ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಸಂದ್ರ, ಅಬ್ಬಿಗೆರೆ, ಶೆಟ್ಟಿಹಳ್ಳಿ, ಗೆಳೆಯರ ಬಳಗ, ಸಿಡೇದಹಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಸಿದ್ದು ಶೀಘ್ರವಾಗಿ ಕಾವೇರಿ ಐದನೇ ಹಂತದ ಯೋಜನೆ ಮುಗಿದರೆ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿಸಬಹುದು. ವಾರಕ್ಕೆ ಒಮ್ಮೆಯಾದರೂ ನೀರು ಬಿಡುತ್ತಿಲ್ಲ, ಕೊಳವೆಬಾವಿ ಬತ್ತಿದ್ದು, ನೀರು ಬಿಟ್ಟರೆ ಅರ್ಧ ಸಂಪು ಕೂಡ ತುಂಬುವುದಿಲ್ಲ. ಟ್ಯಾಂಕರ್ ನೀರು ಬಳಸಬೇಕಾಗಿದೆ ಎಂದು ಸ್ಥಳೀಯರ ಗಮನ ಸೆಳೆದರು.