15 ವಿವಿಧ ರಂಗತಂಡಗಳು ಪ್ರತಿದಿನ ಸಂಜೆ 6.30ಕ್ಕೆ ನಾಟಕಗಳನ್ನು ಪ್ರದರ್ಶಿಸಲಿವೆ. ಜ. 3ರಂದು ದೃಶ್ಯಕಾವ್ಯ ರಂಗತಂಡವು ‘ಮಾಯಾಪೇಟೆ’ ನಾಟಕವನ್ನು ಪ್ರದರ್ಶಿಸಲಿದೆ. ಜ.11ರಂದು ಸಿಜಿಕೆ ನೆನಪಿನಲ್ಲಿ ಅಂಚೆ ಲಕೋಟೆ ಬಿಡುಗಡೆಯಾಗಲಿದೆ (ಸಂಘಟನೆ: ರಂಗನಿರಂತರ). 15 ದಿನಗಳ ಕಾಲ ನಡೆಯಲಿರುವ ಯುವರಂಗದಲ್ಲಿ ಸಂವಾದ, ರಂಗ ಗೀತೆಗಳ ಗಾಯನ ಕಾರ್ಯಕ್ರಮವೂ ನಡೆಯಲಿದೆ. ಜ. 18ರಂದು ಯುವರಂಗದ ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಯುವ ರಂಗಕರ್ಮಿ ರಾಜಗುರು ಹೊಸಕೋಟೆ ಅವರಿಗೆ ಕಾಜಾಣ ಯುವ ರಂಗ ಪುರಸ್ಕಾರ 2021 ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.