<p><strong>ಬೆಂಗಳೂರು</strong>: ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕೆಂದರೆ ಈಗಿನಿಂದಲೇ ಸಂಪೂರ್ಣ ದಾಖಲೀಕರಣ ಮಾಡುವುದು ಒಳ್ಳೆಯದು ಎಂದು ಕಲಾವಿದ ಬಳ್ಕೂರು ಕೃಷ್ಣಯಾಜಿ ಸಲಹೆ ನೀಡಿದರು.</p>.<p>ನಗರದಲ್ಲಿ ಭಾನುವಾರ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಜೀವನಗಾಥೆಯ ಪುಸ್ತಕ ‘ಯಕ್ಷಚಂದ್ರ’ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಯುವ ಪೀಳಿಗೆಯಲ್ಲಿ ಯಕ್ಷಗಾನದ ಆಸಕ್ತಿ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಯ ಹೊತ್ತಿಗೆ ಇದು ಇನ್ನೂ ಕ್ಷೀಣಿಸಬಹುದು. ಈ ಕಾರಣದಿಂದ ಯಕ್ಷಗಾನ ಪ್ರದರ್ಶನಗಳ ಜತೆಗೆ ಕಲೆ, ಕಲಾವಿದರ ಕುರಿತು ವೇಷ ಸಹಿತವಾಗಿ ದಾಖಲು ಮಾಡುವುದು ಸೂಕ್ತ ಎಂದು ಹೇಳಿದರು.</p>.<p>ಶಿಕ್ಷಣ ತಜ್ಞ ಕೆ.ಈ. ರಾಧಾಕೃಷ್ಣ ಮಾತನಾಡಿ, ‘ಕೊಂಡದಕುಳಿ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಕಲೆ ಎಂದಿಗೂ ನಿಂತ ನೀರಾಗಬಾರದು. ಹರಿಯುವ ನೀರಿನಂತೆ ಮುಂದಿನ ಪೀಳಿಗೆಗೆ ತಲುಪಲು ಹೊಸ ಪ್ರಯೋಗಗಳನ್ನು ಆಧುನೀಕತೆ ಹಾಗೂ ಸಂಪ್ರದಾಯದ ಜತೆಯಲ್ಲಿ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಸನ್ಮಾನ ಸ್ವೀಕರಿಸಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನಾಡಿ, ‘ಯಕ್ಷಗಾನದ ಕುರಿತು ಹಿರಿಯ ಕಲಾವಿದರು ಹೇಳಿದ್ದೆಲ್ಲ ಸತ್ಯ ಎಂದು ಹೇಳಲಾಗದು. ಎಲ್ಲವನ್ನೂ ವಿಮರ್ಶೆ ಮಾಡುತ್ತಲೇ ಅರಿವನ್ನು ವಿಸ್ತರಿಸಿಕೊಳ್ಳಬೇಕು. ಕಿರಿಯರಿಗೂ ಸರಿಯಾಗಿ ಮಾರ್ಗದರ್ಶನ ಮಾಡಬೇಕು’ ಎಂದು ನುಡಿದರು.</p>.<p>ಪತ್ರಕರ್ತ ಕೆ.ರವಿಶಂಕರ್ ಭಟ್, ಲೇಖಕ ರಾಘವೇಂದ್ರ ಭಟ್, ಕಲಾವಿದರಾದ ಮೋಹನ್ ಹೆಗಡೆ, ಶ್ರೀಪಾದ್ ಹೆಗಡೆ, ದೀಪಕ್ ಶೆಟ್ಟಿ ಸತ್ಯವತಿ, ಉದ್ಯಮಿ ಅಜಿತ್ ಹೆಗ್ಡೆ ಶಾನಾಡಿ ಹಾಜರಿದ್ದರು. ಬಳಿಕ ಶರಸೇತು ಬಂಧನ ಯಕ್ಷಗಾನ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕೆಂದರೆ ಈಗಿನಿಂದಲೇ ಸಂಪೂರ್ಣ ದಾಖಲೀಕರಣ ಮಾಡುವುದು ಒಳ್ಳೆಯದು ಎಂದು ಕಲಾವಿದ ಬಳ್ಕೂರು ಕೃಷ್ಣಯಾಜಿ ಸಲಹೆ ನೀಡಿದರು.</p>.<p>ನಗರದಲ್ಲಿ ಭಾನುವಾರ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಜೀವನಗಾಥೆಯ ಪುಸ್ತಕ ‘ಯಕ್ಷಚಂದ್ರ’ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಯುವ ಪೀಳಿಗೆಯಲ್ಲಿ ಯಕ್ಷಗಾನದ ಆಸಕ್ತಿ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆಯ ಹೊತ್ತಿಗೆ ಇದು ಇನ್ನೂ ಕ್ಷೀಣಿಸಬಹುದು. ಈ ಕಾರಣದಿಂದ ಯಕ್ಷಗಾನ ಪ್ರದರ್ಶನಗಳ ಜತೆಗೆ ಕಲೆ, ಕಲಾವಿದರ ಕುರಿತು ವೇಷ ಸಹಿತವಾಗಿ ದಾಖಲು ಮಾಡುವುದು ಸೂಕ್ತ ಎಂದು ಹೇಳಿದರು.</p>.<p>ಶಿಕ್ಷಣ ತಜ್ಞ ಕೆ.ಈ. ರಾಧಾಕೃಷ್ಣ ಮಾತನಾಡಿ, ‘ಕೊಂಡದಕುಳಿ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಕಲೆ ಎಂದಿಗೂ ನಿಂತ ನೀರಾಗಬಾರದು. ಹರಿಯುವ ನೀರಿನಂತೆ ಮುಂದಿನ ಪೀಳಿಗೆಗೆ ತಲುಪಲು ಹೊಸ ಪ್ರಯೋಗಗಳನ್ನು ಆಧುನೀಕತೆ ಹಾಗೂ ಸಂಪ್ರದಾಯದ ಜತೆಯಲ್ಲಿ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಸನ್ಮಾನ ಸ್ವೀಕರಿಸಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನಾಡಿ, ‘ಯಕ್ಷಗಾನದ ಕುರಿತು ಹಿರಿಯ ಕಲಾವಿದರು ಹೇಳಿದ್ದೆಲ್ಲ ಸತ್ಯ ಎಂದು ಹೇಳಲಾಗದು. ಎಲ್ಲವನ್ನೂ ವಿಮರ್ಶೆ ಮಾಡುತ್ತಲೇ ಅರಿವನ್ನು ವಿಸ್ತರಿಸಿಕೊಳ್ಳಬೇಕು. ಕಿರಿಯರಿಗೂ ಸರಿಯಾಗಿ ಮಾರ್ಗದರ್ಶನ ಮಾಡಬೇಕು’ ಎಂದು ನುಡಿದರು.</p>.<p>ಪತ್ರಕರ್ತ ಕೆ.ರವಿಶಂಕರ್ ಭಟ್, ಲೇಖಕ ರಾಘವೇಂದ್ರ ಭಟ್, ಕಲಾವಿದರಾದ ಮೋಹನ್ ಹೆಗಡೆ, ಶ್ರೀಪಾದ್ ಹೆಗಡೆ, ದೀಪಕ್ ಶೆಟ್ಟಿ ಸತ್ಯವತಿ, ಉದ್ಯಮಿ ಅಜಿತ್ ಹೆಗ್ಡೆ ಶಾನಾಡಿ ಹಾಜರಿದ್ದರು. ಬಳಿಕ ಶರಸೇತು ಬಂಧನ ಯಕ್ಷಗಾನ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>