<p><strong>ಬೆಂಗಳೂರು: </strong>ಪತಿಗೆ ₹20 ಲಕ್ಷದ ಆಮಿಷವೊಡ್ಡಿ ಪ್ರಿಯಕರನ ಜತೆ ಪರಾರಿಯಾದ ಮಹಿಳೆ ಹಣವನ್ನೂ ಕೊಡದೆ, ವಿಚ್ಛೇದನಕ್ಕೂ ಅರ್ಜಿ ಸಲ್ಲಿಸದೆ ಸತಾಯಿಸುತ್ತಿದ್ದಾರೆ ಎನ್ನಲಾದ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.</p>.<p>ಹೊಂಗಸಂದ್ರದ ಯಲ್ಲಾರೆಡ್ಡಿ ಎಂಬುವರು 2018ರ ಜುಲೈ 8ರಂದು ಮಹಿಳೆಯನ್ನು ಮದುವೆಯಾಗಿದ್ದರು. ಮದುವೆ ಬಳಿಕ ಮಹಿಳೆ ತಾನು ಶಿವು ಎಂಬಾತನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಹೋಗಲು ಅವಕಾಶ ನೀಡಿದರೆ ಮದುವೆ ಖರ್ಚುವೆಚ್ಚ ಸೇರಿದಂತೆ ₹20 ಲಕ್ಷ ಕೊಡುವುದಾಗಿ ಆಮಿಷವೊಡ್ಡಿದರು. ಈ ಬಗ್ಗೆ ಸಂಬಂಧಿಗಳಾದ ಆನಂದರೆಡ್ಡಿ ಮತ್ತು ಕೃಷ್ಣಾರೆಡ್ಡಿ ಸಮ್ಮುಖದಲ್ಲಿ ಮಾತುಕತೆ ನಡೆಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಒಪ್ಪಂದದಂತೆ ಮಹಿಳೆ ಪ್ರಿಯಕರನ ಜತೆ ಪಲಾಯನ ಮಾಡಿದರು. ಆದರೆ, ಇದುವರೆಗೂ ಆಕೆ ಹಣ ನೀಡಿಲ್ಲ. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿಲ್ಲ. ಇದೇ 23ರಂದು ತಮ್ಮ ಮನೆ ಮುಂದೆ ನಡೆದುಹೋಗುತ್ತಿದ್ದ ಕೃಷ್ಣಾರೆಡ್ಡಿ, ಆನಂದರೆಡ್ಡಿ ಅವರನ್ನು ಯಲ್ಲಾರೆಡ್ಡಿ ವಿಚಾರಿಸಿದಾಗ ಹಲ್ಲೆ ಮಾಡಿದರು. ‘ನಿನಗೆ ಕೊಡಬೇಕಾದ ಹಣದಲ್ಲಿ ₹2 ಲಕ್ಷವನ್ನು ಬೇರೆಯವರಿಗೆ ಕೊಟ್ಟರೆ ನಿನ್ನ ಕಥೆ ಮುಗಿಸುತ್ತಾರೆ ಎಂಬುದಾಗಿ ಪತ್ನಿ ಹೇಳಿರುವುದಾಗಿ ಬೆದರಿಕೆ ಹಾಕಿದರು’ ಎಂದು ಯಲ್ಲಾರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.</p>.<p class="Briefhead"><strong>ಉದ್ಯೋಗದ ಆಮಿಷ: ₹17.45 ಲಕ್ಷ ವಂಚನೆ</strong></p>.<p>ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ ₹ 17.45 ಲಕ್ಷ ಪಡೆದು ವಂಚಿಸಿದ ಆರೋಪದಲ್ಲಿ ಯಲಹಂಕ ನ್ಯೂ ಟೌನ್ ನಿವಾಸಿ ಸುಬ್ರಹ್ಮಣ್ಯ ಪ್ರಭು ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ವಂಚನೆಗೆ ಒಳಗಾದ ಬಸವನಗುಡಿಯ ಎಂ.ಆರ್. ನಿತಾನ್ ರಾಜ್ ಎಂಬುವವರು ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದಾರೆ. ಉದ್ಯೋಗ ದೊರಕಿಸಿ ಕೊಡುವುದಾಗಿ ಹಣ ಪಡೆದ ಆರೋಪಿ, ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾನೆ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.</p>.<p class="Briefhead"><strong>ಪಾನಮತ್ತನಿಂದ ಹೆಡ್ ಕಾನ್ಸ್ಟೆಬಲ್ಗೆ ಹಲ್ಲೆ</strong></p>.<p>ಪಾನಮತ್ತನಾಗಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ಮಾಡಿದ ಘಟನೆ ವರ್ತೂರು ಕಾಲೇಜು ಜಂಕ್ಷನ್ ಬಳಿ ನಡೆದಿದೆ.</p>.<p>ವರ್ತೂರು ಠಾಣೆಯ ವೈಟ್ಫೀಲ್ಡ್ ಸಂಚಾರ ವಿಭಾಗದ ಹೆಡ್ ಕಾನ್ಸ್ಟೆಬಲ್ ಎಸ್.ಜೆ. ಆನಂದ್ ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ಆಕಾಶ್ ತ್ರಿಪಾಠಿ ವಿರುದ್ಧ ವರ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಪತಿಗೆ ₹20 ಲಕ್ಷದ ಆಮಿಷವೊಡ್ಡಿ ಪ್ರಿಯಕರನ ಜತೆ ಪರಾರಿಯಾದ ಮಹಿಳೆ ಹಣವನ್ನೂ ಕೊಡದೆ, ವಿಚ್ಛೇದನಕ್ಕೂ ಅರ್ಜಿ ಸಲ್ಲಿಸದೆ ಸತಾಯಿಸುತ್ತಿದ್ದಾರೆ ಎನ್ನಲಾದ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.</p>.<p>ಹೊಂಗಸಂದ್ರದ ಯಲ್ಲಾರೆಡ್ಡಿ ಎಂಬುವರು 2018ರ ಜುಲೈ 8ರಂದು ಮಹಿಳೆಯನ್ನು ಮದುವೆಯಾಗಿದ್ದರು. ಮದುವೆ ಬಳಿಕ ಮಹಿಳೆ ತಾನು ಶಿವು ಎಂಬಾತನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಹೋಗಲು ಅವಕಾಶ ನೀಡಿದರೆ ಮದುವೆ ಖರ್ಚುವೆಚ್ಚ ಸೇರಿದಂತೆ ₹20 ಲಕ್ಷ ಕೊಡುವುದಾಗಿ ಆಮಿಷವೊಡ್ಡಿದರು. ಈ ಬಗ್ಗೆ ಸಂಬಂಧಿಗಳಾದ ಆನಂದರೆಡ್ಡಿ ಮತ್ತು ಕೃಷ್ಣಾರೆಡ್ಡಿ ಸಮ್ಮುಖದಲ್ಲಿ ಮಾತುಕತೆ ನಡೆಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.</p>.<p>ಒಪ್ಪಂದದಂತೆ ಮಹಿಳೆ ಪ್ರಿಯಕರನ ಜತೆ ಪಲಾಯನ ಮಾಡಿದರು. ಆದರೆ, ಇದುವರೆಗೂ ಆಕೆ ಹಣ ನೀಡಿಲ್ಲ. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿಲ್ಲ. ಇದೇ 23ರಂದು ತಮ್ಮ ಮನೆ ಮುಂದೆ ನಡೆದುಹೋಗುತ್ತಿದ್ದ ಕೃಷ್ಣಾರೆಡ್ಡಿ, ಆನಂದರೆಡ್ಡಿ ಅವರನ್ನು ಯಲ್ಲಾರೆಡ್ಡಿ ವಿಚಾರಿಸಿದಾಗ ಹಲ್ಲೆ ಮಾಡಿದರು. ‘ನಿನಗೆ ಕೊಡಬೇಕಾದ ಹಣದಲ್ಲಿ ₹2 ಲಕ್ಷವನ್ನು ಬೇರೆಯವರಿಗೆ ಕೊಟ್ಟರೆ ನಿನ್ನ ಕಥೆ ಮುಗಿಸುತ್ತಾರೆ ಎಂಬುದಾಗಿ ಪತ್ನಿ ಹೇಳಿರುವುದಾಗಿ ಬೆದರಿಕೆ ಹಾಕಿದರು’ ಎಂದು ಯಲ್ಲಾರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.</p>.<p class="Briefhead"><strong>ಉದ್ಯೋಗದ ಆಮಿಷ: ₹17.45 ಲಕ್ಷ ವಂಚನೆ</strong></p>.<p>ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ ₹ 17.45 ಲಕ್ಷ ಪಡೆದು ವಂಚಿಸಿದ ಆರೋಪದಲ್ಲಿ ಯಲಹಂಕ ನ್ಯೂ ಟೌನ್ ನಿವಾಸಿ ಸುಬ್ರಹ್ಮಣ್ಯ ಪ್ರಭು ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ವಂಚನೆಗೆ ಒಳಗಾದ ಬಸವನಗುಡಿಯ ಎಂ.ಆರ್. ನಿತಾನ್ ರಾಜ್ ಎಂಬುವವರು ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದಾರೆ. ಉದ್ಯೋಗ ದೊರಕಿಸಿ ಕೊಡುವುದಾಗಿ ಹಣ ಪಡೆದ ಆರೋಪಿ, ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾನೆ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.</p>.<p class="Briefhead"><strong>ಪಾನಮತ್ತನಿಂದ ಹೆಡ್ ಕಾನ್ಸ್ಟೆಬಲ್ಗೆ ಹಲ್ಲೆ</strong></p>.<p>ಪಾನಮತ್ತನಾಗಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ಮಾಡಿದ ಘಟನೆ ವರ್ತೂರು ಕಾಲೇಜು ಜಂಕ್ಷನ್ ಬಳಿ ನಡೆದಿದೆ.</p>.<p>ವರ್ತೂರು ಠಾಣೆಯ ವೈಟ್ಫೀಲ್ಡ್ ಸಂಚಾರ ವಿಭಾಗದ ಹೆಡ್ ಕಾನ್ಸ್ಟೆಬಲ್ ಎಸ್.ಜೆ. ಆನಂದ್ ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ಆಕಾಶ್ ತ್ರಿಪಾಠಿ ವಿರುದ್ಧ ವರ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>