<p><strong>ಬೆಂಗಳೂರು</strong>: ವಿಶ್ವ ಮೆದುಳು ಜ್ವರ ದಿನಾಚರಣೆ ಅಂಗವಾಗಿ ನಗರದ ಹಲವು ಕಟ್ಟಡಗಳು ಸೋಮವಾರ ರಾತ್ರಿ ಕೆಂಪು ಬಣ್ಣದ ದೀಪಗಳಿಂದ ಬೆಳಗಿದವು.</p>.<p>ನಿಮ್ಹಾನ್ಸ್ ಸಂಸ್ಥೆಯ ಏಳು ಕಟ್ಟಡಗಳ ಮೇಲೆ ಎಚ್ಚರಿಕೆಯ ಸಂಕೇತವಾದ ಕೆಂಪು ಬಣ್ಣದ ದೀಪಗಳನ್ನು ಬೆಳಗಿಸುವ ಮೂಲಕ ದಿನಾಚರಣೆ ಆಚರಿಸಲಾಗುತ್ತಿದೆ ಎಂದುನಿಮ್ಹಾನ್ಸ್ನ ವೈರಾಣು ತಜ್ಞ ಡಾ. ವಿ. ರವಿ ಹೇಳಿದರು.</p>.<p>ವಿಕಾಸಸೌಧ, ವಿಧಾನಸೌಧ, ಹೈಕೋರ್ಟ್, ಆರೋಗ್ಯಸೌಧ, ಬಿಬಿಎಂಪಿ ಕಚೇರಿ, ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಗಳ ಮೇಲೆ ಕೆಂಪು ಬಣ್ಣದ ದೀಪಗಳನ್ನು ಬೆಳಗಿಸಲು ಕೋರಲಾಗಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.</p>.<p>‘ಕಳೆದ ವರ್ಷ 15 ಜನರಿಗೆ ಮೆದುಳು ಜ್ವರ ಕಾಣಿಸಿಕೊಂಡಿದ್ದು, ಯಾರೊಬ್ಬರೂ ಮೃತಪಟ್ಟಿಲ್ಲ. ಕೋವಿಡ್ ಲಾಕ್ಡೌನ್ ಇದ್ದ ಕಾರಣ ಈ ರೀತಿಯ ಸಾಂಕ್ರಾಮಿಕ ರೋಗಗಳು ಕಳೆದ ವರ್ಷ ಕಡಿಮೆ ವರದಿಯಾದವು. ಮಲೇರಿಯಾ, ಡೆಂಗೆ ರೀತಿ ಮೆದುಳು ಜ್ವರ ಕೂಡ ಸಾಂಕ್ರಾಮಿಕ ರೋಗ. ಕೋಲಾರ, ಬಳ್ಳಾರಿ, ಮಂಡ್ಯ, ತುಮಕೂರು ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಈ ಸೋಂಕಿಗೆ ತುತ್ತಾದವರು ಹೆಚ್ಚಾಗಿ ಇದ್ದಾರೆ’ ಎಂದು ಹೇಳಿದರು.</p>.<p>‘ಭತ್ತ ಬೆಳೆಯುವ ಪ್ರದೇಶದಲ್ಲಿ ಹೆಚ್ಚಾಗಿ ಈ ರೋಗ ಹರಡುತ್ತದೆ. ಭತ್ತದ ಬೆಳೆಯಲ್ಲಿ ನಿಲ್ಲುವ ನೀರಿನಲ್ಲಿ ಹೆಚ್ಚಾಗಿ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಕೇರಳದಲ್ಲಿ 1994ರ ತನಕ ಈ ರೋಗದ ಸುಳಿವೇ ಇರಲಿಲ್ಲ. ಆಣೆಕಟ್ಟೆ ಕಟ್ಟಿ ಭತ್ತ ಬೆಳೆಯಲು ಆರಂಭವಾದ ಬಳಿಕ ಈ ಕಾಯಿಲೆ ಆ ರಾಜ್ಯವನ್ನು ಕಾಡುತ್ತಿದೆ’ ಎಂದು ಹೇಳಿದರು.</p>.<p>‘ಈ ಕಾಯಿಲೆಗೆ ಲಸಿಕೆ ಲಭ್ಯವಿದ್ದು, ಈ ರೋಗದಿಂದ ಸಾವಿನ ಪ್ರಮಾಣ ದೇಶದಲ್ಲಿ ಶೇ 6ರಷ್ಟಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೆದುಳು ಊತ, ಉರಿ ಕಾಣಿಸಿಕೊಂಡು ಮಕ್ಕಳು ಜ್ಞಾನ ತಪ್ಪುತ್ತವೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆ ಅಪಾಯದಿಂದ ಪಾರು ಮಾಡಬಹುದು’ ಎಂದರು.</p>.<p>ಸೋಂಕಿನಿಂದ ಗುಣಮುಖರಾದರೂ ಅತೀವ ಸುಸ್ತು, ಮೂರ್ಚೆರೋಗ, ಮಾನಸಿಕ ತೊಂದರೆ, ಮರೆಗುಳಿತನ ಹೀಗೆ ಹಲವು ತೊಂದರೆಗಳು ಕಾಡುವ ಸಾಧ್ಯತೆಗಳಿವೆ ಎಂದು ಹೇಳಿದರು.</p>.<p>‘ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು 2014ರಿಂದ ಪ್ರತಿವರ್ಷ ಫೆಬ್ರುವರಿ 22ರಂದು ವಿಶ್ವ ಮೆದುಳು ಜ್ವರ ದಿನಾಚರಣೆ ಆಚರಿಸಲಾಗುತ್ತಿದೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಿಶ್ವ ಮೆದುಳು ಜ್ವರ ದಿನಾಚರಣೆ ಅಂಗವಾಗಿ ನಗರದ ಹಲವು ಕಟ್ಟಡಗಳು ಸೋಮವಾರ ರಾತ್ರಿ ಕೆಂಪು ಬಣ್ಣದ ದೀಪಗಳಿಂದ ಬೆಳಗಿದವು.</p>.<p>ನಿಮ್ಹಾನ್ಸ್ ಸಂಸ್ಥೆಯ ಏಳು ಕಟ್ಟಡಗಳ ಮೇಲೆ ಎಚ್ಚರಿಕೆಯ ಸಂಕೇತವಾದ ಕೆಂಪು ಬಣ್ಣದ ದೀಪಗಳನ್ನು ಬೆಳಗಿಸುವ ಮೂಲಕ ದಿನಾಚರಣೆ ಆಚರಿಸಲಾಗುತ್ತಿದೆ ಎಂದುನಿಮ್ಹಾನ್ಸ್ನ ವೈರಾಣು ತಜ್ಞ ಡಾ. ವಿ. ರವಿ ಹೇಳಿದರು.</p>.<p>ವಿಕಾಸಸೌಧ, ವಿಧಾನಸೌಧ, ಹೈಕೋರ್ಟ್, ಆರೋಗ್ಯಸೌಧ, ಬಿಬಿಎಂಪಿ ಕಚೇರಿ, ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಗಳ ಮೇಲೆ ಕೆಂಪು ಬಣ್ಣದ ದೀಪಗಳನ್ನು ಬೆಳಗಿಸಲು ಕೋರಲಾಗಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.</p>.<p>‘ಕಳೆದ ವರ್ಷ 15 ಜನರಿಗೆ ಮೆದುಳು ಜ್ವರ ಕಾಣಿಸಿಕೊಂಡಿದ್ದು, ಯಾರೊಬ್ಬರೂ ಮೃತಪಟ್ಟಿಲ್ಲ. ಕೋವಿಡ್ ಲಾಕ್ಡೌನ್ ಇದ್ದ ಕಾರಣ ಈ ರೀತಿಯ ಸಾಂಕ್ರಾಮಿಕ ರೋಗಗಳು ಕಳೆದ ವರ್ಷ ಕಡಿಮೆ ವರದಿಯಾದವು. ಮಲೇರಿಯಾ, ಡೆಂಗೆ ರೀತಿ ಮೆದುಳು ಜ್ವರ ಕೂಡ ಸಾಂಕ್ರಾಮಿಕ ರೋಗ. ಕೋಲಾರ, ಬಳ್ಳಾರಿ, ಮಂಡ್ಯ, ತುಮಕೂರು ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಈ ಸೋಂಕಿಗೆ ತುತ್ತಾದವರು ಹೆಚ್ಚಾಗಿ ಇದ್ದಾರೆ’ ಎಂದು ಹೇಳಿದರು.</p>.<p>‘ಭತ್ತ ಬೆಳೆಯುವ ಪ್ರದೇಶದಲ್ಲಿ ಹೆಚ್ಚಾಗಿ ಈ ರೋಗ ಹರಡುತ್ತದೆ. ಭತ್ತದ ಬೆಳೆಯಲ್ಲಿ ನಿಲ್ಲುವ ನೀರಿನಲ್ಲಿ ಹೆಚ್ಚಾಗಿ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಕೇರಳದಲ್ಲಿ 1994ರ ತನಕ ಈ ರೋಗದ ಸುಳಿವೇ ಇರಲಿಲ್ಲ. ಆಣೆಕಟ್ಟೆ ಕಟ್ಟಿ ಭತ್ತ ಬೆಳೆಯಲು ಆರಂಭವಾದ ಬಳಿಕ ಈ ಕಾಯಿಲೆ ಆ ರಾಜ್ಯವನ್ನು ಕಾಡುತ್ತಿದೆ’ ಎಂದು ಹೇಳಿದರು.</p>.<p>‘ಈ ಕಾಯಿಲೆಗೆ ಲಸಿಕೆ ಲಭ್ಯವಿದ್ದು, ಈ ರೋಗದಿಂದ ಸಾವಿನ ಪ್ರಮಾಣ ದೇಶದಲ್ಲಿ ಶೇ 6ರಷ್ಟಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೆದುಳು ಊತ, ಉರಿ ಕಾಣಿಸಿಕೊಂಡು ಮಕ್ಕಳು ಜ್ಞಾನ ತಪ್ಪುತ್ತವೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆ ಅಪಾಯದಿಂದ ಪಾರು ಮಾಡಬಹುದು’ ಎಂದರು.</p>.<p>ಸೋಂಕಿನಿಂದ ಗುಣಮುಖರಾದರೂ ಅತೀವ ಸುಸ್ತು, ಮೂರ್ಚೆರೋಗ, ಮಾನಸಿಕ ತೊಂದರೆ, ಮರೆಗುಳಿತನ ಹೀಗೆ ಹಲವು ತೊಂದರೆಗಳು ಕಾಡುವ ಸಾಧ್ಯತೆಗಳಿವೆ ಎಂದು ಹೇಳಿದರು.</p>.<p>‘ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು 2014ರಿಂದ ಪ್ರತಿವರ್ಷ ಫೆಬ್ರುವರಿ 22ರಂದು ವಿಶ್ವ ಮೆದುಳು ಜ್ವರ ದಿನಾಚರಣೆ ಆಚರಿಸಲಾಗುತ್ತಿದೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>