<p><strong>ಬೆಂಗಳೂರು: </strong>ಕಾಲ ಬದಲಾದರೂ ರಾಜಕೀಯ ಬದಲಾಗುವುದಿಲ್ಲ. ಪಾತ್ರಗಳು ಬದಲಾಗುತ್ತವೆ. ಆದರೆ, ರಾಜಕೀಯ ಹಾಗೆಯೇ ಇರುತ್ತದೆ ಎಂದು ಶಾಸಕ ವೈಎಸ್ವಿ ದತ್ತ ಅಭಿಪ್ರಾಯಪಟ್ಟರು.<br /> <br /> ವಸಂತ ಪ್ರಕಾಶನ ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರ `ನಾಲ್ಕನೇ ಆಯಾಮ' ಅಂಕಣ ಬರಹಗಳ ಐದು ಮತ್ತು ಆರನೇ ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದಿನ ಸರ್ಕಾರದಲ್ಲಿ ನಡೆದ ಘಟನೆಗಳು ಈಗಿನ ಸರ್ಕಾರದಲ್ಲಿ ನಡೆಯುವುದಿಲ್ಲ ಎಂದು ಭಾವಿಸಲು ಆಗದು ಎಂದು ಹೇಳಿದರು.<br /> <br /> ರಾಜಕೀಯ ಸಂಪುಟದ ಪ್ರಸ್ತುತತೆ ಕುರಿತು ಮಾತನಾಡಿದ ಅವರು `ವಿಶ್ವೇಶ್ವರಯ್ಯನವರು 1909ರಲ್ಲಿ ಕನ್ನಂಬಾಡಿ ಕಟ್ಟುವಾಗ ಎದ್ದ ಹಣಕಾಸಿನ ಪ್ರಶ್ನೆ, 1985ರಲ್ಲಿ ಎಚ್.ಡಿ ದೇವೇಗೌಡರು ಕಾವೇರಿ-ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಮುಂದಾದಾಗಲೂ ಎದ್ದಿತ್ತು, ಎರಡೂ ಸಂದರ್ಭದಲ್ಲಿ ಹಣಕಾಸು ಇಲಾಖೆ ಹಣ ನೀಡಲು ತಕರಾರು ಎತ್ತಿತ್ತು; ಈಗ 2013ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಹಣ ಬಿಡುವ ಗಿಡ ಇಲ್ಲ, ಎಚ್ಚರಿಕೆಯಿಂದ ಖರ್ಚು ಮಾಡಬೇಕು ಎನ್ನುವ ಹೇಳಿಕೆ ನೀಡಿದ್ದಾರೆ. ವ್ಯಕ್ತಿಗಳು ಬದಲಾದರೂ ಮನಸ್ಥಿತಿ ಒಂದೇ ಆಗಿರುತ್ತದೆ' ಎಂದು ಅವರು ನೆನಪಿಸಿದರು.<br /> <br /> ಕೃತಿ ಬಿಡುಗಡೆ ಮಾಡಿದ ನಟ ರಮೇಶ್ ಅರವಿಂದ್, `ಆದರ್ಶ ಸಮಾಜ ಮತ್ತು ಮಾದರಿ ವ್ಯಕ್ತಿ ಹೇಗಿರಬೇಕು ಎನ್ನುವುದೇ ಈ ಸಂಪುಟಗಳ ಆಶಯವಾಗಿದೆ. ಬದುಕಿನ ಅನುಭವವನ್ನೇ ಬರಹ ರೂಪಕ್ಕೆ ಇಲ್ಲಿ ಇಳಿಸಲಾಗಿದ್ದು ಸಮಾಜದ ಮನಸ್ಸಾಕ್ಷಿಯನ್ನು ಓದುಗರ ಮುಂದೆ ಮಂಡಿಸಲಾಗಿದೆ' ಎಂದು ಹೇಳಿದರು.<br /> <br /> ಅಂಕಣದ ಸಾಂಸ್ಕೃತಿಕ ಬರಹಗಳ ಸಂಪುಟ ಕುರಿತು ಮಾತನಾಡಿದ ಕಥೆಗಾರ ವಿವೇಕ ಶಾನಭಾಗ್, `ಪತ್ರಕರ್ತರಿಗೆ ವೃತ್ತಿ ಕೌಶಲ ಮಾತ್ರ ಗೊತ್ತಿರುತ್ತದೆ. ಅದರ ಆಧಾರದ ಮೇಲೆ ಪ್ರತಿಯೊಂದನ್ನು ಗ್ರಹಿಸಿ ಬರೆಯುತ್ತಾರೆ. ಆದರೆ, `ನಾಲ್ಕನೇ ಆಯಾಮ'ದ ಬರಹಗಳಲ್ಲಿ ಆಳವಾದ ಜೀವನ ಪ್ರೀತಿ ಇದೆ. ವಸ್ತು ವಿಸ್ತಾರ ದೊಡ್ಡದಿದೆ' ಎಂದು ಅಭಿಪ್ರಾಯಪಟ್ಟರು.<br /> <br /> `ಸಾಂಸ್ಕೃತಿಕ ಜಗತ್ತಿನಲ್ಲಿ `ಪ್ರಜಾವಾಣಿ'ಗೆ ತನ್ನದೇ ಆದ ಬಲು ಮಹತ್ವದ ಸ್ಥಾನ ಇದೆ. ನಾಡಿನ ಸಾಂಸ್ಕೃತಿಕ ರಂಗದ ಬೆಳವಣಿಗೆಯಲ್ಲಿ ಪೋಷಕನಾಗಿ ನಿಂತಿದೆ ಪತ್ರಿಕೆ. ಅದರ ಅಸ್ಮಿತೆಯನ್ನು ಸರಿಯಾಗಿ ಗ್ರಹಿಸಿರುವ ಇಲ್ಲಿನ ಬರವಣಿಗೆ ಕೂಡ ಅಷ್ಟೇ ಎತ್ತರದಲ್ಲಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. `ದೈನಂದಿನ ಮತ್ತು ನಿರಂತರ ಗುಣಗಳೆರಡೂ ಮೇಳೈಸಿರುವ ಅಂಕಣದಲ್ಲಿ ಯಾವುದನ್ನೂ ಹೇಳಲು ಹಿಂಜರಿಯದ ಧೈರ್ಯ ಇದೆ. ಆತ್ಮ ನಿರೀಕ್ಷೆಯೂ ಇದೆ' ಎಂದರು.<br /> <br /> `ರಾಜಕಾರಣಿಗಳು ವೈಯಕ್ತಿಕವಾಗಿ ಹಾಳಾದರೆ ಚಿಂತೆ ಇಲ್ಲ; ಆದರೆ ಅವರು ನಾಡನ್ನು ಹಾಳು ಮಾಡುವುದು ಬೇಡ ಎನ್ನುವುದಷ್ಟೇ ನನ್ನ ಬರಹದ ಉದ್ದೇಶ. ಜನರ ಭಾವನೆಗಳಿಗೆ ನಾನು ಧ್ವನಿಯಾಗಲು ಪ್ರಯತ್ನಿಸಿದ್ದೇನೆ ಅಷ್ಟೇ' ಎಂದು ಲೇಖಕ <span style="color: rgb(128, 0, 0);"><strong>ಪದ್ಮರಾಜ ದಂಡಾವತಿ </strong></span>ಹೇಳಿದರು. ಡಿ.ವಿ.ಪ್ರಹ್ಲಾದ್ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಾಲ ಬದಲಾದರೂ ರಾಜಕೀಯ ಬದಲಾಗುವುದಿಲ್ಲ. ಪಾತ್ರಗಳು ಬದಲಾಗುತ್ತವೆ. ಆದರೆ, ರಾಜಕೀಯ ಹಾಗೆಯೇ ಇರುತ್ತದೆ ಎಂದು ಶಾಸಕ ವೈಎಸ್ವಿ ದತ್ತ ಅಭಿಪ್ರಾಯಪಟ್ಟರು.<br /> <br /> ವಸಂತ ಪ್ರಕಾಶನ ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರ `ನಾಲ್ಕನೇ ಆಯಾಮ' ಅಂಕಣ ಬರಹಗಳ ಐದು ಮತ್ತು ಆರನೇ ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದಿನ ಸರ್ಕಾರದಲ್ಲಿ ನಡೆದ ಘಟನೆಗಳು ಈಗಿನ ಸರ್ಕಾರದಲ್ಲಿ ನಡೆಯುವುದಿಲ್ಲ ಎಂದು ಭಾವಿಸಲು ಆಗದು ಎಂದು ಹೇಳಿದರು.<br /> <br /> ರಾಜಕೀಯ ಸಂಪುಟದ ಪ್ರಸ್ತುತತೆ ಕುರಿತು ಮಾತನಾಡಿದ ಅವರು `ವಿಶ್ವೇಶ್ವರಯ್ಯನವರು 1909ರಲ್ಲಿ ಕನ್ನಂಬಾಡಿ ಕಟ್ಟುವಾಗ ಎದ್ದ ಹಣಕಾಸಿನ ಪ್ರಶ್ನೆ, 1985ರಲ್ಲಿ ಎಚ್.ಡಿ ದೇವೇಗೌಡರು ಕಾವೇರಿ-ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಮುಂದಾದಾಗಲೂ ಎದ್ದಿತ್ತು, ಎರಡೂ ಸಂದರ್ಭದಲ್ಲಿ ಹಣಕಾಸು ಇಲಾಖೆ ಹಣ ನೀಡಲು ತಕರಾರು ಎತ್ತಿತ್ತು; ಈಗ 2013ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಹಣ ಬಿಡುವ ಗಿಡ ಇಲ್ಲ, ಎಚ್ಚರಿಕೆಯಿಂದ ಖರ್ಚು ಮಾಡಬೇಕು ಎನ್ನುವ ಹೇಳಿಕೆ ನೀಡಿದ್ದಾರೆ. ವ್ಯಕ್ತಿಗಳು ಬದಲಾದರೂ ಮನಸ್ಥಿತಿ ಒಂದೇ ಆಗಿರುತ್ತದೆ' ಎಂದು ಅವರು ನೆನಪಿಸಿದರು.<br /> <br /> ಕೃತಿ ಬಿಡುಗಡೆ ಮಾಡಿದ ನಟ ರಮೇಶ್ ಅರವಿಂದ್, `ಆದರ್ಶ ಸಮಾಜ ಮತ್ತು ಮಾದರಿ ವ್ಯಕ್ತಿ ಹೇಗಿರಬೇಕು ಎನ್ನುವುದೇ ಈ ಸಂಪುಟಗಳ ಆಶಯವಾಗಿದೆ. ಬದುಕಿನ ಅನುಭವವನ್ನೇ ಬರಹ ರೂಪಕ್ಕೆ ಇಲ್ಲಿ ಇಳಿಸಲಾಗಿದ್ದು ಸಮಾಜದ ಮನಸ್ಸಾಕ್ಷಿಯನ್ನು ಓದುಗರ ಮುಂದೆ ಮಂಡಿಸಲಾಗಿದೆ' ಎಂದು ಹೇಳಿದರು.<br /> <br /> ಅಂಕಣದ ಸಾಂಸ್ಕೃತಿಕ ಬರಹಗಳ ಸಂಪುಟ ಕುರಿತು ಮಾತನಾಡಿದ ಕಥೆಗಾರ ವಿವೇಕ ಶಾನಭಾಗ್, `ಪತ್ರಕರ್ತರಿಗೆ ವೃತ್ತಿ ಕೌಶಲ ಮಾತ್ರ ಗೊತ್ತಿರುತ್ತದೆ. ಅದರ ಆಧಾರದ ಮೇಲೆ ಪ್ರತಿಯೊಂದನ್ನು ಗ್ರಹಿಸಿ ಬರೆಯುತ್ತಾರೆ. ಆದರೆ, `ನಾಲ್ಕನೇ ಆಯಾಮ'ದ ಬರಹಗಳಲ್ಲಿ ಆಳವಾದ ಜೀವನ ಪ್ರೀತಿ ಇದೆ. ವಸ್ತು ವಿಸ್ತಾರ ದೊಡ್ಡದಿದೆ' ಎಂದು ಅಭಿಪ್ರಾಯಪಟ್ಟರು.<br /> <br /> `ಸಾಂಸ್ಕೃತಿಕ ಜಗತ್ತಿನಲ್ಲಿ `ಪ್ರಜಾವಾಣಿ'ಗೆ ತನ್ನದೇ ಆದ ಬಲು ಮಹತ್ವದ ಸ್ಥಾನ ಇದೆ. ನಾಡಿನ ಸಾಂಸ್ಕೃತಿಕ ರಂಗದ ಬೆಳವಣಿಗೆಯಲ್ಲಿ ಪೋಷಕನಾಗಿ ನಿಂತಿದೆ ಪತ್ರಿಕೆ. ಅದರ ಅಸ್ಮಿತೆಯನ್ನು ಸರಿಯಾಗಿ ಗ್ರಹಿಸಿರುವ ಇಲ್ಲಿನ ಬರವಣಿಗೆ ಕೂಡ ಅಷ್ಟೇ ಎತ್ತರದಲ್ಲಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. `ದೈನಂದಿನ ಮತ್ತು ನಿರಂತರ ಗುಣಗಳೆರಡೂ ಮೇಳೈಸಿರುವ ಅಂಕಣದಲ್ಲಿ ಯಾವುದನ್ನೂ ಹೇಳಲು ಹಿಂಜರಿಯದ ಧೈರ್ಯ ಇದೆ. ಆತ್ಮ ನಿರೀಕ್ಷೆಯೂ ಇದೆ' ಎಂದರು.<br /> <br /> `ರಾಜಕಾರಣಿಗಳು ವೈಯಕ್ತಿಕವಾಗಿ ಹಾಳಾದರೆ ಚಿಂತೆ ಇಲ್ಲ; ಆದರೆ ಅವರು ನಾಡನ್ನು ಹಾಳು ಮಾಡುವುದು ಬೇಡ ಎನ್ನುವುದಷ್ಟೇ ನನ್ನ ಬರಹದ ಉದ್ದೇಶ. ಜನರ ಭಾವನೆಗಳಿಗೆ ನಾನು ಧ್ವನಿಯಾಗಲು ಪ್ರಯತ್ನಿಸಿದ್ದೇನೆ ಅಷ್ಟೇ' ಎಂದು ಲೇಖಕ <span style="color: rgb(128, 0, 0);"><strong>ಪದ್ಮರಾಜ ದಂಡಾವತಿ </strong></span>ಹೇಳಿದರು. ಡಿ.ವಿ.ಪ್ರಹ್ಲಾದ್ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>