ಅಲ್ಲದೆ, ವನ್ಯಜೀವಿ ಕ್ಷೇತ್ರದ ವಿಷಯ ತಜ್ಞರು, ಜೀವಶಾಸ್ತ್ರಜ್ಞರು, ಪರಿಸರವಾದಿಗಳಾಗಿ ಗುರುತಿಸಿಕೊಂಡಿರುವ ಚೇತನ್ ಬಿ., ಸೋಮಶೇಖರ್, ಶಿವಪ್ರಕಾಶ್, ಅಲೋಕ್ ವಿಶ್ವನಾಥ್, ನವೀನ್ ಜಿ.ಎಸ್, ವಿನೋದ್ ಕುಮಾರ್ ಬಿ. ನಾಯ್ಕ್, ದಿನೇಶ್ ಸಿಂಘ್ವಿ, ಕೆ.ಎಸ್.ಎನ್. ಚಿಕ್ಕೆರೂರು, ತ್ಯಾಗ್ ಉತ್ತಪ್ಪ, ಜೋಸೆಫ್ ಹೂವರ್ ಕೂಡಾ ಮಂಡಳಿಯ ಸದಸ್ಯರಾಗಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸದಸ್ಯ ಕಾರ್ಯದರ್ಶಿಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಇತರ 12 ಮಂದಿ ಅಧಿಕಾರಿ ಸದಸ್ಯರಾಗಿ ಇರಲಿದ್ದಾರೆ.