<p><strong>ಬೆಂಗಳೂರು: </strong>ವೈಟ್ಫೀಲ್ಡ್ನ ದಿವ್ಯಾ ಅರೋರ ಅವರ ಮನೆಯ ಬಾಲ್ಕನಿಯಲ್ಲಿ ಅಪರೂಪದ ಅತಿಥಿಯೊಬ್ಬರು ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದರು. ಬಂದಿದ್ದ ಅತಿಥಿ ಅಂತಿಂಥವರಲ್ಲ. ಜೀವಮಾನದಲ್ಲಿ ಎಂದೂ ಕಂಡಿರದ ಅತಿಥಿ!</p>.<p>ಕೋವಿಡ್ ಲಾಕ್ಡೌನ್ ನಡುವೆಯೂ ಮನೆಗೆ ಅತಿಥಿಗಳು ಬಂದು ಹೋಗುವ ಪರಿಪಾಠ ಮುಂದುವರಿದಿದೆಯೇ ಎಂದು ಹುಬ್ಬೇರಿಸದಿರಿ. ಅರೋರ ಅವರ ಮನೆಯ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು ರಣಹದ್ದಿನ ಮುದ್ದು ಮರಿ!</p>.<p>ಹಾರಲಾಗದ ಸ್ಥಿತಿಯಲ್ಲಿದ್ದ ಹಕ್ಕಿ ಮರಿಯನ್ನು ಕಂಡು ಮನೆಯವರು ಬಿಬಿಎಂಪಿಯ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ಎಂ.ರಾಜೇಶ್ ಕುಮಾರ್ ಅವರಿಗೆ ಕರೆ ಮಾಡಿದರು.</p>.<p>‘ನಾನು ಸ್ಥಳಕ್ಕೆ ಹೋಗಿ ನೋಡಿದಾಗ ಅದು ಬಿಳಿ ರಣಹದ್ದಿನ (ಈಜಿಪ್ಟಿಯನ್ ವಲ್ಚರ್) ಮರಿ ಎಂದು ಗೊತ್ತಾಯಿತು. ಇನ್ನೂ ಹಾರಲು ಕಲಿಯದ ಈ ಮರಿ ಹೇಗೆ ನಗರದ ಮನೆಯೊಂದರ ಬಾಲ್ಕನಿ ಸೇರಿತು ಎಂದೇ ಅರ್ಥವಾಗುತ್ತಿಲ್ಲ. ರಣಹದ್ದುಗಳು ತುಂಬಾ ಎತ್ತರದ ಬೆಟ್ಟಗಳಲ್ಲಿ ಕಡಿದಾದ ಪ್ರದೇಶದಲ್ಲಿ ಗೂಡು ಕಟ್ಟುತ್ತವೆ. ನಗರದ ಮಧ್ಯಭಾಗದ ವಸತಿ ಪ್ರದೇಶದಲ್ಲಿ ಇದು ಕಾಣಿಸಿಕೊಂಡಿದ್ದು ಹೇಗೆ ಎಂಬುದೇ ಅಚ್ಚರಿಯ ವಿಷಯ’ ಎನ್ನುತ್ತಾರೆ ರಾಜೇಶ್ ಕುಮಾರ್.</p>.<p>‘ರಣಹದ್ದು ಜಾತಿಯ ಪಕ್ಷಗಳಲ್ಲಿ ಮರಿಗಳ ನಡುವೆ ಅಸ್ತಿತ್ವಕ್ಕಾಗಿ ಹೋರಾಟ ಎಳವೆಯಲ್ಲೇ ಶುರುವಾಗುತ್ತದೆ. ಒಂದು ಮರಿಯನ್ನು ಇನ್ನೊಂದು ಮರಿ ಗೂಡಿನಿಂದ ತಳ್ಳುವುದೂ ಉಂಟು. ಹಾರಲು ಕಲಿಯುವ ತವಕದಲ್ಲಿ ಈ ರಣಹದ್ದಿನ ಮರಿ ಗೂಡಿನಿಂದ ಹೊರ ಬಿದ್ದಿರಲಿಕ್ಕೂ ಸಾಕು’ ಎಂದರು. </p>.<p>‘ಈ ಮರಿಯನ್ನು ಕೆಂಗೇರಿಯ ವನ್ಯಜೀವಿಗಳ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದೇವೆ. ಇದಕ್ಕಿನ್ನೂ ರೆಕ್ಕೆಗಳು ಸರಿಯಾಗಿ ಬಲಿತಿಲ್ಲ. ಇದಿನ್ನೂ ಸರಿಯಾಗಿ ಹಾರಲು ಕಲಿತಿಲ್ಲ. ಹಾಗಾಗಿ ಇದಕ್ಕೆ ಒಂದು ತಿಂಗಳು ಆರೈಕೆ ಮಾಡಿದ ಬಳಿಕ ರೆಕ್ಕೆ ಚೆನ್ನಾಗಿ ಬಲಿತರೆ ಬಳಿಕ ಹೊರಗೆ ಬಿಡಬಹುದು’ ಎಂದರು.</p>.<p>‘ರಣಹದ್ದುಗಳು ತೀರಾ ಅಪಾಯದಂಚಿನಲ್ಲಿರುವ ಪಕ್ಷಿಗಳು. ರಾಮನಗರ ಜಿಲ್ಲೆಯಲ್ಲಿ ಈಗಲೂ ಕಾಣಸಿಗುತ್ತವೆ. ಮಾಂಸದ ಚೂರುಗಳನ್ನು ಹೆಕ್ಕಿ ತಿಂದು ಬದುಕುವ ಇವುಗಳನ್ನು ಜಾಡಮಾಲಿಗಳು ಎಂದೇ ಕರೆಯುತ್ತಾರೆ. ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಲ್ಲಿ ಹಾಗೂ ರೋಗರುಜಿನಗಳು ಹರಡದಂತೆ ತಡೆಯುವಲ್ಲಿ ಇವುಗಳ ಪಾತ್ರ ಮಹತ್ವದ್ದು’ ಎಂದು ತಿಳಿಸಿದರು.</p>.<p>‘ಐದು ವರ್ಷಗಳ ಹಿಂದೆ ಎಂ.ಜಿ.ರಸ್ತೆ ಬಳಿಯ ಕಟ್ಟಡವೊಂದರಲ್ಲಿ ಬಿಳಿ ರಣಹದ್ದನ್ನು ರಕ್ಷಣೆ ಮಾಡಿದ್ದೆವು. ಅದು ಬಿಟ್ಟರೆ ನಗರದಲ್ಲಿ ರಣಹದ್ದನ್ನು ನೋಡಿದ ನೆನಪಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವೈಟ್ಫೀಲ್ಡ್ನ ದಿವ್ಯಾ ಅರೋರ ಅವರ ಮನೆಯ ಬಾಲ್ಕನಿಯಲ್ಲಿ ಅಪರೂಪದ ಅತಿಥಿಯೊಬ್ಬರು ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದರು. ಬಂದಿದ್ದ ಅತಿಥಿ ಅಂತಿಂಥವರಲ್ಲ. ಜೀವಮಾನದಲ್ಲಿ ಎಂದೂ ಕಂಡಿರದ ಅತಿಥಿ!</p>.<p>ಕೋವಿಡ್ ಲಾಕ್ಡೌನ್ ನಡುವೆಯೂ ಮನೆಗೆ ಅತಿಥಿಗಳು ಬಂದು ಹೋಗುವ ಪರಿಪಾಠ ಮುಂದುವರಿದಿದೆಯೇ ಎಂದು ಹುಬ್ಬೇರಿಸದಿರಿ. ಅರೋರ ಅವರ ಮನೆಯ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದು ರಣಹದ್ದಿನ ಮುದ್ದು ಮರಿ!</p>.<p>ಹಾರಲಾಗದ ಸ್ಥಿತಿಯಲ್ಲಿದ್ದ ಹಕ್ಕಿ ಮರಿಯನ್ನು ಕಂಡು ಮನೆಯವರು ಬಿಬಿಎಂಪಿಯ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ಎಂ.ರಾಜೇಶ್ ಕುಮಾರ್ ಅವರಿಗೆ ಕರೆ ಮಾಡಿದರು.</p>.<p>‘ನಾನು ಸ್ಥಳಕ್ಕೆ ಹೋಗಿ ನೋಡಿದಾಗ ಅದು ಬಿಳಿ ರಣಹದ್ದಿನ (ಈಜಿಪ್ಟಿಯನ್ ವಲ್ಚರ್) ಮರಿ ಎಂದು ಗೊತ್ತಾಯಿತು. ಇನ್ನೂ ಹಾರಲು ಕಲಿಯದ ಈ ಮರಿ ಹೇಗೆ ನಗರದ ಮನೆಯೊಂದರ ಬಾಲ್ಕನಿ ಸೇರಿತು ಎಂದೇ ಅರ್ಥವಾಗುತ್ತಿಲ್ಲ. ರಣಹದ್ದುಗಳು ತುಂಬಾ ಎತ್ತರದ ಬೆಟ್ಟಗಳಲ್ಲಿ ಕಡಿದಾದ ಪ್ರದೇಶದಲ್ಲಿ ಗೂಡು ಕಟ್ಟುತ್ತವೆ. ನಗರದ ಮಧ್ಯಭಾಗದ ವಸತಿ ಪ್ರದೇಶದಲ್ಲಿ ಇದು ಕಾಣಿಸಿಕೊಂಡಿದ್ದು ಹೇಗೆ ಎಂಬುದೇ ಅಚ್ಚರಿಯ ವಿಷಯ’ ಎನ್ನುತ್ತಾರೆ ರಾಜೇಶ್ ಕುಮಾರ್.</p>.<p>‘ರಣಹದ್ದು ಜಾತಿಯ ಪಕ್ಷಗಳಲ್ಲಿ ಮರಿಗಳ ನಡುವೆ ಅಸ್ತಿತ್ವಕ್ಕಾಗಿ ಹೋರಾಟ ಎಳವೆಯಲ್ಲೇ ಶುರುವಾಗುತ್ತದೆ. ಒಂದು ಮರಿಯನ್ನು ಇನ್ನೊಂದು ಮರಿ ಗೂಡಿನಿಂದ ತಳ್ಳುವುದೂ ಉಂಟು. ಹಾರಲು ಕಲಿಯುವ ತವಕದಲ್ಲಿ ಈ ರಣಹದ್ದಿನ ಮರಿ ಗೂಡಿನಿಂದ ಹೊರ ಬಿದ್ದಿರಲಿಕ್ಕೂ ಸಾಕು’ ಎಂದರು. </p>.<p>‘ಈ ಮರಿಯನ್ನು ಕೆಂಗೇರಿಯ ವನ್ಯಜೀವಿಗಳ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದೇವೆ. ಇದಕ್ಕಿನ್ನೂ ರೆಕ್ಕೆಗಳು ಸರಿಯಾಗಿ ಬಲಿತಿಲ್ಲ. ಇದಿನ್ನೂ ಸರಿಯಾಗಿ ಹಾರಲು ಕಲಿತಿಲ್ಲ. ಹಾಗಾಗಿ ಇದಕ್ಕೆ ಒಂದು ತಿಂಗಳು ಆರೈಕೆ ಮಾಡಿದ ಬಳಿಕ ರೆಕ್ಕೆ ಚೆನ್ನಾಗಿ ಬಲಿತರೆ ಬಳಿಕ ಹೊರಗೆ ಬಿಡಬಹುದು’ ಎಂದರು.</p>.<p>‘ರಣಹದ್ದುಗಳು ತೀರಾ ಅಪಾಯದಂಚಿನಲ್ಲಿರುವ ಪಕ್ಷಿಗಳು. ರಾಮನಗರ ಜಿಲ್ಲೆಯಲ್ಲಿ ಈಗಲೂ ಕಾಣಸಿಗುತ್ತವೆ. ಮಾಂಸದ ಚೂರುಗಳನ್ನು ಹೆಕ್ಕಿ ತಿಂದು ಬದುಕುವ ಇವುಗಳನ್ನು ಜಾಡಮಾಲಿಗಳು ಎಂದೇ ಕರೆಯುತ್ತಾರೆ. ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಲ್ಲಿ ಹಾಗೂ ರೋಗರುಜಿನಗಳು ಹರಡದಂತೆ ತಡೆಯುವಲ್ಲಿ ಇವುಗಳ ಪಾತ್ರ ಮಹತ್ವದ್ದು’ ಎಂದು ತಿಳಿಸಿದರು.</p>.<p>‘ಐದು ವರ್ಷಗಳ ಹಿಂದೆ ಎಂ.ಜಿ.ರಸ್ತೆ ಬಳಿಯ ಕಟ್ಟಡವೊಂದರಲ್ಲಿ ಬಿಳಿ ರಣಹದ್ದನ್ನು ರಕ್ಷಣೆ ಮಾಡಿದ್ದೆವು. ಅದು ಬಿಟ್ಟರೆ ನಗರದಲ್ಲಿ ರಣಹದ್ದನ್ನು ನೋಡಿದ ನೆನಪಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>