‘ಇದುವರೆಗೂ ನಡೆಸಿದ ತನಿಖೆ ಪ್ರಗತಿಯ ಕಡತಗಳು ನಮ್ಮಲ್ಲಿಯೇ ಇವೆ. ಸಿಬಿಐ ಅಧಿಕಾರಿಗಳು ಕೇಳಿದರೆ ಕಡತ ಹಸ್ತಾಂತರಿಸಲಾಗುವುದು. ಎಸ್ಐಟಿಯೇ ತನಿಖೆ ಮುಂದುವರಿಸಿದೆ. ಕಸ್ಟಡಿಗೆ ಪಡೆದಿರುವ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜೆ.ಪದ್ಮನಾಭ್, ಲೆಕ್ಕಾಧಿಕಾರಿಯಾಗಿದ್ದ ಪರುಶುರಾಮ್ ಜಿ. ದುರ್ಗಣ್ಣನವರ ಅವರನ್ನು ಹೆಚ್ಚಿನ ವಿಚಾರಣೆಗೆ ಮತ್ತೆ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ತೋರಿಸಿ ಇಬ್ಬರನ್ನೂ ಶುಕ್ರವಾರ ಸಹ ವಿಚಾರಣೆ ನಡೆಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.