ವಿಧಾನಪರಿಷತ್ನಲ್ಲಿ ಬಿಜೆಪಿಯ ಎನ್. ರವಿಕುಮಾರ್ ಮತ್ತು ಕಾಂಗ್ರೆಸ್ಸಿನ ಕೆ.ಆರ್. ರಮೇಶ್ ಅವರ ಪ್ರಶ್ನೆಗಳಿಗೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರ ಉತ್ತರಿಸಿದ ಸಚಿವರು, ‘ಬೆಂಗಳೂರಿನ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನ ‘ಬಿ’ ವರ್ಗದ ಧಾರ್ಮಿಕ ಸಂಸ್ಥೆ. ದೇವಾಲಯವು ನೀಲಸಂದ್ರ ಗ್ರಾಮದಲ್ಲಿ 41.05 ಎಕರೆ, ಹೊಂಗಸಂದ್ರ ಗ್ರಾಮದಲ್ಲಿ 34.18 ಎಕರೆ, ದೂಕನಹಳ್ಳಿ ಗ್ರಾಮದಲ್ಲಿ 87.03 ಎಕರೆ, ಕೋರಮಂಗಲದಲ್ಲಿ 83.30 ಎಕರೆ ಜಮೀನು ಹೊಂದಿದೆ’ ಎಂದರು.