<p><strong>ಬೆಂಗಳೂರು:</strong> ವಾರ್ಡ್ ಮರು ವಿಂಗಡಣೆ ಬಳಿಕ ಹಲವು ವಾರ್ಡ್ಗಳು ಕಲಸು ಮೋಲೋಗರವಾಗಿದ್ದು, ಬೈರಸಂದ್ರ, ತಿಲಕನಗರ ವಾರ್ಡ್ಗಳನ್ನು ಚಿತ್ರ– ವಿಚಿತ್ರವಾಗಿ ವಿಭಾಗಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಜಯನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿನಈವಾರ್ಡ್ನಲ್ಲಿ ನಿರ್ದಿಷ್ಟ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಯನ್ನು ಉದ್ದೇಶಪೂರ್ವಕವಾಗಿಯೇ ಪಕ್ಕದ ತಿಲಕನಗರಕ್ಕೆ ಸೇರಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<p>ಬೈರಸಂದ್ರ ಮತ್ತು ತಿಲಕನಗರ ವಾರ್ಡ್ಗಳ ಈ ಹಿಂದಿನ ಮತ್ತು ಮರು ವಿಂಗಡಣೆ ಬಳಿಕದ ನಕ್ಷೆಯನ್ನು ಗಮನಿಸಿದರೆ ಎಷ್ಟು ಅವೈಜ್ಞಾನಿಕವಾಗಿ ವಿಂಗಡಿಸಲಾಗಿದೆ ಎಂಬುದು<br />ಅರ್ಥವಾಗುತ್ತದೆ ಎಂದು ಅವರು ಹೇಳುತ್ತಾರೆ.</p>.<p>‘ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಬೈರಸಂದ್ರ ಗ್ರಾಮವನ್ನೇ ವಿಭಾಗ ಮಾಡಲಾಗಿದೆ. ಎಲ್ಐಸಿ ಕಾಲೊನಿ, ಬಿಸಿಸಿ ಲೇಔಟ್ ಅನ್ನೂ ವಿಭಾಗಿಸಲಾಗಿದೆ. ನಿರ್ದಿಷ್ಟ ಸಮುದಾಯ ವಾಸ ಮಾಡುವ ಮನೆಗಳನ್ನು ಬೈರಸಂದ್ರ ವಾರ್ಡ್ನಿಂದ ಹೊರಗಿಡಲು ಹಲವು ರೀತಿಯ ಸರ್ಕಸ್<br />ಗಳನ್ನು ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಬಾಂಧವ ನಾಗರಾಜ್ ಹೇಳಿದರು.</p>.<p>‘ನಮ್ಮ ವಾರ್ಡ್ನಲ್ಲಿ ಸುಸ್ಥಿತಿಯಲ್ಲಿದ್ದ ಪಾರ್ಕ್ಗಳು, ಕಿತ್ತೂರುರಾಣಿ ಚೆನ್ನಮ್ಮ ಕ್ರೀಡಾಂಗಣಗಳನ್ನು ಕಸಿದುಕೊಳ್ಳಲಾಗಿದೆ. ಅಧಿಕಾರ ಇದೆ ಎಂಬ ಕಾರಣಕ್ಕೆ ಈ ರೀತಿ ಅನ್ಯಾಯ ಮಾಡಬಾರದು. ಸಾಮಾನ್ಯ ಜನ ಇದರಿಂದ ಸಮಸ್ಯೆ ಅನುಭವಿಸಬೇಕಾಗುತ್ತದೆ’ ಎಂದು ಅವರು ಕಣ್ಣೀರು ಹಾಕಿದರು.</p>.<p>‘ಮರು ವಿಂಗಡಣೆ ವರದಿ ಸಂಸದ ತೇಜಸ್ವಿಸೂರ್ಯ ಅವರ ಕಚೇರಿಯಲ್ಲಿ ಸಿದ್ಧವಾಗಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟಕ್ಕೆ ನಿವಾಸಿಗಳು ಸಜ್ಜಾಗಿದ್ದಾರೆ’ ಎಂದು ಹೇಳಿದರು.</p>.<p>‘ಎಚ್ಸಿಎಲ್ ಅಸೋಸಿಯೇಷನ್ನ 600 ಮನೆಗಳಿದ್ದು, ಅವುಗಳಲ್ಲಿ 100 ಮನೆಗಳನ್ನು ತಿಲಕನಗರ ವಾರ್ಡ್ಗೆ ಸೇರಿಸಲಾಗಿದೆ. ನಾವು ನಾಗರಿಕ ಸೇವೆ ಪಡೆಯಬೇಕೆಂದರೆ ಎರಡು ಕಿಲೋ ಮೀಟರ್ ದೂರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ರೀತಿಯ ಮೋಸದ ಕೆಲಸವನ್ನು ಯಾರೂ ಮಾಡಬಾರದು’ ಎಂದು ಅಸೋಸಿಯೇಷನ್ ಅಧ್ಯಕ್ಷ ಬಾಬುರಾವ್ ಬೇಸರ ವ್ಯಕ್ತಪಡಿಸಿದರು.</p>.<p><strong>ಹೊಸ ನಾಲ್ಕು ಗ್ರಾಮಗಳು ಸೇರ್ಪಡೆ</strong></p>.<p>ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ನಾಲ್ಕು ಗ್ರಾಮಗಳು ಸೇರ್ಪಡೆಯಾಗಿವೆ. ವಾರ್ಡ್ಗಳ ಮರುವಿಂಗಡಣೆಯಿಂದ ಈ ಬದಲಾವಣೆಯಾಗಿದ್ದು, ಸುಮಾರು ಒಂಬತ್ತು ಸಾವಿರ ಆಸ್ತಿಗಳು ಪಾಲಿಕೆಯ ತೆರಿಗೆ ವ್ಯಾಪ್ತಿಗೆ ಬರಲಿವೆ.</p>.<p>ಈ ಗ್ರಾಮಗಳ ಸೇರ್ಪಡೆ ಬಗ್ಗೆ ಅಧಿಸೂಚನೆಯನ್ನು ಕಳೆದ ವರ್ಷವೇ ಹೊರಡಿಸಲಾಗಿತ್ತು. ಆದರೆ, ಮೂಲಸೌಕರ್ಯಗಳ ಲಭ್ಯತೆಯ ಬಗ್ಗೆ ಬಿಬಿಎಂಪಿ ಈ ಪ್ರದೇಶಗಳ ಸಮೀಕ್ಷೆಯನ್ನು ಇನ್ನೂ ಕೈಗೊಳ್ಳಬೇಕಾಗಿದೆ.</p>.<p>‘ಕಮ್ಮಗೊಂಡನಹಳ್ಳಿ ವಾರ್ಡ್ಗೆ ಸೇರ್ಪಡೆಯಾಗಿರುವ ಲಕ್ಷ್ಮೀಪುರ ಗ್ರಾಮದ ಕಾನ್ಶಿರಾಮ್ ನಗರದಲ್ಲಿನ ಆಸ್ತಿಗಳ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಇದುವರೆಗೆ ಈ ಗ್ರಾಮದಲ್ಲಿನ 4,421 ಆಸ್ತಿಗಳನ್ನು ಗುರುತಿಸಲಾಗಿದೆ’ ಎಂದು ದಾಸರಹಳ್ಳಿ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಕಗ್ಗಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲು ಪ್ರದೇಶ ಗಳ ಸಮೀಕ್ಷೆ ಕಾರ್ಯ ಹೆಚ್ಚಿನ ಗತಿಯಾಗಿಲ್ಲ. ಈ ಪ್ರದೇಶಗಳನ್ನು ತಲಘಟ್ಟಪುರ ವಾರ್ಡ್ಗೆ ಸೇರಿಸಲಾಗಿದೆ ಎಂದರು.</p>.<p><br /><strong>‘ಎಲ್ಲಾ ಅನುಮಾನಗಳಿಗೆ ಉತ್ತರ ಇಲ್ಲ’</strong></p>.<p>‘ಮರು ವಿಂಗಡಣೆ ಕುರಿತ ಎಲ್ಲಾ ಅನುಮಾನಗಳಿಗೆ ಉತ್ತರ ಇಲ್ಲ, ಆಕ್ಷೇಪಣೆ ಸಲ್ಲಿಸಲು ಎಲ್ಲರಿಗೂ ಅವಕಾಶ ಇದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್ ಆದೇಶದಂತೆ 8 ವಾರಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಬೇಕಿದೆ. ಕೆಲವು ವಾರ್ಡ್ಗಳಿಗೆ ಇತಿಹಾಸ ಪುರುಷರ ಹೆಸರುಗಳನ್ನು ಇಡಲಾಗಿದೆ. ಸ್ಥಳೀಯರ ಭಾವನೆಗಳನ್ನು ಆಧರಿಸಿ ಈ ಹೆಸರುಗಳನ್ನು ಇಡಲು ಉದ್ದೇಶಿಸಲಾಗಿದೆ. ಎಲ್ಲಾ ವಾರ್ಡ್ಗಳಲ್ಲೂ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವುದು ಅಸಾಧ್ಯ. ಹೆಸರುಗಳು ಬೇಡ ಎಂದರೂ ಆಕ್ಷೇಪಣೆ ಸಲ್ಲಿಸಬಹುದು’ ಎಂದು ಹೇಳಿದರು.</p>.<p>‘ಆಕ್ಷೇಪಣೆಗಳನ್ನು ನಗರಾಭಿವೃದ್ಧಿ ಇಲಾಖೆಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆ ಆಗಿರುವುದರಿಂದ ಬಿಬಿಎಂಪಿ ವೆಬ್ಸೈಟ್ನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಇಲ್ಲ’ ಎಂದರು.</p>.<p>ಈ ಹಿಂದೆ ಇದ್ದ ವಾರ್ಡ್ನ ನಕ್ಷೆ, ಮರು ವಿಂಗಡಣೆಯಾದ ಬಳಿಕದ ನಕ್ಷೆ, ಜನಸಂಖ್ಯೆ, ವಾರ್ಡ್ನ ವಿಸ್ತೀರ್ಣ, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರ ಸೇರಿ ಎಲ್ಲಾ ವಿವರಗಳನ್ನೂ ವೆಬ್ಸೈಟ್(http://bbmpdelimitation2022.com) ನೀಡಲಾಗಿದೆ. ಕ್ಷೇತ್ರವಾರು, ವಾರ್ಡ್ವಾರು, ಪ್ರದೇಶವಾರು ಮಾಹಿತಿಗಳನ್ನು ಪಡೆದುಕೊಳ್ಳಲು ಅವಕಾಶ ಇದೆ. ವಿವರಗಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಒದಗಿಸಲಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಾರ್ಡ್ ಮರು ವಿಂಗಡಣೆ ಬಳಿಕ ಹಲವು ವಾರ್ಡ್ಗಳು ಕಲಸು ಮೋಲೋಗರವಾಗಿದ್ದು, ಬೈರಸಂದ್ರ, ತಿಲಕನಗರ ವಾರ್ಡ್ಗಳನ್ನು ಚಿತ್ರ– ವಿಚಿತ್ರವಾಗಿ ವಿಭಾಗಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಜಯನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿನಈವಾರ್ಡ್ನಲ್ಲಿ ನಿರ್ದಿಷ್ಟ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಯನ್ನು ಉದ್ದೇಶಪೂರ್ವಕವಾಗಿಯೇ ಪಕ್ಕದ ತಿಲಕನಗರಕ್ಕೆ ಸೇರಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<p>ಬೈರಸಂದ್ರ ಮತ್ತು ತಿಲಕನಗರ ವಾರ್ಡ್ಗಳ ಈ ಹಿಂದಿನ ಮತ್ತು ಮರು ವಿಂಗಡಣೆ ಬಳಿಕದ ನಕ್ಷೆಯನ್ನು ಗಮನಿಸಿದರೆ ಎಷ್ಟು ಅವೈಜ್ಞಾನಿಕವಾಗಿ ವಿಂಗಡಿಸಲಾಗಿದೆ ಎಂಬುದು<br />ಅರ್ಥವಾಗುತ್ತದೆ ಎಂದು ಅವರು ಹೇಳುತ್ತಾರೆ.</p>.<p>‘ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಬೈರಸಂದ್ರ ಗ್ರಾಮವನ್ನೇ ವಿಭಾಗ ಮಾಡಲಾಗಿದೆ. ಎಲ್ಐಸಿ ಕಾಲೊನಿ, ಬಿಸಿಸಿ ಲೇಔಟ್ ಅನ್ನೂ ವಿಭಾಗಿಸಲಾಗಿದೆ. ನಿರ್ದಿಷ್ಟ ಸಮುದಾಯ ವಾಸ ಮಾಡುವ ಮನೆಗಳನ್ನು ಬೈರಸಂದ್ರ ವಾರ್ಡ್ನಿಂದ ಹೊರಗಿಡಲು ಹಲವು ರೀತಿಯ ಸರ್ಕಸ್<br />ಗಳನ್ನು ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಬಾಂಧವ ನಾಗರಾಜ್ ಹೇಳಿದರು.</p>.<p>‘ನಮ್ಮ ವಾರ್ಡ್ನಲ್ಲಿ ಸುಸ್ಥಿತಿಯಲ್ಲಿದ್ದ ಪಾರ್ಕ್ಗಳು, ಕಿತ್ತೂರುರಾಣಿ ಚೆನ್ನಮ್ಮ ಕ್ರೀಡಾಂಗಣಗಳನ್ನು ಕಸಿದುಕೊಳ್ಳಲಾಗಿದೆ. ಅಧಿಕಾರ ಇದೆ ಎಂಬ ಕಾರಣಕ್ಕೆ ಈ ರೀತಿ ಅನ್ಯಾಯ ಮಾಡಬಾರದು. ಸಾಮಾನ್ಯ ಜನ ಇದರಿಂದ ಸಮಸ್ಯೆ ಅನುಭವಿಸಬೇಕಾಗುತ್ತದೆ’ ಎಂದು ಅವರು ಕಣ್ಣೀರು ಹಾಕಿದರು.</p>.<p>‘ಮರು ವಿಂಗಡಣೆ ವರದಿ ಸಂಸದ ತೇಜಸ್ವಿಸೂರ್ಯ ಅವರ ಕಚೇರಿಯಲ್ಲಿ ಸಿದ್ಧವಾಗಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟಕ್ಕೆ ನಿವಾಸಿಗಳು ಸಜ್ಜಾಗಿದ್ದಾರೆ’ ಎಂದು ಹೇಳಿದರು.</p>.<p>‘ಎಚ್ಸಿಎಲ್ ಅಸೋಸಿಯೇಷನ್ನ 600 ಮನೆಗಳಿದ್ದು, ಅವುಗಳಲ್ಲಿ 100 ಮನೆಗಳನ್ನು ತಿಲಕನಗರ ವಾರ್ಡ್ಗೆ ಸೇರಿಸಲಾಗಿದೆ. ನಾವು ನಾಗರಿಕ ಸೇವೆ ಪಡೆಯಬೇಕೆಂದರೆ ಎರಡು ಕಿಲೋ ಮೀಟರ್ ದೂರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ರೀತಿಯ ಮೋಸದ ಕೆಲಸವನ್ನು ಯಾರೂ ಮಾಡಬಾರದು’ ಎಂದು ಅಸೋಸಿಯೇಷನ್ ಅಧ್ಯಕ್ಷ ಬಾಬುರಾವ್ ಬೇಸರ ವ್ಯಕ್ತಪಡಿಸಿದರು.</p>.<p><strong>ಹೊಸ ನಾಲ್ಕು ಗ್ರಾಮಗಳು ಸೇರ್ಪಡೆ</strong></p>.<p>ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ನಾಲ್ಕು ಗ್ರಾಮಗಳು ಸೇರ್ಪಡೆಯಾಗಿವೆ. ವಾರ್ಡ್ಗಳ ಮರುವಿಂಗಡಣೆಯಿಂದ ಈ ಬದಲಾವಣೆಯಾಗಿದ್ದು, ಸುಮಾರು ಒಂಬತ್ತು ಸಾವಿರ ಆಸ್ತಿಗಳು ಪಾಲಿಕೆಯ ತೆರಿಗೆ ವ್ಯಾಪ್ತಿಗೆ ಬರಲಿವೆ.</p>.<p>ಈ ಗ್ರಾಮಗಳ ಸೇರ್ಪಡೆ ಬಗ್ಗೆ ಅಧಿಸೂಚನೆಯನ್ನು ಕಳೆದ ವರ್ಷವೇ ಹೊರಡಿಸಲಾಗಿತ್ತು. ಆದರೆ, ಮೂಲಸೌಕರ್ಯಗಳ ಲಭ್ಯತೆಯ ಬಗ್ಗೆ ಬಿಬಿಎಂಪಿ ಈ ಪ್ರದೇಶಗಳ ಸಮೀಕ್ಷೆಯನ್ನು ಇನ್ನೂ ಕೈಗೊಳ್ಳಬೇಕಾಗಿದೆ.</p>.<p>‘ಕಮ್ಮಗೊಂಡನಹಳ್ಳಿ ವಾರ್ಡ್ಗೆ ಸೇರ್ಪಡೆಯಾಗಿರುವ ಲಕ್ಷ್ಮೀಪುರ ಗ್ರಾಮದ ಕಾನ್ಶಿರಾಮ್ ನಗರದಲ್ಲಿನ ಆಸ್ತಿಗಳ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಇದುವರೆಗೆ ಈ ಗ್ರಾಮದಲ್ಲಿನ 4,421 ಆಸ್ತಿಗಳನ್ನು ಗುರುತಿಸಲಾಗಿದೆ’ ಎಂದು ದಾಸರಹಳ್ಳಿ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಕಗ್ಗಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲು ಪ್ರದೇಶ ಗಳ ಸಮೀಕ್ಷೆ ಕಾರ್ಯ ಹೆಚ್ಚಿನ ಗತಿಯಾಗಿಲ್ಲ. ಈ ಪ್ರದೇಶಗಳನ್ನು ತಲಘಟ್ಟಪುರ ವಾರ್ಡ್ಗೆ ಸೇರಿಸಲಾಗಿದೆ ಎಂದರು.</p>.<p><br /><strong>‘ಎಲ್ಲಾ ಅನುಮಾನಗಳಿಗೆ ಉತ್ತರ ಇಲ್ಲ’</strong></p>.<p>‘ಮರು ವಿಂಗಡಣೆ ಕುರಿತ ಎಲ್ಲಾ ಅನುಮಾನಗಳಿಗೆ ಉತ್ತರ ಇಲ್ಲ, ಆಕ್ಷೇಪಣೆ ಸಲ್ಲಿಸಲು ಎಲ್ಲರಿಗೂ ಅವಕಾಶ ಇದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್ ಆದೇಶದಂತೆ 8 ವಾರಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಬೇಕಿದೆ. ಕೆಲವು ವಾರ್ಡ್ಗಳಿಗೆ ಇತಿಹಾಸ ಪುರುಷರ ಹೆಸರುಗಳನ್ನು ಇಡಲಾಗಿದೆ. ಸ್ಥಳೀಯರ ಭಾವನೆಗಳನ್ನು ಆಧರಿಸಿ ಈ ಹೆಸರುಗಳನ್ನು ಇಡಲು ಉದ್ದೇಶಿಸಲಾಗಿದೆ. ಎಲ್ಲಾ ವಾರ್ಡ್ಗಳಲ್ಲೂ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವುದು ಅಸಾಧ್ಯ. ಹೆಸರುಗಳು ಬೇಡ ಎಂದರೂ ಆಕ್ಷೇಪಣೆ ಸಲ್ಲಿಸಬಹುದು’ ಎಂದು ಹೇಳಿದರು.</p>.<p>‘ಆಕ್ಷೇಪಣೆಗಳನ್ನು ನಗರಾಭಿವೃದ್ಧಿ ಇಲಾಖೆಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆ ಆಗಿರುವುದರಿಂದ ಬಿಬಿಎಂಪಿ ವೆಬ್ಸೈಟ್ನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಇಲ್ಲ’ ಎಂದರು.</p>.<p>ಈ ಹಿಂದೆ ಇದ್ದ ವಾರ್ಡ್ನ ನಕ್ಷೆ, ಮರು ವಿಂಗಡಣೆಯಾದ ಬಳಿಕದ ನಕ್ಷೆ, ಜನಸಂಖ್ಯೆ, ವಾರ್ಡ್ನ ವಿಸ್ತೀರ್ಣ, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರ ಸೇರಿ ಎಲ್ಲಾ ವಿವರಗಳನ್ನೂ ವೆಬ್ಸೈಟ್(http://bbmpdelimitation2022.com) ನೀಡಲಾಗಿದೆ. ಕ್ಷೇತ್ರವಾರು, ವಾರ್ಡ್ವಾರು, ಪ್ರದೇಶವಾರು ಮಾಹಿತಿಗಳನ್ನು ಪಡೆದುಕೊಳ್ಳಲು ಅವಕಾಶ ಇದೆ. ವಿವರಗಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಒದಗಿಸಲಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>