ಬೆಂಗಳೂರು: ‘ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಹಾಗೂ ಇತರರು ಕೊರೊನಾ ಸೋಂಕಿತರಿಗೆ ಅಪಾಯಕಾರಿ ಸ್ಟಿರಾಯ್ಡ್ ನೀಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.
‘ವೈದ್ಯರ ಸಲಹೆ ಇಲ್ಲದೇ ವೈದ್ಯಕೀಯ ಕಿಟ್ ಸಿದ್ಧಪಡಿಸಿರುವ ಯುವ ಕಾಂಗ್ರೆಸ್, ಅದನ್ನೇ ಸೋಂಕಿತರಿಗೆ ನೀಡಿದೆ. ಅದರಲ್ಲಿರುವ ಸ್ಟಿರಾಯ್ಡ್ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಬೇರೆ ರೋಗಗಳಿಗೆ ದಾರಿ ಮಾಡಿಕೊಡಲಿದೆ’ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.