ಎಳೆದು ಕೂರಿಸಿಕೊಂಡರು: ಕೆಲಸದ ನಿಮಿತ್ತ ಉಡುಪಿಯಿಂದ ನಗರಕ್ಕೆ ಬಂದಿದ್ದ 50 ವರ್ಷದ ವ್ಯಕ್ತಿಯೊಬ್ಬರು, ಮೆಜೆಸ್ಟಿಕ್ ಸಮೀಪದ ‘ಯಾತ್ರಿ ನಿವಾಸ್’ ಲಾಡ್ಜ್ನಲ್ಲಿ ರೂಂ ಮಾಡಿದ್ದರು. ಸೆ.11ರ ರಾತ್ರಿ ಅವರು ಊಟ ಮಾಡಿಕೊಂಡು ಲಾಡ್ಜ್ಗೆ ನಡೆದು ಹೋಗುತ್ತಿದ್ದಾಗ ಸುಧಾ ಹಾಗೂ ಆಶಾ ತಮ್ಮೊಟ್ಟಿಗೆ ಬರವಂತೆ ಕರೆದಿದ್ದರು. ಅವರು ಒಪ್ಪದೆ ಮುಂದೆ ಸಾಗುವಾಗ ರಾಜೇಶ್ನ ಆಟೊದಲ್ಲಿ ಇತರೆ ಮಹಿಳೆಯರೂ ಸ್ಥಳಕ್ಕೆ ಬಂದಿದ್ದರು. ಎಲ್ಲರೂ ಸೇರಿ ಅವರನ್ನು ಆಟೊದಲ್ಲಿ ಎಳೆದು ಕೂರಿಸಿಕೊಂಡು, ಸಂಗೊಳ್ಳಿ ರಾಯಣ್ಣ ಮೆಟ್ರೊ ನಿಲ್ದಾಣದ ಬಳಿ ಕರೆದೊಯ್ದಿದ್ದರು. ರಕ್ತ ಬರುವಂತೆ ಅವರ ಭುಜವನ್ನು ಕಚ್ಚಿ, ₹ 3 ಸಾವಿರದೊಂದಿಗೆ ಪರಾರಿಯಾಗಿದ್ದರು.