<p><strong>ಬೆಂಗಳೂರು: </strong>ಬೈಯಪ್ಪನಹಳ್ಳಿಯ ನಾಗವಾರಪಾಳ್ಯದಿಂದ ಬುಧವಾರ (ಮಾ.19) ಎರಡು ವರ್ಷದ ಗಂಡು ಮಗುವನ್ನು ಅಪಹರಿಸಿದ್ದ ರುದ್ರಸೋಮಚಾರಿ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.<br /> <br /> ನಾಗವಾರಪಾಳ್ಯ ನಿವಾಸಿಗಳಾದ ರತ್ನ ಮತ್ತು ಕುಮಾರ್ ಎಂಬುವರ ಮಗ ಅಕ್ಷಯ್ನನ್ನು ಅಪಹರಿಸಿದ್ದ ಆರೋಪಿ, ಕನಕಪುರ ನಿವಾಸಿ ರುದ್ರಸೋಮಚಾರಿ, ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಹಿರಿಯ ಅಧಿಕಾರಿಗಳೊಂದಿಗೆ ಅನುಚಿತ ವರ್ತನೆಯ ಆರೋಪದ ಮೇಲೆ 14ವರ್ಷಗಳ ಹಿಂದೆ ಆತ ಇಲಾಖೆಯಿಂದ ಅಮಾನತಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.<br /> <br /> ರಘುವನಹಳ್ಳಿ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ರಾಮಚಂದ್ರ ಎಂಬುವರಿಗೆ ಮಕ್ಕಳಿರಲಿಲ್ಲ. ಅವರಿಗೆ ಅನಾಥ ಮಗುವೊಂದನ್ನು ತಂದುಕೊಡುವುದಾಗಿ ನಂಬಿಸಿದ್ದ ಆರೋಪಿ ಅವರಿಂದ ಮುಂಗಡ ₨ 2 ಸಾವಿರ ಹಣ ಪಡೆದಿದ್ದ. ಮಾ.18ರಂದು ನಾಗವಾರಪಾಳ್ಯ ಅಂಗನವಾಡಿ ಬಳಿ ಬಂದಿದ್ದ ಆರೋಪಿ, ಮಗುವಿನ ಅಪಹರಣಕ್ಕೆ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.<br /> <br /> ಬುಧವಾರ ಬೆಳಿಗ್ಗೆ ಅಂಗನವಾಡಿಯ ಬಳಿ ಬಂದಿರುವ ಆರೋಪಿ ಚಾಕೊಲೇಟ್ ಕೊಡಿಸುವ ಆಸೆ ತೋರಿಸಿ ಮಗುವನ್ನು ಅಪಹರಿಸಿದ್ದ. ಮಗು ಅಂಗನವಾಡಿಯಿಂದ ಕಾಣೆಯಾಗಿರುವ ಬಗ್ಗೆ ಅಲ್ಲಿನ ಸಿಬ್ಬಂದಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಮಗು ಕಾಣೆಯಾಗಿರುವ ಬಗ್ಗೆ ಪೋಷಕರು ಠಾಣೆಗೆ ದೂರು ನೀಡಿದ್ದರು.<br /> ದೂರು ಸ್ವೀಕರಿಸಿದ ಕೂಡಲೆ ಎರಡು ವಿಶೇಷ ತಂಡಗಳನ್ನು ರಚಿಸಲಾಯಿತು. ಅಂಗನವಾಡಿ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಮಾ.18ರಂದು ಆರೋಪಿ ಬಹಳ ಹೊತ್ತು ಅಂಗನವಾಡಿ ಬಳಿ ಸುತ್ತಾಡಿದ್ದಾಗಿ ತಿಳಿಸಿದರು. ಆರೋಪಿ ಚಹರೆಯ ಮಾಹಿತಿ ಪಡೆದು ಪತ್ತೆ ಕಾರ್ಯ ನಡೆಸಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಆರೋಪಿಯು ಇತ್ತೀಚೆಗೆ ಬೈಯಪ್ಪನಹಳ್ಳಿಯ ಖಾಸಗಿ ಶಾಲೆಯೊಂದರಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಯಿತು. ಆ ಶಾಲೆಯಲ್ಲಿ ವಿಚಾರಿಸಿದಾಗ ಆರೋಪಿಯು ಕೆಲಸಕ್ಕೆ ಸೇರುವ ವೇಳೆ ಕೊಟ್ಟಿದ್ದ ಪರಿಚಯ ಪತ್ರ ಸಿಕ್ಕಿತು. ಅದರಲ್ಲಿ ನಮೂದಿಸಿದ್ದ ಮೊಬೈಲ್ ಸಂಖ್ಯೆಯ ಕರೆಗಳ ಮಾಹಿತಿ ಸಂಗ್ರಹಿಸಲಾಯಿತು. ಆ ವೇಳೆ ಆರೋಪಿ ಕನಕಪುರದ ಬಳಿ ಇರುವುದು ಗೊತ್ತಾಯಿತು. ಸ್ಥಳೀಯ ಪೊಲೀಸರ ನೆರವಿನಿಂದ ಆತನನ್ನು ಬಂಧಿಸಲಾಯಿತು. ಬಳಿಕ ರಘುವನಹಳ್ಳಿಯ ರಾಮಚಂದ್ರ ಅವರ ಬಳಿಯಿದ್ದ ಮಗುವನ್ನು ವಶಕ್ಕೆ ಪಡೆಯಲಾಯಿತು. ಮಗುವಿನ ಪೋಷಕರು ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಹೇಳಿ ಆರೋಪಿ ಮಗುವನ್ನು ಮಾರಾಟ ಮಾಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬೈಯಪ್ಪನಹಳ್ಳಿಯ ನಾಗವಾರಪಾಳ್ಯದಿಂದ ಬುಧವಾರ (ಮಾ.19) ಎರಡು ವರ್ಷದ ಗಂಡು ಮಗುವನ್ನು ಅಪಹರಿಸಿದ್ದ ರುದ್ರಸೋಮಚಾರಿ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.<br /> <br /> ನಾಗವಾರಪಾಳ್ಯ ನಿವಾಸಿಗಳಾದ ರತ್ನ ಮತ್ತು ಕುಮಾರ್ ಎಂಬುವರ ಮಗ ಅಕ್ಷಯ್ನನ್ನು ಅಪಹರಿಸಿದ್ದ ಆರೋಪಿ, ಕನಕಪುರ ನಿವಾಸಿ ರುದ್ರಸೋಮಚಾರಿ, ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಹಿರಿಯ ಅಧಿಕಾರಿಗಳೊಂದಿಗೆ ಅನುಚಿತ ವರ್ತನೆಯ ಆರೋಪದ ಮೇಲೆ 14ವರ್ಷಗಳ ಹಿಂದೆ ಆತ ಇಲಾಖೆಯಿಂದ ಅಮಾನತಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.<br /> <br /> ರಘುವನಹಳ್ಳಿ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ರಾಮಚಂದ್ರ ಎಂಬುವರಿಗೆ ಮಕ್ಕಳಿರಲಿಲ್ಲ. ಅವರಿಗೆ ಅನಾಥ ಮಗುವೊಂದನ್ನು ತಂದುಕೊಡುವುದಾಗಿ ನಂಬಿಸಿದ್ದ ಆರೋಪಿ ಅವರಿಂದ ಮುಂಗಡ ₨ 2 ಸಾವಿರ ಹಣ ಪಡೆದಿದ್ದ. ಮಾ.18ರಂದು ನಾಗವಾರಪಾಳ್ಯ ಅಂಗನವಾಡಿ ಬಳಿ ಬಂದಿದ್ದ ಆರೋಪಿ, ಮಗುವಿನ ಅಪಹರಣಕ್ಕೆ ಸಂಚು ರೂಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.<br /> <br /> ಬುಧವಾರ ಬೆಳಿಗ್ಗೆ ಅಂಗನವಾಡಿಯ ಬಳಿ ಬಂದಿರುವ ಆರೋಪಿ ಚಾಕೊಲೇಟ್ ಕೊಡಿಸುವ ಆಸೆ ತೋರಿಸಿ ಮಗುವನ್ನು ಅಪಹರಿಸಿದ್ದ. ಮಗು ಅಂಗನವಾಡಿಯಿಂದ ಕಾಣೆಯಾಗಿರುವ ಬಗ್ಗೆ ಅಲ್ಲಿನ ಸಿಬ್ಬಂದಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಮಗು ಕಾಣೆಯಾಗಿರುವ ಬಗ್ಗೆ ಪೋಷಕರು ಠಾಣೆಗೆ ದೂರು ನೀಡಿದ್ದರು.<br /> ದೂರು ಸ್ವೀಕರಿಸಿದ ಕೂಡಲೆ ಎರಡು ವಿಶೇಷ ತಂಡಗಳನ್ನು ರಚಿಸಲಾಯಿತು. ಅಂಗನವಾಡಿ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಮಾ.18ರಂದು ಆರೋಪಿ ಬಹಳ ಹೊತ್ತು ಅಂಗನವಾಡಿ ಬಳಿ ಸುತ್ತಾಡಿದ್ದಾಗಿ ತಿಳಿಸಿದರು. ಆರೋಪಿ ಚಹರೆಯ ಮಾಹಿತಿ ಪಡೆದು ಪತ್ತೆ ಕಾರ್ಯ ನಡೆಸಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ಆರೋಪಿಯು ಇತ್ತೀಚೆಗೆ ಬೈಯಪ್ಪನಹಳ್ಳಿಯ ಖಾಸಗಿ ಶಾಲೆಯೊಂದರಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಯಿತು. ಆ ಶಾಲೆಯಲ್ಲಿ ವಿಚಾರಿಸಿದಾಗ ಆರೋಪಿಯು ಕೆಲಸಕ್ಕೆ ಸೇರುವ ವೇಳೆ ಕೊಟ್ಟಿದ್ದ ಪರಿಚಯ ಪತ್ರ ಸಿಕ್ಕಿತು. ಅದರಲ್ಲಿ ನಮೂದಿಸಿದ್ದ ಮೊಬೈಲ್ ಸಂಖ್ಯೆಯ ಕರೆಗಳ ಮಾಹಿತಿ ಸಂಗ್ರಹಿಸಲಾಯಿತು. ಆ ವೇಳೆ ಆರೋಪಿ ಕನಕಪುರದ ಬಳಿ ಇರುವುದು ಗೊತ್ತಾಯಿತು. ಸ್ಥಳೀಯ ಪೊಲೀಸರ ನೆರವಿನಿಂದ ಆತನನ್ನು ಬಂಧಿಸಲಾಯಿತು. ಬಳಿಕ ರಘುವನಹಳ್ಳಿಯ ರಾಮಚಂದ್ರ ಅವರ ಬಳಿಯಿದ್ದ ಮಗುವನ್ನು ವಶಕ್ಕೆ ಪಡೆಯಲಾಯಿತು. ಮಗುವಿನ ಪೋಷಕರು ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಹೇಳಿ ಆರೋಪಿ ಮಗುವನ್ನು ಮಾರಾಟ ಮಾಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>