<p><strong>ಬೆಂಗಳೂರು:</strong> ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪ್ನಲ್ಲಿ ಮುಳುಗಿ ಚಂದ್ರು (14) ಎಂಬಾತ ಮೃತಪಟ್ಟಿದ್ದು, ಅದೇ ಸಂಪಿನಲ್ಲಿ ಬಿದ್ದಿದ್ದ ಮತ್ತೊಬ್ಬ ಬಾಲಕನನ್ನು ರಕ್ಷಿಸಲಾಗಿದೆ.</p>.<p>ಕಾಡುಗೊಂಡನಹಳ್ಳಿ (ಕೆ.ಜೆ.ಹಳ್ಳಿ) ಠಾಣೆ ವ್ಯಾಪ್ತಿಯ ಎಚ್.ಬಿ.ಆರ್ ಬಡಾವಣೆಯಲ್ಲಿ ಮಂಗಳವಾರ ಈ ಅವಘಡ ಸಂಭವಿಸಿದೆ.</p>.<p>‘ಪೋಷಕರ ಜೊತೆ ವಾಸವಿದ್ದ ಚಂದ್ರು, ನಾಲ್ವರು ಸ್ನೇಹಿತರ ಜೊತೆ ಆಟವಾಡಲೆಂದು ನಿರ್ಮಾಣ ಹಂತದ ಕಟ್ಟಡದ ಬಳಿ ಹೋಗಿದ್ದ. ಕಟ್ಟಡದ ನೆಲಮಹಡಿಯಲ್ಲಿ ಬಾಲಕರೆಲ್ಲರೂ ಆಟವಾಡುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಟ್ಟಡದ ತಳ ಮಹಡಿಯಲ್ಲಿ (ಸೆಲ್ಲಾರ್) ಎರಡು ಅಡಿಯಷ್ಟು ನೀರು ನಿಂತುಕೊಂಡಿತ್ತು. ಸೆಲ್ಲಾರ್ ಮಧ್ಯದಲ್ಲೇ ನೀರಿನ ಸಂಪ್ ಸಹ ಇತ್ತು. ಅದು ಬಾಲಕರಿಗೆ ಗೊತ್ತಿರಲಿಲ್ಲ.’</p>.<p>‘ಚಂದ್ರು ಸೇರಿ ಮೂವರು ಆಡಲೆಂದು ತಳಮಹಡಿಯಲ್ಲಿ ನಿಂತಿದ್ದ ನೀರಿಗೆ ಇಳಿದಿದ್ದರು. ಆಡುತ್ತಲೇ ಚಂದ್ರು ಸಂಪ್ನಲ್ಲಿ ಬಿದ್ದು ಮುಳುಗಿದ್ದ. ಆತ ಕಾಣಿಸದಿದ್ದಾಗ ಗಾಬರಿಗೊಂಡ ಒಬ್ಬಾತ, ನೀರಿನಿಂದ ಮೇಲೆ ಬಂದು ರಕ್ಷಣೆಗಾಗಿ ಕೂಗಾಡಿದ್ದ. ಅಷ್ಟರಲ್ಲಿ, ಇನ್ನೊಬ್ಬ ಸಹ ಸಂಪಿನೊಳಗೆ ಮುಳುಗುತ್ತಿದ್ದ’ ಎಂದರು.</p>.<p>‘ಮುಳುಗುತ್ತಿದ್ದ ಬಾಲಕನನ್ನು ಸ್ಥಳೀಯರ ನೆರವಿನಲ್ಲಿ ರಕ್ಷಿಸಲಾಗಿದೆ. ಆದರೆ, ಚಂದ್ರು ಸಂಪ್ನಲ್ಲಿ ಮುಳುಗಿ ಮೃತಪಟ್ಟ. ಆತನ ಮೃತದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಅಧಿಕಾರಿ ಹೇಳಿದರು.</p>.<p class="Subhead"><strong>ಕಟ್ಟಡ ಮಾಲೀಕರ ವಿಚಾರಣೆ:</strong> ‘ಸೆಲ್ಲಾರ್ ಮಧ್ಯದಲ್ಲಿದ್ದ ನೀರಿನ ಸಂಪ್ನ ಮುಚ್ಚಳ ಮುಚ್ಚಿರಲಿಲ್ಲ. ಇದುವೇ ಅವಘಡಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಟ್ಟಡ ಮಾಲೀಕರನ್ನು ವಿಚಾರಣೆ ನಡೆಸಲಾಗುವುದು’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪ್ನಲ್ಲಿ ಮುಳುಗಿ ಚಂದ್ರು (14) ಎಂಬಾತ ಮೃತಪಟ್ಟಿದ್ದು, ಅದೇ ಸಂಪಿನಲ್ಲಿ ಬಿದ್ದಿದ್ದ ಮತ್ತೊಬ್ಬ ಬಾಲಕನನ್ನು ರಕ್ಷಿಸಲಾಗಿದೆ.</p>.<p>ಕಾಡುಗೊಂಡನಹಳ್ಳಿ (ಕೆ.ಜೆ.ಹಳ್ಳಿ) ಠಾಣೆ ವ್ಯಾಪ್ತಿಯ ಎಚ್.ಬಿ.ಆರ್ ಬಡಾವಣೆಯಲ್ಲಿ ಮಂಗಳವಾರ ಈ ಅವಘಡ ಸಂಭವಿಸಿದೆ.</p>.<p>‘ಪೋಷಕರ ಜೊತೆ ವಾಸವಿದ್ದ ಚಂದ್ರು, ನಾಲ್ವರು ಸ್ನೇಹಿತರ ಜೊತೆ ಆಟವಾಡಲೆಂದು ನಿರ್ಮಾಣ ಹಂತದ ಕಟ್ಟಡದ ಬಳಿ ಹೋಗಿದ್ದ. ಕಟ್ಟಡದ ನೆಲಮಹಡಿಯಲ್ಲಿ ಬಾಲಕರೆಲ್ಲರೂ ಆಟವಾಡುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>‘ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಟ್ಟಡದ ತಳ ಮಹಡಿಯಲ್ಲಿ (ಸೆಲ್ಲಾರ್) ಎರಡು ಅಡಿಯಷ್ಟು ನೀರು ನಿಂತುಕೊಂಡಿತ್ತು. ಸೆಲ್ಲಾರ್ ಮಧ್ಯದಲ್ಲೇ ನೀರಿನ ಸಂಪ್ ಸಹ ಇತ್ತು. ಅದು ಬಾಲಕರಿಗೆ ಗೊತ್ತಿರಲಿಲ್ಲ.’</p>.<p>‘ಚಂದ್ರು ಸೇರಿ ಮೂವರು ಆಡಲೆಂದು ತಳಮಹಡಿಯಲ್ಲಿ ನಿಂತಿದ್ದ ನೀರಿಗೆ ಇಳಿದಿದ್ದರು. ಆಡುತ್ತಲೇ ಚಂದ್ರು ಸಂಪ್ನಲ್ಲಿ ಬಿದ್ದು ಮುಳುಗಿದ್ದ. ಆತ ಕಾಣಿಸದಿದ್ದಾಗ ಗಾಬರಿಗೊಂಡ ಒಬ್ಬಾತ, ನೀರಿನಿಂದ ಮೇಲೆ ಬಂದು ರಕ್ಷಣೆಗಾಗಿ ಕೂಗಾಡಿದ್ದ. ಅಷ್ಟರಲ್ಲಿ, ಇನ್ನೊಬ್ಬ ಸಹ ಸಂಪಿನೊಳಗೆ ಮುಳುಗುತ್ತಿದ್ದ’ ಎಂದರು.</p>.<p>‘ಮುಳುಗುತ್ತಿದ್ದ ಬಾಲಕನನ್ನು ಸ್ಥಳೀಯರ ನೆರವಿನಲ್ಲಿ ರಕ್ಷಿಸಲಾಗಿದೆ. ಆದರೆ, ಚಂದ್ರು ಸಂಪ್ನಲ್ಲಿ ಮುಳುಗಿ ಮೃತಪಟ್ಟ. ಆತನ ಮೃತದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಅಧಿಕಾರಿ ಹೇಳಿದರು.</p>.<p class="Subhead"><strong>ಕಟ್ಟಡ ಮಾಲೀಕರ ವಿಚಾರಣೆ:</strong> ‘ಸೆಲ್ಲಾರ್ ಮಧ್ಯದಲ್ಲಿದ್ದ ನೀರಿನ ಸಂಪ್ನ ಮುಚ್ಚಳ ಮುಚ್ಚಿರಲಿಲ್ಲ. ಇದುವೇ ಅವಘಡಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಟ್ಟಡ ಮಾಲೀಕರನ್ನು ವಿಚಾರಣೆ ನಡೆಸಲಾಗುವುದು’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>