭಾರತವು ಶ್ರೀಗಂಧ ಉತ್ಪಾದನೆಯಲ್ಲಿ ಜಾಗತಿಕ ನಾಯಕತ್ವ ಸಾಧಿಸುವಂತೆ ನೀತಿ ನಿರ್ಧಾರಗಳನ್ನು ನಿರಂತರ ಸಂವಾದದ ಮೂಲಕ ಜಾರಿಗೊಳಿಸಬೇಕು’ ಎಂದು ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>