ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಆರ್.ಪುರ: ಅನಧಿಕೃತ ಸ್ವಾಗತ ಕಮಾನು ತೆರವು

Published 25 ಮೇ 2024, 16:26 IST
Last Updated 25 ಮೇ 2024, 16:26 IST
ಅಕ್ಷರ ಗಾತ್ರ

ಕೆ.ಆರ್.ಪುರ: ರಾಜಕಾಲುವೆ ಅಂಚಿನಲ್ಲಿ ಬಫರ್‌ ವಲಯದ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಸ್ವಾಗತ ಕಮಾನು ಅನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದರು.

ಎ.ನಾರಾಯಣಪುರ ವಾರ್ಡ್‌ನ ಟಿನ್ ಫ್ಯಾಕ್ಟರಿ ಮುಖ್ಯರಸ್ತೆಯಿಂದ ಉದಯನಗರಕ್ಕೆ ಪ್ರವೇಶಿಸುವ ಮುಖ್ಯದ್ವಾರದಲ್ಲಿ ರಾಜಕಾಲುವೆ ಅಂಚಿನಲ್ಲಿ ಉದಯನಗರಕ್ಕೆ ಸ್ವಾಗತ ಕೋರುವ ಕಮಾನು ಅನ್ನು ಅನಧಿಕೃತವಾಗಿ ನಿರ್ಮಾಣ ಮಾಡಲಾಗಿತ್ತು.

ಉದಯನಗರಕ್ಕೆ ಒಳ ಪ್ರವೇಶಿಸುವ ಬಫರ್‌ ವಲಯ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಮಾನು ತೆರವು ಮಾಡುವಂತೆ ಹೈಕೋರ್ಟ್ ಅದೇಶದ ಮೇರೆಗೆ ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT