ದಾಸರಹಳ್ಳಿ ವ್ಯಾಪ್ತಿಯ ನಾಗಸಂದ್ರದಲ್ಲಿರುವ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ
ಇನ್ನು ಮುಂದೆ ಸಂಸ್ಕರಿತ ನೀರು ಬಳಸುವುದು ಅನಿವಾರ್ಯ ಹಾಗೂ ಅಗತ್ಯ. ಕೈಗಾರಿಕೆಗಳಿಗೆ ಸಂಸ್ಕರಿತ ನೀರು ಪೂರೈಸಲು ರೂಪಿಸಿರುವ ಈ ಯೋಜನೆ ಉತ್ತಮವಾಗಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಯೋಜನೆ ಯಶಸ್ವಿಯಾಗಬೇಕು
-ಎಸ್. ವಿಶ್ವನಾಥ್, ಜಲತಜ್ಞ
ಪ್ರತ್ಯೇಕ ಕೊಳವೆಗಳಲ್ಲಿ ಸಂಸ್ಕರಿತ ನೀರು ಪೂರೈಕೆ ಕುರಿತು ಕೈಗಾರಿಕಾ ಪ್ರದೇಶಗಳ ಉದ್ಯಮಿಗಳೊಂದಿಗೆ ಸಭೆ ನಡೆಸಿದ ನಂತರ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ
-ರಾಮ್ಪ್ರಸಾತ್ ಮನಹೋರ್, ಅಧ್ಯಕ್ಷ ಬೆಂಗಳೂರು ಜಲಮಂಡಳಿ
ಕುಡಿಯುವುದಕ್ಕಲ್ಲದೆ ಬೇರೆ ಕೆಲಸಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಜಲಮಂಡಳಿ ಪ್ರತ್ಯೇಕ ಕೊಳವೆಮಾರ್ಗ ಅಳವಡಿಸುತ್ತಿರುವುದು ಒಳ್ಳೆಯದು. ಆದರೆ ಯಾವ ಗುಣಮಟ್ಟದಲ್ಲಿ ನೀರು ಸಂಸ್ಕರಣೆಯಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದರಿಂದ ಏನೂ ತೊಂದರೆಯಾಗುವುದಿಲ್ಲ ಎಂಬುದನ್ನು ಪ್ರಮಾಣೀಕೃತ ಸಂಸ್ಥೆಗಳಿಂದ ದೃಢಪಡಿಸಿಕೊಂಡು ಉದ್ಯಮದಾರರೊಂದಿಗೆ ಚರ್ಚಿಸಿ ನಂತರ ಮುಂದುವರಿಯಬೇಕು. ಕೊಳವೆ ಹಾಕಲು ರಸ್ತೆ ಅಗೆದರೆ ಅದನ್ನು ಜಲಮಂಡಳಿಯೇ ಸರಿಪಡಿಸಬೇಕು.