<p><strong>ಯಲಹಂಕ</strong><strong>: </strong><strong>ಬಿಬಿಎಂಪಿ ವಾರ್ಡ್ ಸಂಖ್ಯೆ </strong><strong>3 </strong><strong>ಮತ್ತು </strong><strong>4</strong><strong>ರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ₹ </strong><strong>13.50 </strong><strong>ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಶಾಸಕ ಎಸ್</strong><strong>.</strong><strong>ಆರ್</strong><strong>.</strong><strong>ವಿಶ್ವನಾಥ್ ಲೋಕಾರ್ಪಣೆಗೊಳಿಸಿದರು</strong><strong>.</strong></p>.<p><strong>ಉಪನಗರ </strong><strong>4</strong><strong>ನೇ ಹಂತದಲ್ಲಿ ಜಿಮ್ನಾಸ್ಟಿಕ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು</strong><strong>. </strong><strong>ಅಂಬೇಡ್ಕರ್ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾಕಟ್ಟಡ ಮತ್ತು ಸಮುದಾಯಭವನ</strong><strong>, </strong><strong>ಅಳ್ಳಾಳಸಂದ್ರದಲ್ಲಿ ಸಮುದಾಯ ಭವನ ಹಾಗೂ ನ್ಯಾಯಾಂಗ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣವನ್ನು ಉದ್ಘಾಟಿಸಿದರು. </strong></p>.<p><strong>ಇದೇ ವೇಳೆ ಅಂಬೇಡ್ಕರ್ ನಗರದಲ್ಲಿ ಸ್ಥಳೀಯ ನಿವಾಸಿಗಳು</strong><strong>, </strong><strong>ಮನೆಗಳು ಶಿಥಿಲಗೊಂಡಿದ್ದು ಬಿದ್ದುಹೋಗುವ ಸ್ಥಿತಿಯಲ್ಲಿವೆ</strong><strong>. </strong><strong>ಚರಂಡಿ ವ್ಯವಸ್ಥೆಯೂ ಸರಿಯಿಲ್ಲದೆ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸಬೇಕಾಗಿದೆ</strong><strong>. </strong><strong>ಕೂಡಲೇ ಹಳೆಯ ಮನೆಗಳನ್ನು ತೆರವುಗೊಳಿಸಿ</strong><strong>, </strong><strong>ನೂತನವಾಗಿ ಮನೆ ನಿರ್ಮಿಸಿಕೊಡಬೇಕು ಎಂದು ಶಾಸಕ ವಿಶ್ವನಾಥ್ ಅವರಿಗೆ ಮನವಿ ಮಾಡಿದರು</strong><strong>.</strong></p>.<p><strong>ಇದಕ್ಕೆ ಪ್ರತಿಕ್ರಿಯಿಸಿದ ಅವರು</strong><strong>, </strong><strong>ಅಂಬೇಡ್ಕರ್ ನಗರದಲ್ಲಿ ಈ ಹಿಂದೆ </strong><strong>1+3 </strong><strong>ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು</strong><strong>. </strong><strong>ನಂತರ ಯೋಜನೆಯನ್ನು ಮಾರ್ಪಡಿಸಿ</strong><strong>, </strong><strong>ಪ್ರತಿಯೊಬ್ಬರಿಗೂ ಪ್ರತ್ಯೇಕ ಮನೆಗಳನ್ನು ನಿರ್ಮಿಸುವ ಸಲುವಾಗಿ ಪಟ್ಟಿ ತಯಾರಿಸಿ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ</strong><strong>. </strong><strong>ಸರ್ಕಾರಕ್ಕೆ ಮತ್ತೆ ಮನವಿ ಮಾಡಿ</strong><strong>, </strong><strong>ಆದಷ್ಟು ಶೀಘ್ರದಲ್ಲೇ ಸುಸಜ್ಜಿತ ವಾದ ಮನೆಗಳನ್ನು ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು</strong><strong>.</strong></p>.<p><strong>ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಸುಧಾಕರರೆಡ್ಡಿ</strong><strong>, </strong><strong>ಸಹಾಯಕ ಕಾರ್ಯಪಾಲಕ ಎಂಜಿನಿಯರ್, </strong>ರಾಮ ಸಂಜೀವಯ್ಯ, <strong>ರಘುನಂದನ್ ಮಂತ್ರಿ</strong><strong>, </strong><strong>ಬಿಜೆಪಿ ಮುಖಂಡರಾದ ಪವನ್ಕುಮಾರ್</strong><strong>.</strong><strong>ವಿ</strong><strong>, </strong><strong>ರಾಜಣ್ಣ</strong><strong>, </strong><strong>ಮಧುಸೂದನ್</strong><strong>, </strong><strong>ಕಿರಣ್</strong><strong>, </strong><strong>ಅಕ್ಷತ್</strong><strong>, </strong><strong>ರಮೇಶ್</strong><strong>, </strong><strong>ಎಸ್</strong><strong>.</strong><strong>ಸೋಮಶೇಖರ್</strong><strong>, </strong><strong>ಮುರಳಿ</strong><strong>, </strong><strong>ಕೆಂಪಣ್ಣ ಮತ್ತಿತರರು ಉಪಸ್ಥಿತರಿದ್ದರು</strong><strong>.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ</strong><strong>: </strong><strong>ಬಿಬಿಎಂಪಿ ವಾರ್ಡ್ ಸಂಖ್ಯೆ </strong><strong>3 </strong><strong>ಮತ್ತು </strong><strong>4</strong><strong>ರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ₹ </strong><strong>13.50 </strong><strong>ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಶಾಸಕ ಎಸ್</strong><strong>.</strong><strong>ಆರ್</strong><strong>.</strong><strong>ವಿಶ್ವನಾಥ್ ಲೋಕಾರ್ಪಣೆಗೊಳಿಸಿದರು</strong><strong>.</strong></p>.<p><strong>ಉಪನಗರ </strong><strong>4</strong><strong>ನೇ ಹಂತದಲ್ಲಿ ಜಿಮ್ನಾಸ್ಟಿಕ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು</strong><strong>. </strong><strong>ಅಂಬೇಡ್ಕರ್ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾಕಟ್ಟಡ ಮತ್ತು ಸಮುದಾಯಭವನ</strong><strong>, </strong><strong>ಅಳ್ಳಾಳಸಂದ್ರದಲ್ಲಿ ಸಮುದಾಯ ಭವನ ಹಾಗೂ ನ್ಯಾಯಾಂಗ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣವನ್ನು ಉದ್ಘಾಟಿಸಿದರು. </strong></p>.<p><strong>ಇದೇ ವೇಳೆ ಅಂಬೇಡ್ಕರ್ ನಗರದಲ್ಲಿ ಸ್ಥಳೀಯ ನಿವಾಸಿಗಳು</strong><strong>, </strong><strong>ಮನೆಗಳು ಶಿಥಿಲಗೊಂಡಿದ್ದು ಬಿದ್ದುಹೋಗುವ ಸ್ಥಿತಿಯಲ್ಲಿವೆ</strong><strong>. </strong><strong>ಚರಂಡಿ ವ್ಯವಸ್ಥೆಯೂ ಸರಿಯಿಲ್ಲದೆ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸಬೇಕಾಗಿದೆ</strong><strong>. </strong><strong>ಕೂಡಲೇ ಹಳೆಯ ಮನೆಗಳನ್ನು ತೆರವುಗೊಳಿಸಿ</strong><strong>, </strong><strong>ನೂತನವಾಗಿ ಮನೆ ನಿರ್ಮಿಸಿಕೊಡಬೇಕು ಎಂದು ಶಾಸಕ ವಿಶ್ವನಾಥ್ ಅವರಿಗೆ ಮನವಿ ಮಾಡಿದರು</strong><strong>.</strong></p>.<p><strong>ಇದಕ್ಕೆ ಪ್ರತಿಕ್ರಿಯಿಸಿದ ಅವರು</strong><strong>, </strong><strong>ಅಂಬೇಡ್ಕರ್ ನಗರದಲ್ಲಿ ಈ ಹಿಂದೆ </strong><strong>1+3 </strong><strong>ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು</strong><strong>. </strong><strong>ನಂತರ ಯೋಜನೆಯನ್ನು ಮಾರ್ಪಡಿಸಿ</strong><strong>, </strong><strong>ಪ್ರತಿಯೊಬ್ಬರಿಗೂ ಪ್ರತ್ಯೇಕ ಮನೆಗಳನ್ನು ನಿರ್ಮಿಸುವ ಸಲುವಾಗಿ ಪಟ್ಟಿ ತಯಾರಿಸಿ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ</strong><strong>. </strong><strong>ಸರ್ಕಾರಕ್ಕೆ ಮತ್ತೆ ಮನವಿ ಮಾಡಿ</strong><strong>, </strong><strong>ಆದಷ್ಟು ಶೀಘ್ರದಲ್ಲೇ ಸುಸಜ್ಜಿತ ವಾದ ಮನೆಗಳನ್ನು ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು</strong><strong>.</strong></p>.<p><strong>ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಸುಧಾಕರರೆಡ್ಡಿ</strong><strong>, </strong><strong>ಸಹಾಯಕ ಕಾರ್ಯಪಾಲಕ ಎಂಜಿನಿಯರ್, </strong>ರಾಮ ಸಂಜೀವಯ್ಯ, <strong>ರಘುನಂದನ್ ಮಂತ್ರಿ</strong><strong>, </strong><strong>ಬಿಜೆಪಿ ಮುಖಂಡರಾದ ಪವನ್ಕುಮಾರ್</strong><strong>.</strong><strong>ವಿ</strong><strong>, </strong><strong>ರಾಜಣ್ಣ</strong><strong>, </strong><strong>ಮಧುಸೂದನ್</strong><strong>, </strong><strong>ಕಿರಣ್</strong><strong>, </strong><strong>ಅಕ್ಷತ್</strong><strong>, </strong><strong>ರಮೇಶ್</strong><strong>, </strong><strong>ಎಸ್</strong><strong>.</strong><strong>ಸೋಮಶೇಖರ್</strong><strong>, </strong><strong>ಮುರಳಿ</strong><strong>, </strong><strong>ಕೆಂಪಣ್ಣ ಮತ್ತಿತರರು ಉಪಸ್ಥಿತರಿದ್ದರು</strong><strong>.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>