ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್ 21, ಶುಕ್ರವಾರ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇಂಡಿಯನ್ ಎಕಾನಮಿ ಅಸೋಸಿಯೇಷನ್: ಕೆಎಎಸ್ ಅಧಿಕಾರಿಗಳ ಸಂಘ, ಇನ್‌ಫೆಂಟ್ರಿ ರಸ್ತೆ. `ಭಾರತದಲ್ಲಿ ಭೂಮಿಯ ಬಳಕೆ ಮತ್ತು ಜಾಗತೀಕರಣ~ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭ. ಅತಿಥಿ- ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ನಿವೃತ್ತ ಡಿಜಿಪಿ ಜೀಜಾ ಹರಿಸಿಂಗ್, ಕರ್ನಾಟಕ ರೆಡ್‌ಕ್ರಾಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಎನ್.ಜಿ.ನಾರಾಯಣ. ಸಂಜೆ 5.45.

ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ: ಅಗ್ನಿಶಾಮಕ ಅಧಿಕಾರಿಗಳ ಕಾಲೋನಿ, ಅಗ್ನಿಶಾಮಕ ಠಾಣಾ ಹಿಂಭಾಗ, ರಾಜಾಜಿನಗರ. ಅಗ್ನಿಶಾಮಕ ಅಧಿಕಾರಿಗಳ ಮಾದರಿ ಫ್ಲ್ಯಾಟ್‌ಗಳ ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಅತಿಥಿಗಳು- ಸಚಿವರಾದ ಆರ್.ಅಶೋಕ, ವಿ.ಸೋಮಣ್ಣ, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ರಾಮಚಂದ್ರೇಗೌಡ, ಸಂಸದ ಅನಂತ್‌ಕುಮಾರ್, ಪಾಲಿಕೆ ಸದಸ್ಯ ಗಂಗಬೈರಯ್ಯ. ಅಧ್ಯಕ್ಷತೆ- ಶಾಸಕ ಪ್ರಿಯಕೃಷ್ಣ. ಬೆಳಿಗ್ಗೆ 9.30.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ: ಕಂಠೀರವ ಕ್ರೀಡಾಂಗಣ. ಜಿಲ್ಲಾ ಮಟ್ಟದ ಗ್ರಾಮೀಣ ಕ್ರೀಡಾ ಕೂಟ. ಉದ್ಘಾಟನೆ- ಸಚಿವ ಬಿ.ಎನ್.ಬಚ್ಚೇಗೌಡ. ಅತಿಥಿ- ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ. ಅಧ್ಯಕ್ಷತೆ- ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾಗ್ಯಮ್ಮ. ಬೆಳಿಗ್ಗೆ 10.

ಕರ್ನಾಟಕ ರಾಜ್ಯ ಪೊಲೀಸ್: ಹುತಾತ್ಮರ ಉದ್ಯಾನ, ನಗರ ಸಶಸ್ತ್ರ ಮೀಸಲು ಪಡೆ, ಮೈಸೂರು ರಸ್ತೆ. ಪೊಲೀಸ್ ಸಂಸ್ಮರಣ ದಿನಾಚರಣೆ. ಉದ್ಘಾಟನೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಅತಿಥಿ- ಸಚಿವ ಆರ್.ಅಶೋಕ. ಬೆಳಿಗ್ಗೆ 8.

ಕನ್ನಡ ಜನಶಕ್ತಿ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಅಂತರಂಗದ ಮೃದಂಗ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ ಅವರೊಂದಿಗೆ ಸಂವಾದ. ಸಂಜೆ 5.30.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ: ಸಚಿವಾಲಯ ಕ್ಲಬ್, ಕಬ್ಬನ್ ಉದ್ಯಾನ. ಪಾರಂಪರಿಕಾ ಸೀರೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ಸಮಾರಂಭ. ಅತಿಥಿಗಳು- ಬಿ.ಎನ್.ಬಚ್ಚೇಗೌಡ, ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮ, ಚಿತ್ರನಟಿ ಡಾ.ಜಯಮಾಲ. ಮಧ್ಯಾಹ್ನ 3.

ಕಾಲಭೈರವ ಕಲಾನಿಕೇತನ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ. ಅತಿಥಿಗಳು- ಆರ್.ಅಶೋಕ, ಶಾಸಕ ಎಸ್.ಮುನಿರಾಜು, ಮಾಜಿ ಶಾಸಕ ಎನ್.ನಾಗರಾಜು, ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಚ್.ರಾಮಚಂದ್ರ, ಪಾಲಿಕೆ ಸದಸ್ಯ ಎಚ್.ರವೀಂದ್ರ. ಸಾನ್ನಿಧ್ಯ- ಆದಿಚುಂಚನಗಿರಿ ಮಹಾಸಂಸ್ಥಾನದ ಸೌಮ್ಯನಾಥ ಸ್ವಾಮೀಜಿ. ಸಂಜೆ 6.

ಶಟರ್ ಸೀಸನ್
: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಪರಿಸರ ಮತ್ತು ವನ್ಯಜೀವಿ ಛಾಯಾಚಿತ್ರ ಪ್ರದರ್ಶನ. ಬೆಳಿಗ್ಗೆ 10.

ಬೆಂಗಳೂರು ಲಲಿತ ಕಲಾ ಪರಿಷತ್: ಡಾ.ಎಚ್.ಎನ್.ಕಲಾಕ್ಷೇತ್ರ, ಜಯನಗರ 7ನೇ ಬ್ಲಾಕ್. ದೇವರ ನಾಮ ಗಾಯನ- ದೀಪಾ ಕೃಷ್ಣಮೂರ್ತಿ ಮತ್ತು ರೂಪಾ ಕಿರಣ್. ಪಿಟೀಲು- ಡಾ.ಆರ್.ರಘುರಾಮ್, ಮೃದಂಗ- ಎಂ.ಟಿ.ರಾಜ ಕೇಸರಿ. ಸಂಜೆ 6.30.

ಬಿಎನ್‌ಎಂ ತಾಂತ್ರಿಕ ಸಂಸ್ಥೆ: ಬನಶಂಕರಿ 2ನೇ ಹಂತ. `ಹೊರಹೊಮ್ಮುತ್ತಿರುವ ತಂತ್ರಜ್ಞಾನ~ ಕುರಿತು ಉಪನ್ಯಾಸ- ಎಂ.ಡಿ.ಸಣ್ಣದ್ಯಾವೇ ಗೌಡ. ಮಧ್ಯಾಹ್ನ 2.20.

ರಂಗದರ್ಶಿ
ಕೆ.ವಿ.ಸುಬ್ಬಣ್ಣ ಆಪ್ತಸಮೂಹ: ಕೆ.ಎಚ್.ಕಲಾಸೌಧ, ಹನುಮಂತನಗರ. ಅಚಾನಕ್ ಹಾಸ್ಯ ನಾಟಕ ಪ್ರದರ್ಶನ. ನಿರ್ದೇಶನ- ಅಶೋಕ ನಿಟ್ಟೂರ್. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ
ದೇವಗಿರಿ ಶ್ರೀ ಗುರುಸೇವಾ ಸಮಿತಿ: 24 ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಬನ್ನಂಜೆ ಗೋವಿಂದಾಚಾರ್ಯ ಅವರಿಂದ ಭಾಗವತ ಪಂಚಮಸ್ಕಂದ ಕುರಿತು ಉಪನ್ಯಾಸ. ಸಂಜೆ 6.30.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವಗುಡಿ ರಸ್ತೆ. ಜಯತೀರ್ಥಚಾರ್ಯ ಮಳಗಿ ಅವರಿಂದ ಮಹಾಭಾರತ ಪಾತ್ರ ಪ್ರಪಂಚ ಉಪನ್ಯಾಸ. ಸಂಜೆ 6.30.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆ ರಸ್ತೆ, ತ್ಯಾಗರಾಜನಗರ. ಸುದರ್ಶನ ಶರ್ಮ ಅವರಿಂದ ಪ್ರವಚನ. ಬೆಳಿಗ್ಗೆ 9.30.

ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಸುಬ್ರಾಯ ಶರ್ಮ ಅವರಿಂದ ಅಧ್ಯಾಸ ಭಾಷ್ಯಂ ಕುರಿತು ಉಪನ್ಯಾಸ. ಬೆಳಿಗ್ಗೆ 7.45.

ಶ್ರೀರಂಗಂ ಶ್ರೀಮದ್ ಆಂಡವನ್ ಆಶ್ರಮ: ಗರುತ್ಮನ್ ಪಾರ್ಕ್, ಆರ್.ವಿ.ಟೀಚರ್ಸ್ ಕಾಲೇಜು ಹಿಂಭಾಗ, ಜಯನಗರ. ಕಲ್ಯಾಣಪುರ ಅರವಮುದನ್ ಸ್ವಾಮಿ ಅವರಿಂದ ಸೀತಾ ಕಲ್ಯಾಣ ಉಪನ್ಯಾಸ. ಸಂಜೆ 6.

ಇಸ್ಕಾನ್: ಪಶ್ಚಿಮ ಕಾರ್ಡ್ ರಸ್ತೆ, ರಾಜಾಜಿನಗರ. ಪಲ್ಲಕ್ಕಿ ಉತ್ಸವ. ಬೆಳಿಗ್ಗೆ 8.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT