<p><strong>ಬೆಂಗಳೂರು:</strong>ಖಗೋಳ ತನ್ನ ಬೆರಗುಗಳ ಮೂಲಕಮನುಷ್ಯನನ್ನು ಚಕಿತಗೊಳಿಸುತ್ತದೆ. ಬೆಂಗಳೂರು ನಗರ ಅಂತಹ ವಿಸ್ಮಯವೊಂದಕ್ಕೆ ಬುಧವಾರ ಸಾಕ್ಷಿಯಾಯಿತು. ಈ ಬೆರಗಿನ ಕೇಂದ್ರ ಬಿಂದು ನಿತ್ಯ ನೆತ್ತಿ ಸುಡುವ ಸೂರ್ಯ!</p>.<p>ಹೌದು, ಬುಧವಾರ ಗಡಿಯಾರದ ಮುಳ್ಳು ಸರಿಯಾಗಿ ಮಧ್ಯಾಹ್ನ 12.18ಕ್ಕೆ ಬಂದು ನಿಂತಾಗ, ಸೂರ್ಯ ನಡುನತ್ತಿಗೆ ಬಂದ. ಕಾರಣ ನೆರಳು ಭೂಮಿಯ ಮೇಲೆ ಬೀಳಲಿಲ್ಲ. ಈ ವೇಳೆಶೂನ್ಯ ನೆರಳು ಎಂಬಅಪರೂಪದ ಕ್ಷಣವೊಂದಕ್ಕೆ ನಗರ ಸಾಕ್ಷಿಯಾಯಿತು. ಆ ಕ್ಷಣದಲ್ಲಿ ಪ್ರತಿಯೊಬ್ಬರೂ ನೆರಳನ್ನು ಕಳೆದುಕೊಂಡರು. ಎಲ್ಲಿ ನಮ್ಮ ನೆರಳು ಎಂದು ಹುಡುಕಾಡಿದರು.</p>.<p>ಜವಾಹರಲಾಲ್ ನೆಹರೂ ತಾರಾಲಯವು ಕಾರ್ಯಾಗಾರ ಆಯೋಜಿಸುವ ಮೂಲಕ ‘ಶೂನ್ಯ ನೆರಳು ದಿನ’ವನ್ನು ಆಚರಿಸಿತು. ವಿದ್ಯಾರ್ಥಿಗಳು ಶೂನ್ಯ ನೆರಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಿದರು. ಬೆಂಗಳೂರಿನ ಅಕ್ಷಾಂಶದಲ್ಲಿರುವ ಭೋಪಾಲ್ನ ಆರ್ಯಭಟ ಫೌಂಡೇಷನ್ ಮತ್ತು ದೆಹಲಿಯ ನೆಹರೂ ತಾರಾಲಯದಲ್ಲಿಯೂ ವಿದ್ಯಾರ್ಥಿಗಳು ಪ್ರಯೋಗ ಮಾಡಿದರು.</p>.<p>ತಾರಾಲಯಕ್ಕೆ ಭೇಟಿ ನೀಡಿದವರಿಗೆ ಲಂಬವಾಗಿ ಒಂದು ಕಂಬವನ್ನು ನೆಟ್ಟು ನೆರಳು ಬೀಳದಿರುವುದರ ಕುರಿತು ತೋರಿಸಲಾಯಿತು. ಜನ ಬೆರಗುಗಣ್ಣಿನಿಂದ ವೀಕ್ಷಿಸಿದರು. ಶೂನ್ಯ ನೆರಳಿನ ಹಿಂದಿನ ವೈಜ್ಞಾನಿಕ ಕಾರಣಕ್ಕೆ ಜನ ಕಿವಿಯಾದರು.</p>.<p>ಒಂದೇಅಕ್ಷಾಂಶದ ಮೇಲಿರುವ ಚೆನ್ನೈ ಹಾಗೂ ಮಂಗಳೂರಿನಲ್ಲಿಯೂ ಇದು ಸಂಭವಿಸಿತು. ಬೆಂಗಳೂರಿಗಿಂತ ಮುಂಚೆ ಚೆನ್ನೈನಲ್ಲಿ ಸಂಭವಿಸಿತು.</p>.<p class="Subhead"><strong>ಏನಿದು ಶೂನ್ಯ ನೆರಳಿನ ದಿನ?: </strong>ಏಪ್ರಿಲ್ನಿಂದ ಜೂನ್ ವರೆಗೂಸೂರ್ಯನುದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತಾನೆ. ಜೂನ್ 22ಕ್ಕೆ ಗರಿಷ್ಠ ಮಟ್ಟವನ್ನು ತಲುಪಿದ ಬಳಿಕ ದಕ್ಷಿಣಕ್ಕೆ ಹಿಂತಿರುಗುತ್ತಾನೆ. ಇದನ್ನು ದಕ್ಷಿಣಾಯಾನ ಎನ್ನಲಾಗುತ್ತದೆ. ಈ ವೇಳೆ ಒಂದು ಕ್ಷಣಸೂರ್ಯ ನಡುನತ್ತಿಗೆ ಬರುತ್ತಾನೆ. ಕರ್ಕಾಟಕ ವೃತ್ತ ಹಾಗೂ ಮಕರ ವೃತ್ತಗಳ ನಡುವೆ ಇರುವ ಪ್ರದೇಶಗಳಲ್ಲಿವರ್ಷದಲ್ಲಿ ಎರಡು ಬಾರಿ ಇದು ಘಟಿಸುತ್ತದೆ.</p>.<p>‘ಖಗೋಳದ ಈ ಕೌತುಕವನ್ನು ಜನವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮತ್ತೆ ಮುಂಬರುವ ಆಗಸ್ಟ್ನಲ್ಲಿ ಈ ಕೌತುಕ ಸಂಭವಿಸಲಿದೆ’ ಎಂದು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಖಗೋಳ ತನ್ನ ಬೆರಗುಗಳ ಮೂಲಕಮನುಷ್ಯನನ್ನು ಚಕಿತಗೊಳಿಸುತ್ತದೆ. ಬೆಂಗಳೂರು ನಗರ ಅಂತಹ ವಿಸ್ಮಯವೊಂದಕ್ಕೆ ಬುಧವಾರ ಸಾಕ್ಷಿಯಾಯಿತು. ಈ ಬೆರಗಿನ ಕೇಂದ್ರ ಬಿಂದು ನಿತ್ಯ ನೆತ್ತಿ ಸುಡುವ ಸೂರ್ಯ!</p>.<p>ಹೌದು, ಬುಧವಾರ ಗಡಿಯಾರದ ಮುಳ್ಳು ಸರಿಯಾಗಿ ಮಧ್ಯಾಹ್ನ 12.18ಕ್ಕೆ ಬಂದು ನಿಂತಾಗ, ಸೂರ್ಯ ನಡುನತ್ತಿಗೆ ಬಂದ. ಕಾರಣ ನೆರಳು ಭೂಮಿಯ ಮೇಲೆ ಬೀಳಲಿಲ್ಲ. ಈ ವೇಳೆಶೂನ್ಯ ನೆರಳು ಎಂಬಅಪರೂಪದ ಕ್ಷಣವೊಂದಕ್ಕೆ ನಗರ ಸಾಕ್ಷಿಯಾಯಿತು. ಆ ಕ್ಷಣದಲ್ಲಿ ಪ್ರತಿಯೊಬ್ಬರೂ ನೆರಳನ್ನು ಕಳೆದುಕೊಂಡರು. ಎಲ್ಲಿ ನಮ್ಮ ನೆರಳು ಎಂದು ಹುಡುಕಾಡಿದರು.</p>.<p>ಜವಾಹರಲಾಲ್ ನೆಹರೂ ತಾರಾಲಯವು ಕಾರ್ಯಾಗಾರ ಆಯೋಜಿಸುವ ಮೂಲಕ ‘ಶೂನ್ಯ ನೆರಳು ದಿನ’ವನ್ನು ಆಚರಿಸಿತು. ವಿದ್ಯಾರ್ಥಿಗಳು ಶೂನ್ಯ ನೆರಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಿದರು. ಬೆಂಗಳೂರಿನ ಅಕ್ಷಾಂಶದಲ್ಲಿರುವ ಭೋಪಾಲ್ನ ಆರ್ಯಭಟ ಫೌಂಡೇಷನ್ ಮತ್ತು ದೆಹಲಿಯ ನೆಹರೂ ತಾರಾಲಯದಲ್ಲಿಯೂ ವಿದ್ಯಾರ್ಥಿಗಳು ಪ್ರಯೋಗ ಮಾಡಿದರು.</p>.<p>ತಾರಾಲಯಕ್ಕೆ ಭೇಟಿ ನೀಡಿದವರಿಗೆ ಲಂಬವಾಗಿ ಒಂದು ಕಂಬವನ್ನು ನೆಟ್ಟು ನೆರಳು ಬೀಳದಿರುವುದರ ಕುರಿತು ತೋರಿಸಲಾಯಿತು. ಜನ ಬೆರಗುಗಣ್ಣಿನಿಂದ ವೀಕ್ಷಿಸಿದರು. ಶೂನ್ಯ ನೆರಳಿನ ಹಿಂದಿನ ವೈಜ್ಞಾನಿಕ ಕಾರಣಕ್ಕೆ ಜನ ಕಿವಿಯಾದರು.</p>.<p>ಒಂದೇಅಕ್ಷಾಂಶದ ಮೇಲಿರುವ ಚೆನ್ನೈ ಹಾಗೂ ಮಂಗಳೂರಿನಲ್ಲಿಯೂ ಇದು ಸಂಭವಿಸಿತು. ಬೆಂಗಳೂರಿಗಿಂತ ಮುಂಚೆ ಚೆನ್ನೈನಲ್ಲಿ ಸಂಭವಿಸಿತು.</p>.<p class="Subhead"><strong>ಏನಿದು ಶೂನ್ಯ ನೆರಳಿನ ದಿನ?: </strong>ಏಪ್ರಿಲ್ನಿಂದ ಜೂನ್ ವರೆಗೂಸೂರ್ಯನುದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತಾನೆ. ಜೂನ್ 22ಕ್ಕೆ ಗರಿಷ್ಠ ಮಟ್ಟವನ್ನು ತಲುಪಿದ ಬಳಿಕ ದಕ್ಷಿಣಕ್ಕೆ ಹಿಂತಿರುಗುತ್ತಾನೆ. ಇದನ್ನು ದಕ್ಷಿಣಾಯಾನ ಎನ್ನಲಾಗುತ್ತದೆ. ಈ ವೇಳೆ ಒಂದು ಕ್ಷಣಸೂರ್ಯ ನಡುನತ್ತಿಗೆ ಬರುತ್ತಾನೆ. ಕರ್ಕಾಟಕ ವೃತ್ತ ಹಾಗೂ ಮಕರ ವೃತ್ತಗಳ ನಡುವೆ ಇರುವ ಪ್ರದೇಶಗಳಲ್ಲಿವರ್ಷದಲ್ಲಿ ಎರಡು ಬಾರಿ ಇದು ಘಟಿಸುತ್ತದೆ.</p>.<p>‘ಖಗೋಳದ ಈ ಕೌತುಕವನ್ನು ಜನವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮತ್ತೆ ಮುಂಬರುವ ಆಗಸ್ಟ್ನಲ್ಲಿ ಈ ಕೌತುಕ ಸಂಭವಿಸಲಿದೆ’ ಎಂದು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>