<p><strong>ಬೆಂಗಳೂರು</strong>: ‘ಗಾಂಧಿನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅಕ್ರಮ ನಡೆದಿದೆ. ₹ 450 ಕೋಟಿಗಳಷ್ಟುಸಾರ್ವಜನಿಕ ಹಣ ಲೂಟಿಯಾಗಿದೆ’ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದರು.</p>.<p>‘ಈ ಕ್ಷೇತ್ರದಲ್ಲಿವಿವಿಧ ಕಾಮಗಾರಿಗಳಿಗೆ 2015-16 ರಿಂದ 2020ರ ನವೆಂಬರ್ವರೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಬಿಬಿಎಂಪಿಯ ವಿವಿಧ ಅನುದಾನಗಳಿಂದ ಒಟ್ಟು ₹ 640.23 ಕೋಟಿ ಬಿಡುಗಡೆಯಾಗಿದೆ. 2019-20ರಲ್ಲಿ ಮತ್ತು 2020-21ರ ಮೊದಲ ಆರು ತಿಂಗಳುಗಳಲ್ಲಿ ಗಾಂಧೀನಗರಕ್ಕೆ ₹ 252.23 ಕೋಟಿ ಬಿಡುಗಡೆ ಮಾಡಲಾಗಿದೆ. ಇಷ್ಟಾಗಿಯೂ ಎಲ್ಲ ಏಳು ವಾರ್ಡ್ಗಳಲ್ಲಿ ಗರಿಷ್ಠ ₹ 150 ಕೋಟಿಗಳಷ್ಟು ಮೊತ್ತದ ಕಾಮಗಾರಿಗಳು ಪೂರ್ಣಗೊಂಡ ಕುರುಹುಗಳೂ ಕಾಣಸಿಗುವುದಿಲ್ಲ. ಬಹುತೇಕ ಕಾಮಗಾರಿಗಳನ್ನು ನಡೆಸಿಯೇ ಇಲ್ಲ. ಕೆಲವು ಕಾಮಗಾರಿಗಳಿಗೆ ಎರಡೆರಡು ಬಾರಿ ಬಿಲ್ ಪಾವತಿಸಲಾಗಿದೆ’ ಎಂದು ದೂರಿದರು.</p>.<p>‘ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರಗಳು, ಬಿ.ಆರ್. ಸಂಖ್ಯೆಯ ದಾಖಲೆಗಳು, ಗುಣಮಟ್ಟ ಪರಿಶೀಲನೆ ವರದಿಗಳು, ಎಂ.ಬಿ ಪುಸ್ತಕದ ದಾಖಲೆಗಳನ್ನು ಗಾಂಧಿನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಂಪ್ಯೂಟರ್ನಿಂದ ಅಳಿಸಿ ಹಾಕಲಾಗಿದೆ. ಈ ಬಗ್ಗೆ ಅವರೇ ಲಿಖಿತ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು.</p>.<p>‘ಈ ವಿಭಾಗದ ಶೇ 75ರಷ್ಟು ಕಾಮಗಾರಿಗಳನ್ನು ಕೆಆರ್ಐಡಿಎಲ್ ಮೂಲಕವೇ ನಿರ್ವಹಿಸಲಾಗಿದೆ. ಪಾಲಾಕ್ಷಪ್ಪ, ವೆಂಕಟೇಶ್ ಮತ್ತು ರಾಜು ಎಂಬುವರು ಕಾರ್ಯಪಾಲಕ ಎಂಜಿನಿಯರ್ (ಇಇ) ಆಗಿದ್ದಾಗ ಈ ಕಾಮಗಾರಿಗಳು ನಡೆದಿವೆ. ಇಇ ಕಚೇರಿಯಲ್ಲಿ ಚಿಕ್ಕಹೊನ್ನಯ್ಯ ಅವರು 20 ವರ್ಷಗಳಿಂದ ಸಿಬ್ಬಂದಿಯಾಗಿದ್ದಾರೆ. ಬಡ್ತಿಯನ್ನೂ ನಿರಾಕರಿಸಿ ಅವರು ಇಲ್ಲಿ ತಳವೂರಿದ್ದಾರೆ’ ಎಂದರು. </p>.<p>‘ಬಿನ್ನಿಪೇಟೆ ವಾರ್ಡ್ನಲ್ಲಿ 2019-20 ರ ಅವಧಿಯಲ್ಲಿ ತಲಾ 1.25 ಕೋಟಿ ಮೊತ್ತದ ಎರಡು ಕಾಮಗಾರಿಗಳು ಮತ್ತು ₹ 96 ಲಕ್ಷ ಮೊತ್ತದ ಒಂದು ಕಾಮಗಾರಿಗೆ ಸಂಬಂಧಿಸಿದ ಕಾಮಗಾರಿ ಪ್ರಮಾಣಪತ್ರಗಳು ಕಳೆದು ಹೋಗಿವೆ ಎಂದು ಬಿಂಬಿಸಿ ಅದರ ನಕಲನ್ನು ಪಡೆಯುವ ಪ್ರಯತ್ನ ನಡೆದಿತ್ತು. ಕಾಟನ್ಪೇಟೆ ವಾರ್ಡ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನದಲ್ಲಿ ಒಟ್ಟು ₹ 4 ಕೋಟಿ ಮೊತ್ತದ ಕಾಮಗಾರಿಗಳನ್ನು ಕೆಆರ್ಐಡಿಎಲ್ ಮೂಲಕ ನಿರ್ವಹಿಸಲು ಅನುಮತಿ ಪಡೆಯಲಾಗಿದೆ. ಕೆಲಸ ನಿರ್ವಹಿಸದೆಯೇ ಹಣ ಬಿಡುಗಡೆ ಮಾಡಿಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.</p>.<p>ಈ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಲು ಶಿಫಾರಸು ಮಾಡುವಂತೆ ಒತ್ತಾಯಿಸಿ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ ಹಾಗೂ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.</p>.<p>ದೂರಿನ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗೌರವ ಗುಪ್ತ, ‘ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅಧಿಕಾರಿಗಳು ತಪ್ಪೆಸಗಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.</p>.<p><strong>‘ಯಡಿಯೂರು ವಾರ್ಡ್ ಕಾಮಗಾರಿ ಕೆಆರ್ಐಡಿಎಲ್ಗೆ ವಹಿಸಿದ್ದೇಕೆ’</strong></p>.<p>‘ಗಾಂಧಿನಗರ ಕ್ಷೇತ್ರದ ಕಾಮಗಾರಿಗಳನ್ನು ಕೆಆರ್ಐಡಿಎಲ್ಗೆ ವಹಿಸಿದ್ದನ್ನು ಟೀಕಿಸುವ ಎನ್.ಆರ್.ರಮೇಶ್ ಅವರು ಅವರ ಶ್ರೀಮತಿಯವರು ಪ್ರತಿನಿಧಿಸಿದ್ದ ಯಡಿಯೂರು ವಾರ್ಡಿನ ಕಸ ನಿರ್ವಹಣೆ ಕಾಮಗಾರಿಗಳನ್ನು ಕೆಆರ್ಐಡಿಎಲ್ ಮೂಲಕ ಮಾಡಿಸಿದ್ದೇಕೆ. ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿ ನಗರ ಕ್ಷೇತ್ರಗಳ ಕಾಮಗಾರಿಗಳನ್ನೂ ಈ ಸಂಸ್ಥೆಗೆ ವಹಿಸಲಾಗಿದೆಯಲ್ಲವೇ. ಅವೆಲ್ಲವೂ ಸರಿ ಇವೆಯೇ’ ಎಂದು ಕಾಂಗ್ರೆಸ್ ವಕ್ತಾರ ಎ.ಎನ್.ನಟರಾಜ ಗೌಡ ಪ್ರಶ್ನಿಸಿದ್ದಾರೆ.</p>.<p>‘ಕೆಆರ್ಐಡಿಎಲ್ ಸಂಸ್ಥೆಗೆ ಹೆಚ್ಚಿನ ಕಾಮಗಾರಿ ವಹಿಸಲು ಕೆಟಿಪಿಪಿ ಕಾಯ್ದೆಗೆ ಕೆಲವೇ ತಿಂಗಳುಗಳ ಹಿಂದೆ ಈಗಿನ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ನವನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನೂ ಈ ಸಂಸ್ಥೆ ಮೂಲಕವೇ ನಿರ್ವಹಿಸಲು ಅವಕಾಶ ಕಲ್ಪಿಸಿದೆಯಲ್ಲವೇ. ಈ ಬಗ್ಗೆ ಏಕೆ ಸೊಲ್ಲೆತ್ತಿಲ್ಲ ಎಂದೂ ಕೇಳಿದ್ದಾರೆ. </p>.<p>‘ಮುನಿರತ್ನ, ಎಸ್.ಟಿ.ಸೋಮಶೇಖರ್ ವಿರುದ್ಧವೂ ಅಕ್ರಮವಾಗಿ ಕಾಮಗಾರಿ ನಡೆಸಿದ ಆಪಾದನೆಯನ್ನು ಎನ್.ಆರ್.ರಮೇಶ್ ಮಾಡಿದ್ದರು. ಈಗ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. ಆ ಆಪಾದನೆಗಳ ತನಿಖೆಗಳು ಏನಾದವು ತಿಳಿಸುವಿರಾ. ಕೇವಲ ಗಾಂಧಿನಗರದ ಮಾತ್ರ ಏಕೆ ಕಾಣುತ್ತಿದೆ. ಪಕ್ಕದ ಮಲ್ಲೇಶ್ವರ ಕ್ಷೇತ್ರದಲ್ಲಿ ಎಲ್ಲವೂ ಸರಿ ಇವೆಯೇ’ ಎಂದೂ ಮಾಹಿತಿ ಕೇಳಿದ್ದಾರೆ.</p>.<p>‘2019-20ರಿಂದ ಮತ್ತು 2020-1ರ ಮೊದಲ ಆರು ತಿಂಗಳುಗಳಲ್ಲಿ ಗಾಂಧಿನಗರ ಕ್ಷೇತ್ರಕ್ಕೆ ಅಕ್ರಮವಾಗಿ ₹ 252.23 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಮತ್ತು ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತವೇ ಇತ್ತು. ಅವರ ಆರೋಪ ಸರ್ಕಾರದ ವಿರುದ್ಧವೇ ಇರಬೇಕು’ ಎಂದರು.</p>.<p>‘ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರಗಳು, ಗುಣಮಟ್ಟ ಪರಿಶೀಲನೆ ವರದಿಗಳು ಸಂಬಂಧಪಟ್ಟ ಕಡತದಲ್ಲಿರುತ್ತವೆ. ಎಂ.ಬಿ ಪುಸ್ತಕ ಎಂಜಿನಿಯರ್ ಬಳಿ ಇರುತ್ತದೆ. ಬಿ.ಆರ್. ಸಂಖ್ಯೆ ಅದರ ರಿಜಿಸ್ಟರ್ನಲ್ಲಿರುತ್ತದೆ. ಇವುಗಳೆಲ್ಲವನ್ನೂ ಐಎಫ್ಎಂಎಸ್ ತಂತ್ರಾಂಶ ಮೂಲಕ ಸಾರ್ವಜನಿಕರೂ ನೋಡಬಹುದು’ ಎಂದ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಗಾಂಧಿನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅಕ್ರಮ ನಡೆದಿದೆ. ₹ 450 ಕೋಟಿಗಳಷ್ಟುಸಾರ್ವಜನಿಕ ಹಣ ಲೂಟಿಯಾಗಿದೆ’ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದರು.</p>.<p>‘ಈ ಕ್ಷೇತ್ರದಲ್ಲಿವಿವಿಧ ಕಾಮಗಾರಿಗಳಿಗೆ 2015-16 ರಿಂದ 2020ರ ನವೆಂಬರ್ವರೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಬಿಬಿಎಂಪಿಯ ವಿವಿಧ ಅನುದಾನಗಳಿಂದ ಒಟ್ಟು ₹ 640.23 ಕೋಟಿ ಬಿಡುಗಡೆಯಾಗಿದೆ. 2019-20ರಲ್ಲಿ ಮತ್ತು 2020-21ರ ಮೊದಲ ಆರು ತಿಂಗಳುಗಳಲ್ಲಿ ಗಾಂಧೀನಗರಕ್ಕೆ ₹ 252.23 ಕೋಟಿ ಬಿಡುಗಡೆ ಮಾಡಲಾಗಿದೆ. ಇಷ್ಟಾಗಿಯೂ ಎಲ್ಲ ಏಳು ವಾರ್ಡ್ಗಳಲ್ಲಿ ಗರಿಷ್ಠ ₹ 150 ಕೋಟಿಗಳಷ್ಟು ಮೊತ್ತದ ಕಾಮಗಾರಿಗಳು ಪೂರ್ಣಗೊಂಡ ಕುರುಹುಗಳೂ ಕಾಣಸಿಗುವುದಿಲ್ಲ. ಬಹುತೇಕ ಕಾಮಗಾರಿಗಳನ್ನು ನಡೆಸಿಯೇ ಇಲ್ಲ. ಕೆಲವು ಕಾಮಗಾರಿಗಳಿಗೆ ಎರಡೆರಡು ಬಾರಿ ಬಿಲ್ ಪಾವತಿಸಲಾಗಿದೆ’ ಎಂದು ದೂರಿದರು.</p>.<p>‘ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರಗಳು, ಬಿ.ಆರ್. ಸಂಖ್ಯೆಯ ದಾಖಲೆಗಳು, ಗುಣಮಟ್ಟ ಪರಿಶೀಲನೆ ವರದಿಗಳು, ಎಂ.ಬಿ ಪುಸ್ತಕದ ದಾಖಲೆಗಳನ್ನು ಗಾಂಧಿನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕಂಪ್ಯೂಟರ್ನಿಂದ ಅಳಿಸಿ ಹಾಕಲಾಗಿದೆ. ಈ ಬಗ್ಗೆ ಅವರೇ ಲಿಖಿತ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು.</p>.<p>‘ಈ ವಿಭಾಗದ ಶೇ 75ರಷ್ಟು ಕಾಮಗಾರಿಗಳನ್ನು ಕೆಆರ್ಐಡಿಎಲ್ ಮೂಲಕವೇ ನಿರ್ವಹಿಸಲಾಗಿದೆ. ಪಾಲಾಕ್ಷಪ್ಪ, ವೆಂಕಟೇಶ್ ಮತ್ತು ರಾಜು ಎಂಬುವರು ಕಾರ್ಯಪಾಲಕ ಎಂಜಿನಿಯರ್ (ಇಇ) ಆಗಿದ್ದಾಗ ಈ ಕಾಮಗಾರಿಗಳು ನಡೆದಿವೆ. ಇಇ ಕಚೇರಿಯಲ್ಲಿ ಚಿಕ್ಕಹೊನ್ನಯ್ಯ ಅವರು 20 ವರ್ಷಗಳಿಂದ ಸಿಬ್ಬಂದಿಯಾಗಿದ್ದಾರೆ. ಬಡ್ತಿಯನ್ನೂ ನಿರಾಕರಿಸಿ ಅವರು ಇಲ್ಲಿ ತಳವೂರಿದ್ದಾರೆ’ ಎಂದರು. </p>.<p>‘ಬಿನ್ನಿಪೇಟೆ ವಾರ್ಡ್ನಲ್ಲಿ 2019-20 ರ ಅವಧಿಯಲ್ಲಿ ತಲಾ 1.25 ಕೋಟಿ ಮೊತ್ತದ ಎರಡು ಕಾಮಗಾರಿಗಳು ಮತ್ತು ₹ 96 ಲಕ್ಷ ಮೊತ್ತದ ಒಂದು ಕಾಮಗಾರಿಗೆ ಸಂಬಂಧಿಸಿದ ಕಾಮಗಾರಿ ಪ್ರಮಾಣಪತ್ರಗಳು ಕಳೆದು ಹೋಗಿವೆ ಎಂದು ಬಿಂಬಿಸಿ ಅದರ ನಕಲನ್ನು ಪಡೆಯುವ ಪ್ರಯತ್ನ ನಡೆದಿತ್ತು. ಕಾಟನ್ಪೇಟೆ ವಾರ್ಡ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನದಲ್ಲಿ ಒಟ್ಟು ₹ 4 ಕೋಟಿ ಮೊತ್ತದ ಕಾಮಗಾರಿಗಳನ್ನು ಕೆಆರ್ಐಡಿಎಲ್ ಮೂಲಕ ನಿರ್ವಹಿಸಲು ಅನುಮತಿ ಪಡೆಯಲಾಗಿದೆ. ಕೆಲಸ ನಿರ್ವಹಿಸದೆಯೇ ಹಣ ಬಿಡುಗಡೆ ಮಾಡಿಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.</p>.<p>ಈ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಲು ಶಿಫಾರಸು ಮಾಡುವಂತೆ ಒತ್ತಾಯಿಸಿ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ ಹಾಗೂ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.</p>.<p>ದೂರಿನ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗೌರವ ಗುಪ್ತ, ‘ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅಧಿಕಾರಿಗಳು ತಪ್ಪೆಸಗಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.</p>.<p><strong>‘ಯಡಿಯೂರು ವಾರ್ಡ್ ಕಾಮಗಾರಿ ಕೆಆರ್ಐಡಿಎಲ್ಗೆ ವಹಿಸಿದ್ದೇಕೆ’</strong></p>.<p>‘ಗಾಂಧಿನಗರ ಕ್ಷೇತ್ರದ ಕಾಮಗಾರಿಗಳನ್ನು ಕೆಆರ್ಐಡಿಎಲ್ಗೆ ವಹಿಸಿದ್ದನ್ನು ಟೀಕಿಸುವ ಎನ್.ಆರ್.ರಮೇಶ್ ಅವರು ಅವರ ಶ್ರೀಮತಿಯವರು ಪ್ರತಿನಿಧಿಸಿದ್ದ ಯಡಿಯೂರು ವಾರ್ಡಿನ ಕಸ ನಿರ್ವಹಣೆ ಕಾಮಗಾರಿಗಳನ್ನು ಕೆಆರ್ಐಡಿಎಲ್ ಮೂಲಕ ಮಾಡಿಸಿದ್ದೇಕೆ. ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿ ನಗರ ಕ್ಷೇತ್ರಗಳ ಕಾಮಗಾರಿಗಳನ್ನೂ ಈ ಸಂಸ್ಥೆಗೆ ವಹಿಸಲಾಗಿದೆಯಲ್ಲವೇ. ಅವೆಲ್ಲವೂ ಸರಿ ಇವೆಯೇ’ ಎಂದು ಕಾಂಗ್ರೆಸ್ ವಕ್ತಾರ ಎ.ಎನ್.ನಟರಾಜ ಗೌಡ ಪ್ರಶ್ನಿಸಿದ್ದಾರೆ.</p>.<p>‘ಕೆಆರ್ಐಡಿಎಲ್ ಸಂಸ್ಥೆಗೆ ಹೆಚ್ಚಿನ ಕಾಮಗಾರಿ ವಹಿಸಲು ಕೆಟಿಪಿಪಿ ಕಾಯ್ದೆಗೆ ಕೆಲವೇ ತಿಂಗಳುಗಳ ಹಿಂದೆ ಈಗಿನ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ನವನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನೂ ಈ ಸಂಸ್ಥೆ ಮೂಲಕವೇ ನಿರ್ವಹಿಸಲು ಅವಕಾಶ ಕಲ್ಪಿಸಿದೆಯಲ್ಲವೇ. ಈ ಬಗ್ಗೆ ಏಕೆ ಸೊಲ್ಲೆತ್ತಿಲ್ಲ ಎಂದೂ ಕೇಳಿದ್ದಾರೆ. </p>.<p>‘ಮುನಿರತ್ನ, ಎಸ್.ಟಿ.ಸೋಮಶೇಖರ್ ವಿರುದ್ಧವೂ ಅಕ್ರಮವಾಗಿ ಕಾಮಗಾರಿ ನಡೆಸಿದ ಆಪಾದನೆಯನ್ನು ಎನ್.ಆರ್.ರಮೇಶ್ ಮಾಡಿದ್ದರು. ಈಗ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. ಆ ಆಪಾದನೆಗಳ ತನಿಖೆಗಳು ಏನಾದವು ತಿಳಿಸುವಿರಾ. ಕೇವಲ ಗಾಂಧಿನಗರದ ಮಾತ್ರ ಏಕೆ ಕಾಣುತ್ತಿದೆ. ಪಕ್ಕದ ಮಲ್ಲೇಶ್ವರ ಕ್ಷೇತ್ರದಲ್ಲಿ ಎಲ್ಲವೂ ಸರಿ ಇವೆಯೇ’ ಎಂದೂ ಮಾಹಿತಿ ಕೇಳಿದ್ದಾರೆ.</p>.<p>‘2019-20ರಿಂದ ಮತ್ತು 2020-1ರ ಮೊದಲ ಆರು ತಿಂಗಳುಗಳಲ್ಲಿ ಗಾಂಧಿನಗರ ಕ್ಷೇತ್ರಕ್ಕೆ ಅಕ್ರಮವಾಗಿ ₹ 252.23 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಮತ್ತು ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತವೇ ಇತ್ತು. ಅವರ ಆರೋಪ ಸರ್ಕಾರದ ವಿರುದ್ಧವೇ ಇರಬೇಕು’ ಎಂದರು.</p>.<p>‘ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರಗಳು, ಗುಣಮಟ್ಟ ಪರಿಶೀಲನೆ ವರದಿಗಳು ಸಂಬಂಧಪಟ್ಟ ಕಡತದಲ್ಲಿರುತ್ತವೆ. ಎಂ.ಬಿ ಪುಸ್ತಕ ಎಂಜಿನಿಯರ್ ಬಳಿ ಇರುತ್ತದೆ. ಬಿ.ಆರ್. ಸಂಖ್ಯೆ ಅದರ ರಿಜಿಸ್ಟರ್ನಲ್ಲಿರುತ್ತದೆ. ಇವುಗಳೆಲ್ಲವನ್ನೂ ಐಎಫ್ಎಂಎಸ್ ತಂತ್ರಾಂಶ ಮೂಲಕ ಸಾರ್ವಜನಿಕರೂ ನೋಡಬಹುದು’ ಎಂದ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>