<p><strong>ಬೆಂಗಳೂರು</strong>: ಜಿಬಿಎ ವ್ಯಾಪ್ತಿಯಲ್ಲಿ ಅನುಪಯುಕ್ತ ಗೃಹೋಪಯೋಗಿ ಸಾಮಗ್ರಿಗಳ ವಿಲೇವಾರಿಗಾಗಿ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅ.20ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್ಡಬ್ಲ್ಯುಎಂಎಲ್) ಸಿಇಒ ಕರೀಗೌಡ ತಿಳಿಸಿದರು.</p>.<p>ನಗರದಲ್ಲಿ ವಿವಿಧ ಬಗೆಯ ಘನತ್ಯಾಜ್ಯ ಮರುಬಳಕೆದಾರರ ಜೊತೆ ಸಭೆ ನಡೆಸಿದ ನಂತರ ಅವರು ಮಾತನಾಡಿದರು.</p>.<p>ನಗರದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ನಾಗರಿಕರ ಬೇಡಿಕೆಯ ಆಧಾರದ ಮೇಲೆ, ಅನುಪಯುಕ್ತ, ಗೃಹೋಪಯೋಗಿ ಸಾಮಗ್ರಿಗಳ ಸೂಕ್ತ ವಿಲೇವಾರಿಗಾಗಿ ತಂತ್ರಾಂಶವನ್ನು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.</p>.<p>ಸಂಗ್ರಹಿಸಲಾದ ಸೋಫಾ, ಹಾಸಿಗೆ, ಕಮೋಡ್ ಮುಂತಾದ ವಸ್ತುಗಳನ್ನು ಕೇಂದ್ರಿತವಾಗಿ ಶೇಖರಿಸಿ, ನಂತರ ಮರುಬಳಕೆದಾರರಿಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಸಣ್ಣ ಪ್ರಮಾಣದ ತ್ಯಾಜ್ಯವನ್ನು ಸಾಗಣೆ ಮಾಡುವುದು ಕಷ್ಟ. ಸಾಗಣೆ ವೆಚ್ಚ ಅಧಿಕವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸಲಹೆಗಳು ಬಂದವು. ಅವುಗಳನ್ನು ಪರಿಗಣಿಸಿ ತಂತ್ರಾಂಶ ರೂಪಿಸಲಾಗುತ್ತಿದೆ ಎಂದರು.</p>.<p>ಘನತ್ಯಾಜ್ಯ ನಿರ್ವಹಣಾ ರಾಯಭಾರಿಗಳಾಗಿ ಆಯ್ಕೆಯಾದ ಶೋಭಾ ಭಟ್– ಆರ್.ಆರ್. ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಡಾ. ಶಾಂತಿ ತುಮ್ಮಲ– ಎಚ್.ಎಸ್.ಆರ್. ಸಿಟಿಜನ್ಸ್ ಫೋರಂ, ಅನಿರುದ್ಧ ದತ್ತ– ಲೆಟ್ಸ್ ಬಿ ದ ಚೇಂಜ್, ನಳಿನಿ ಶೇಖರ್– ಹಸಿರು ದಳ, ಅಮಿತ್ ಅಮರನಾಥ– ಯುವ ಫಾರ್ ಪರಿವರ್ತನ, ಸುನಿತ್– ಸಾಹಸ್, ಪದ್ಮಶ್ರೀ ಬಾಲರಾಮ್– ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.</p>.<p>ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಉಪಸ್ಥಿತರಿದ್ದರು.</p>.<p><strong>ರಸ್ತೆ ಗುಂಡಿ: ಅಧಿಕಾರಿಗಳಿಗೆ ತರಾಟೆ</strong></p><p>ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ದ್ವಿಚಕ್ರದಲ್ಲಿ ಸಂಚರಿಸಿ ರಸ್ತೆಗಳಲ್ಲಿ ಗುಂಡಿ ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.</p><p>ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದಲೇ ತುರ್ತಾಗಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.</p><p>ರೇಸ್ ಕೋರ್ಸ್ ರಸ್ತೆ ಚಾಲುಕ್ಯ ವೃತ್ತ ವಸಂತ ನಗರ ಸುತ್ತಮುತ್ತಲಿನ ರಸ್ತೆ ಅರಮನೆ ರಸ್ತೆ ಕಬ್ಬನ್ ರಸ್ತೆ ವಿಧಾನಸೌಧ ರಸ್ತೆ ರಾಜಭವನ ರಸ್ತೆ ಕ್ವೀನ್ಸ್ ರಸ್ತೆ ಅಲಿ ಆಸ್ಕರ್ ರಸ್ತೆ ಶಿವಾಜಿನಗರದ ವಿವಿಧ ರಸ್ತೆಗಳಲ್ಲಿ ಆಯುಕ್ತರು ಸಂಚರಿಸಿದರು.</p><p>ಸಚಿವರಾದ ದಿನೇಶ್ ಗುಂಡೂರಾವ್ ಜಮೀರ್ ಅಹಮದ್ ಖಾನ್ ಶಾಸಕರಾದ ಎನ್.ಎ. ಹ್ಯಾರಿಸ್ ರಿಜ್ವಾನ್ ಅರ್ಷದ್ ಅವರ ಕೇಂದ್ರ ನಗರ ಪಾಲಿಕೆ ಆಯುಕ್ತ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.</p><p>ರಸ್ತೆ ಅಭಿವೃದ್ಧಿ ಬ್ಲ್ಯಾಕ್ ಸ್ಪಾಟ್ ಮುಕ್ತ ರಸ್ತೆ ಅಗೆತ ಸೇರಿದಂತೆ ಹಲವು ಕಾಮಗಾರಿಗಳ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಜಿಬಿಎ ವ್ಯಾಪ್ತಿಯಲ್ಲಿ ಅನುಪಯುಕ್ತ ಗೃಹೋಪಯೋಗಿ ಸಾಮಗ್ರಿಗಳ ವಿಲೇವಾರಿಗಾಗಿ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅ.20ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್ಡಬ್ಲ್ಯುಎಂಎಲ್) ಸಿಇಒ ಕರೀಗೌಡ ತಿಳಿಸಿದರು.</p>.<p>ನಗರದಲ್ಲಿ ವಿವಿಧ ಬಗೆಯ ಘನತ್ಯಾಜ್ಯ ಮರುಬಳಕೆದಾರರ ಜೊತೆ ಸಭೆ ನಡೆಸಿದ ನಂತರ ಅವರು ಮಾತನಾಡಿದರು.</p>.<p>ನಗರದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ನಾಗರಿಕರ ಬೇಡಿಕೆಯ ಆಧಾರದ ಮೇಲೆ, ಅನುಪಯುಕ್ತ, ಗೃಹೋಪಯೋಗಿ ಸಾಮಗ್ರಿಗಳ ಸೂಕ್ತ ವಿಲೇವಾರಿಗಾಗಿ ತಂತ್ರಾಂಶವನ್ನು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.</p>.<p>ಸಂಗ್ರಹಿಸಲಾದ ಸೋಫಾ, ಹಾಸಿಗೆ, ಕಮೋಡ್ ಮುಂತಾದ ವಸ್ತುಗಳನ್ನು ಕೇಂದ್ರಿತವಾಗಿ ಶೇಖರಿಸಿ, ನಂತರ ಮರುಬಳಕೆದಾರರಿಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಸಣ್ಣ ಪ್ರಮಾಣದ ತ್ಯಾಜ್ಯವನ್ನು ಸಾಗಣೆ ಮಾಡುವುದು ಕಷ್ಟ. ಸಾಗಣೆ ವೆಚ್ಚ ಅಧಿಕವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸಲಹೆಗಳು ಬಂದವು. ಅವುಗಳನ್ನು ಪರಿಗಣಿಸಿ ತಂತ್ರಾಂಶ ರೂಪಿಸಲಾಗುತ್ತಿದೆ ಎಂದರು.</p>.<p>ಘನತ್ಯಾಜ್ಯ ನಿರ್ವಹಣಾ ರಾಯಭಾರಿಗಳಾಗಿ ಆಯ್ಕೆಯಾದ ಶೋಭಾ ಭಟ್– ಆರ್.ಆರ್. ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಡಾ. ಶಾಂತಿ ತುಮ್ಮಲ– ಎಚ್.ಎಸ್.ಆರ್. ಸಿಟಿಜನ್ಸ್ ಫೋರಂ, ಅನಿರುದ್ಧ ದತ್ತ– ಲೆಟ್ಸ್ ಬಿ ದ ಚೇಂಜ್, ನಳಿನಿ ಶೇಖರ್– ಹಸಿರು ದಳ, ಅಮಿತ್ ಅಮರನಾಥ– ಯುವ ಫಾರ್ ಪರಿವರ್ತನ, ಸುನಿತ್– ಸಾಹಸ್, ಪದ್ಮಶ್ರೀ ಬಾಲರಾಮ್– ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.</p>.<p>ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಉಪಸ್ಥಿತರಿದ್ದರು.</p>.<p><strong>ರಸ್ತೆ ಗುಂಡಿ: ಅಧಿಕಾರಿಗಳಿಗೆ ತರಾಟೆ</strong></p><p>ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ದ್ವಿಚಕ್ರದಲ್ಲಿ ಸಂಚರಿಸಿ ರಸ್ತೆಗಳಲ್ಲಿ ಗುಂಡಿ ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.</p><p>ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದಲೇ ತುರ್ತಾಗಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.</p><p>ರೇಸ್ ಕೋರ್ಸ್ ರಸ್ತೆ ಚಾಲುಕ್ಯ ವೃತ್ತ ವಸಂತ ನಗರ ಸುತ್ತಮುತ್ತಲಿನ ರಸ್ತೆ ಅರಮನೆ ರಸ್ತೆ ಕಬ್ಬನ್ ರಸ್ತೆ ವಿಧಾನಸೌಧ ರಸ್ತೆ ರಾಜಭವನ ರಸ್ತೆ ಕ್ವೀನ್ಸ್ ರಸ್ತೆ ಅಲಿ ಆಸ್ಕರ್ ರಸ್ತೆ ಶಿವಾಜಿನಗರದ ವಿವಿಧ ರಸ್ತೆಗಳಲ್ಲಿ ಆಯುಕ್ತರು ಸಂಚರಿಸಿದರು.</p><p>ಸಚಿವರಾದ ದಿನೇಶ್ ಗುಂಡೂರಾವ್ ಜಮೀರ್ ಅಹಮದ್ ಖಾನ್ ಶಾಸಕರಾದ ಎನ್.ಎ. ಹ್ಯಾರಿಸ್ ರಿಜ್ವಾನ್ ಅರ್ಷದ್ ಅವರ ಕೇಂದ್ರ ನಗರ ಪಾಲಿಕೆ ಆಯುಕ್ತ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.</p><p>ರಸ್ತೆ ಅಭಿವೃದ್ಧಿ ಬ್ಲ್ಯಾಕ್ ಸ್ಪಾಟ್ ಮುಕ್ತ ರಸ್ತೆ ಅಗೆತ ಸೇರಿದಂತೆ ಹಲವು ಕಾಮಗಾರಿಗಳ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>