ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿವಿಧೆಡೆ ನೀರಿನ ಅದಾಲತ್

Last Updated 1 ಜನವರಿ 2020, 21:51 IST
ಅಕ್ಷರ ಗಾತ್ರ

ಬೆಂಗಳೂರು: ಜಲಮಂಡಳಿಯು ಗುರುವಾರಬೆಳಿಗ್ಗೆ 9.30ರಿಂದ 11ಗಂಟೆಯವರೆಗೆ ನಗರದ ವಿವಿಧೆಡೆ ನೀರಿನ ಅದಾಲತ್ ಆಯೋಜಿಸಿದೆ.

ನೀರಿನ ಬಿಲ್ಲು, ನೀರು ಮತ್ತು ಒಳ ಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ ಮತ್ತಿತರ ಕುಂದು– ಕೊರತೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ದಕ್ಷಿಣ ಉಪವಿಭಾಗ ವ್ಯಾಪ್ತಿಯಡಿ ಬನಗಿರಿ, ಪೂರ್ಣಪ್ರಜ್ಞಾ ಬಡಾವಣೆ, ಬನಶಂಕರಿ, ಪದ್ಮನಾಭ ನಗರ, ಕುಮಾರಸ್ವಾಮಿ ಬಡಾವಣೆ, ಇಸ್ರೊ ಬಡಾವಣೆ, ಪಶ್ಚಿಮ ಉಪವಿಭಾಗದಡಿಮಾಗಡಿ ರಸ್ತೆ 1,2, ಹೊಸಹಳ್ಳಿ ಪಂಪ್ ಹೌಸ್, ಮೈಸೂರು ರಸ್ತೆ, ಆಗ್ನೇಯ ಪವಿಭಾಗದಡಿಹಲಸೂರು, ದೊಮ್ಮ ಲೂರು, ಜಾನ್ಸನ್ ಮಾರ್ಕೆಟ್,ನೈರುತ್ಯ ಉಪವಿಭಾಗದಡಿ ವಿ.ವಿ.ಪುರ, ಸುಧಾಮ ನಗರ-2, ಕೆಂಪೇಗೌಡ ನಗರ, ಜಗಜೀವನ್ ರಾಮ್ ನಗರ,ಚಾಮರಾಜಪೇಟೆ, ಕೇಂದ್ರ ಉಪ ವಿಭಾಗದಡಿ ಚಿಕ್ಕಲಾಲ್ ಬಾಗ್, ಬನ್ನಪ್ಪ ಪಾರ್ಕ್, ಸುಧಾಮನಗರ-1, ಉತ್ತರ ಉಪವಿಭಾಗದಡಿಎಂ.ಇ.ಐ. ಬಡಾವಣೆ, ಸೋಲದೇವನಹಳ್ಳಿ, ಬಾಹುಬಲಿನಗರ, ಪೂರ್ವ ಉಪ ವಿಭಾ ಗದಡಿ ಎಚ್.ಆರ್.ಬಿ.ಆರ್.ಬಡಾವಣೆ, ಕಲ್ಯಾಣ್ ನಗರ, ಓ.ಎಂ.ಬಿ.ಆರ್.ಬಡಾವಣೆ, ಎಚ್.ಬಿ.ಆರ್ ಬಡಾವಣೆ ನಿವಾಸಿಗಳು ಪಾಲ್ಗೊಳ್ಳಬಹುದಾಗಿದೆ.

ವಾಯವ್ಯ ಉಪವಿಭಾಗದಡಿ ಕೇತಮಾರನಹಳ್ಳಿ, ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ- 1, 2 ಹಾಗೂ ನಂದಿನಿ ಬಡಾವಣೆ-1ರ ನಿವಾಸಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಮಂಡಳಿಯ ದೂರು ನಿರ್ವ ಹಣಾ ಕೇಂದ್ರದ ದೂರವಾಣಿ 080 2223 8888 ಅಥವಾ ವಾಟ್ಸ್ಆ್ಯಪ್‌ ಸಂ.8762228888ಕ್ಕೆ ಸಂಪರ್ಕಿಸಿಯೂ ಕುಂದು– ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಮಂಡಳಿಯ ಪ್ರಕಟಣೆಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT