<p><strong>ಬೆಂಗಳೂರು:</strong> ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಪುಲಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ.</p>.<p>ಜೆಡಿಎಸ್ನಿಂದ ಅಮಾನತುಗೊಂಡ ಬಳಿಕ ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಕಣಕ್ಕಿಳಿದಿದ್ದ ಅವರು 97,574 ಮತಗಳನ್ನು ಗಳಿಸಿ, ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ನ ಬಿ. ಪ್ರಸನ್ನ ಕುಮಾರ್ (15,948) ವಿರುದ್ಧ 81,626 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.</p>.<p>2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಏಳು ಶಾಸಕರಲ್ಲಿ ಶ್ರೀನಿವಾಸಮೂರ್ತಿ ಅವರೂ ಒಬ್ಬರು. ಆಗ ಯಾರ ವಿರುದ್ಧ ತೊಡೆತಟ್ಟಿ ದ್ದರೋ ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ.</p>.<p>ಬೆಟ್ಟದಷ್ಟಿರುವ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಅವರೊಂದಿಗೆ ಸೇರಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸವಾಲು ಶಾಸಕರ ಮುಂದಿದೆ.</p>.<p>‘ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನ ನನಗೆ ಇಷ್ಟೊಂದು ಮತಗಳ ಅಂತರದ ಗೆಲುವು ನೀಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅವರ ಋಣ ತೀರಿಸುತ್ತೇನೆ’ ಎನ್ನುತ್ತಾರೆ ಅವರು.</p>.<p><strong>* ಮುಂದಿನ ಐದು ವರ್ಷ ಕ್ಷೇತ್ರದ ಅಭಿವೃದ್ಧಿಗೆ ನೀವು ಏನು ಮಾಡುತ್ತೀರಿ?</strong><br />ತ್ರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕು. ಬಡವರಿಗೆ ಮನೆಗಳನ್ನು ಕಟ್ಟಿಕೊಡಬೇಕು. ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ರಸ್ತೆಗಳ ವಿಸ್ತರಣೆ ಮಾಡಬೇಕಾಗಿದ್ದು, ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತೇನೆ.</p>.<p><strong>* ಹಾಗಿದ್ದರೆ, ಈ ಹಿಂದೆ ಐದು ವರ್ಷ ಏಕೆ ಮಾಡಲಿಲ್ಲ?</strong><br />ಹಿಂದೆಯೂ ಮಾಡಿದ್ದೇನೆ. ಕ್ಷೇತ್ರದಲ್ಲಿ ಬಡ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವರಿಗೆ ವಸತಿ ಸೌಕರ್ಯ ಕಲ್ಪಿಸಬೇಕಾಗಿದೆ. ಪ್ರದೇಶ, ಬಡಾವಣೆ ವಿಸ್ತಾರವಾದಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿರುತ್ತವೆ. ಐದು ವರ್ಷಗಳಲ್ಲಿ ಸಾಧ್ಯವಾದಷ್ಟು ಮಾಡಿದ್ದೇನೆ.</p>.<p><strong>* ಜನ ನಿಮ್ಮನ್ನು ಏಕೆ ಗೆಲ್ಲಿಸಿದ್ದಾರೆ?</strong><br />ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಅವರ ಕಷ್ಟ–ಸುಖಗಳಿಗೆ ನೆರವಾಗಿದ್ದನ್ನು ಜನ ನೆನಪಿಟ್ಟುಕೊಂಡಿದ್ದಾರೆ.</p>.<p><strong>* ನಿಮ್ಮ ಕ್ಷೇತ್ರದ ಪ್ರಮುಖ ಸಮಸ್ಯೆಗಳೇನು?</strong><br />ರಸ್ತೆ, ಕುಡಿಯುವ ನೀರು, ಸರ್ಕಾರಿ ಶಾಲೆ, ಕಾಲೇಜುಗಳ, ಸುಸಜ್ಜಿತ ಆಸ್ಪತ್ರೆಗಳ ಕೊರತೆ ಮತ್ತು ವಿದ್ಯುತ್ ಸಮಸ್ಯೆ.</p>.<p><strong>* ದಿನನಿತ್ಯ ಎಷ್ಟು ಜನರನ್ನು ಭೇಟಿ ಮಾಡುತ್ತೀರಿ. ಅವರು ನಿಮ್ಮ ಮುಂದಿಟ್ಟಿರುವ ಪ್ರಮುಖ ಅಹವಾಲುಗಳೇನು?</strong><br />ನೂರಾರು ಜನರು ನಿತ್ಯವೂ ಬರುತ್ತಾರೆ. ಈಗ ಶಾಲೆಗಳಿಗೆ ಪ್ರವೇಶ ಆರಂಭವಾಗಿರುವುದರಿಂದ ಶಾಲಾ ಶುಲ್ಕ, ಶಾಲೆ ಪ್ರವೇಶಕ್ಕೆ ಸಂಬಂಧಿಸಿದಂತೆ ಜನ ಅಹವಾಲು ತೆಗೆದುಕೊಂಡು ಬರುತ್ತಾರೆ.</p>.<p><strong>* ಬೆಂಗಳೂರಿನಲ್ಲಿ ಅಧಿವೇಶನ ನಡೆಯುವ ವೇಳೆ ನಗರದ ಶಾಸಕರ ಹಾಜರಾತಿ ಕಡಿಮೆ ಇರುತ್ತದೆ. ನಿಮ್ಮ ಹಾಜರಾತಿ ಎಷ್ಟು ಇರುತ್ತದೆ?</strong><br />ಅನಿವಾರ್ಯ ಸಂದರ್ಭ ಹೊರತುಪಡಿಸಿ ಅಧಿವೇಶನಕ್ಕೆ ಹಾಜರಾಗಿದ್ದೇನೆ, ಮುಂದೆ ಗೈರಾಗದಿರಲು ನಿರ್ಧರಿಸಿದ್ದೇನೆ</p>.<p><strong>* ಬ್ರ್ಯಾಂಡ್ ಬೆಂಗಳೂರಿಗೆ ನೀವು 28 ಶಾಸಕರು ಸೇರಿ ಏನು ಮಾಡುತ್ತೀರಿ?</strong><br />ಬ್ರ್ಯಾಂಡ್ ಬೆಂಗಳೂರಿಗೆ ಎಲ್ಲ ರೀತಿಯ ನೆರವು ನೀಡುತ್ತೇನೆ. ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಫ್ಲೈಓವರ್ ಅಥವಾ ಉಕ್ಕಿನ ಸೇತುವೆ ನಿರ್ಮಿಸುವ ಪ್ರಸ್ತಾವವನ್ನು ಸಿ.ಎಂ. ಮುಂದಿಡುತ್ತೇನೆ. ಫ್ಲೈಓವರ್ ಅಥವಾ ಉಕ್ಕಿನ ಸೇತುವೆ ನಿರ್ಮಾಣವಾದರೆ ಸಂಚಾರ ದಟ್ಟಣೆ ಕಡಿಮೆ ಆಗಿ ಸಮಯದ ಉಳಿತಾಯ ಆಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಪುಲಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ.</p>.<p>ಜೆಡಿಎಸ್ನಿಂದ ಅಮಾನತುಗೊಂಡ ಬಳಿಕ ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಕಣಕ್ಕಿಳಿದಿದ್ದ ಅವರು 97,574 ಮತಗಳನ್ನು ಗಳಿಸಿ, ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ನ ಬಿ. ಪ್ರಸನ್ನ ಕುಮಾರ್ (15,948) ವಿರುದ್ಧ 81,626 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.</p>.<p>2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಏಳು ಶಾಸಕರಲ್ಲಿ ಶ್ರೀನಿವಾಸಮೂರ್ತಿ ಅವರೂ ಒಬ್ಬರು. ಆಗ ಯಾರ ವಿರುದ್ಧ ತೊಡೆತಟ್ಟಿ ದ್ದರೋ ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ.</p>.<p>ಬೆಟ್ಟದಷ್ಟಿರುವ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಅವರೊಂದಿಗೆ ಸೇರಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸವಾಲು ಶಾಸಕರ ಮುಂದಿದೆ.</p>.<p>‘ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನ ನನಗೆ ಇಷ್ಟೊಂದು ಮತಗಳ ಅಂತರದ ಗೆಲುವು ನೀಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅವರ ಋಣ ತೀರಿಸುತ್ತೇನೆ’ ಎನ್ನುತ್ತಾರೆ ಅವರು.</p>.<p><strong>* ಮುಂದಿನ ಐದು ವರ್ಷ ಕ್ಷೇತ್ರದ ಅಭಿವೃದ್ಧಿಗೆ ನೀವು ಏನು ಮಾಡುತ್ತೀರಿ?</strong><br />ತ್ರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕು. ಬಡವರಿಗೆ ಮನೆಗಳನ್ನು ಕಟ್ಟಿಕೊಡಬೇಕು. ವಿದ್ಯುತ್ ಸಮಸ್ಯೆ ಬಗೆಹರಿಸಬೇಕು. ರಸ್ತೆಗಳ ವಿಸ್ತರಣೆ ಮಾಡಬೇಕಾಗಿದ್ದು, ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತೇನೆ.</p>.<p><strong>* ಹಾಗಿದ್ದರೆ, ಈ ಹಿಂದೆ ಐದು ವರ್ಷ ಏಕೆ ಮಾಡಲಿಲ್ಲ?</strong><br />ಹಿಂದೆಯೂ ಮಾಡಿದ್ದೇನೆ. ಕ್ಷೇತ್ರದಲ್ಲಿ ಬಡ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವರಿಗೆ ವಸತಿ ಸೌಕರ್ಯ ಕಲ್ಪಿಸಬೇಕಾಗಿದೆ. ಪ್ರದೇಶ, ಬಡಾವಣೆ ವಿಸ್ತಾರವಾದಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿರುತ್ತವೆ. ಐದು ವರ್ಷಗಳಲ್ಲಿ ಸಾಧ್ಯವಾದಷ್ಟು ಮಾಡಿದ್ದೇನೆ.</p>.<p><strong>* ಜನ ನಿಮ್ಮನ್ನು ಏಕೆ ಗೆಲ್ಲಿಸಿದ್ದಾರೆ?</strong><br />ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಅವರ ಕಷ್ಟ–ಸುಖಗಳಿಗೆ ನೆರವಾಗಿದ್ದನ್ನು ಜನ ನೆನಪಿಟ್ಟುಕೊಂಡಿದ್ದಾರೆ.</p>.<p><strong>* ನಿಮ್ಮ ಕ್ಷೇತ್ರದ ಪ್ರಮುಖ ಸಮಸ್ಯೆಗಳೇನು?</strong><br />ರಸ್ತೆ, ಕುಡಿಯುವ ನೀರು, ಸರ್ಕಾರಿ ಶಾಲೆ, ಕಾಲೇಜುಗಳ, ಸುಸಜ್ಜಿತ ಆಸ್ಪತ್ರೆಗಳ ಕೊರತೆ ಮತ್ತು ವಿದ್ಯುತ್ ಸಮಸ್ಯೆ.</p>.<p><strong>* ದಿನನಿತ್ಯ ಎಷ್ಟು ಜನರನ್ನು ಭೇಟಿ ಮಾಡುತ್ತೀರಿ. ಅವರು ನಿಮ್ಮ ಮುಂದಿಟ್ಟಿರುವ ಪ್ರಮುಖ ಅಹವಾಲುಗಳೇನು?</strong><br />ನೂರಾರು ಜನರು ನಿತ್ಯವೂ ಬರುತ್ತಾರೆ. ಈಗ ಶಾಲೆಗಳಿಗೆ ಪ್ರವೇಶ ಆರಂಭವಾಗಿರುವುದರಿಂದ ಶಾಲಾ ಶುಲ್ಕ, ಶಾಲೆ ಪ್ರವೇಶಕ್ಕೆ ಸಂಬಂಧಿಸಿದಂತೆ ಜನ ಅಹವಾಲು ತೆಗೆದುಕೊಂಡು ಬರುತ್ತಾರೆ.</p>.<p><strong>* ಬೆಂಗಳೂರಿನಲ್ಲಿ ಅಧಿವೇಶನ ನಡೆಯುವ ವೇಳೆ ನಗರದ ಶಾಸಕರ ಹಾಜರಾತಿ ಕಡಿಮೆ ಇರುತ್ತದೆ. ನಿಮ್ಮ ಹಾಜರಾತಿ ಎಷ್ಟು ಇರುತ್ತದೆ?</strong><br />ಅನಿವಾರ್ಯ ಸಂದರ್ಭ ಹೊರತುಪಡಿಸಿ ಅಧಿವೇಶನಕ್ಕೆ ಹಾಜರಾಗಿದ್ದೇನೆ, ಮುಂದೆ ಗೈರಾಗದಿರಲು ನಿರ್ಧರಿಸಿದ್ದೇನೆ</p>.<p><strong>* ಬ್ರ್ಯಾಂಡ್ ಬೆಂಗಳೂರಿಗೆ ನೀವು 28 ಶಾಸಕರು ಸೇರಿ ಏನು ಮಾಡುತ್ತೀರಿ?</strong><br />ಬ್ರ್ಯಾಂಡ್ ಬೆಂಗಳೂರಿಗೆ ಎಲ್ಲ ರೀತಿಯ ನೆರವು ನೀಡುತ್ತೇನೆ. ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಫ್ಲೈಓವರ್ ಅಥವಾ ಉಕ್ಕಿನ ಸೇತುವೆ ನಿರ್ಮಿಸುವ ಪ್ರಸ್ತಾವವನ್ನು ಸಿ.ಎಂ. ಮುಂದಿಡುತ್ತೇನೆ. ಫ್ಲೈಓವರ್ ಅಥವಾ ಉಕ್ಕಿನ ಸೇತುವೆ ನಿರ್ಮಾಣವಾದರೆ ಸಂಚಾರ ದಟ್ಟಣೆ ಕಡಿಮೆ ಆಗಿ ಸಮಯದ ಉಳಿತಾಯ ಆಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>