<p><strong>ಬೆಂಗಳೂರು: </strong> `ಇಂದಿನ ರಾಜಕೀಯ ಅಸ್ಥಿರತೆಗೆ ರಾಮಕೃಷ್ಣ ಹೆಗಡೆ, ಎಚ್. ಡಿ.ದೇವೇಗೌಡ ಮತ್ತು ಜೆ.ಎಚ್. ಪಟೇಲ್ ಅವರೇ ಕಾರಣ~ ಎಂದು ವಿಧಾನಪರಿಷತ್ ಸದಸ್ಯ ಎಂ. ಸಿ. ನಾಣಯ್ಯ ಅವರು ನುಡಿದರು.<br /> <br /> `ಭಾರತ ಯಾತ್ರಾ ಕೇಂದ್ರ~ವು ಕರ್ನಾಟಕ ಚಿತ್ರಕಲಾ ಪರಿಷತ್ ಮತ್ತು ರಾಜ್ಯ ರಾಜಕೀಯ ಚಿಂತಕರ ವೇದಿಕೆಯ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ರಾಮಕೃಷ್ಣ ಹೆಗಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, `ಈ ಮೂವರೂ ಮುಖಂಡರು ತಮ್ಮ ಪ್ರತಿಷ್ಠೆ ಬದಿಗಿಟ್ಟಿದ್ದರೆ ಜನತಾ ಪರಿವಾರ ಇಂದಿಗೂ ಅಧಿಕಾರದಲ್ಲಿ ಮುಂದುವರೆಯುತ್ತಿತ್ತು~ ಎಂದರು. <br /> <br /> `1983ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಜನತಾ ಪರಿವಾರದ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು. ಜನಪರ ಆಡಳಿತ ನೀಡಿತು. ಆ ನಂತರ ಈ ಮೂವರು ನಾಯಕರು ತೆಗೆದುಕೊಂಡ ಭಿನ್ನ ನಿಲುವುಗಳಿಂದ ರಾಜ್ಯ ರಾಜಕೀಯ ಅಸ್ಥಿರತೆಯತ್ತ ನಡೆಯಿತು~ ಎಂದರು.<br /> <br /> ಬಳ್ಳಾರಿಯು ರಾಜ್ಯದಲ್ಲಿದೆಯೋ ಇಲ್ಲ ವೋ ಎಂಬ ಬಗ್ಗೆ ಸಂಶಯ ಬರುತ್ತಿದೆ. ಅದೇ ಒಂದು ಪ್ರತ್ಯೇಕ ರಾಷ್ಟ್ರದಂತಾಗಿದೆ ಎಂದು ವ್ಯಂಗ್ಯವಾಡಿದ ನಾಣಯ್ಯ, ಈ ಪರಿಸ್ಥಿತಿಗೆ ಕಾರಣ ಏನೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.<br /> <br /> ಪ್ರಶಸ್ತಿ ಪ್ರದಾನ ಮಾಡಿದ ಸಚಿವ ಗೋವಿಂದ ಎಂ.ಕಾರಜೋಳ ಮಾತನಾಡಿ, `ರಾಜಕಾರಣದಲ್ಲಿ ಎಷ್ಟೋ ಜನ ಬಂದು ಹೋಗಿದ್ದಾರೆ. ಆದರೆ ಹೆಗಡೆ ಅವರಂತೆ ತತ್ವ-ಸಿದ್ಧಾಂತಗಳ ಮೂಲಕ ಕಟಿಬದ್ಧವಾಗಿ ಕೆಲಸ ಮಾಡಿದವರು ನಾಣಯ್ಯ. ಕಾನೂನು ಸಚಿವರಾಗಿ ಕೆಲಸ ಮಾಡಿದ ಅವರು, ಮೌಲ್ಯಕ್ಕೆ ಬೆಲೆ ಕೊಟ್ಟರು~ ಎಂದರು.<br /> <br /> ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಮಾತನಾಡಿ, `ಒಂದು ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ನಾನು ಟೀಕಿಸಿದ್ದೆ. ಅವರ ವಿರುದ್ಧ ದೂರು ನೀಡಿದ್ದೆ. ಆ ಬಗ್ಗೆ ಪೂರ್ವಗ್ರಹ ಪೀಡಿತರಾಗದೇ ನನಗೆ ಚುನಾವಣಾ ಪ್ರಣಾಳಿಕೆ ತಯಾರಿಸುವ ಜವಾಬ್ದಾರಿ ವಹಿಸಿದ್ದರು. <br /> <br /> ಶಿವಮೊಗ್ಗದಿಂದ ಹೊಳೆಹೊನ್ನೂರಿಗೆ ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ಅವರು, ತಮ್ಮಂದಿಗೆ ಕರೆದುಕೊಂಡು ಹೋಗಿ, ಪ್ರಣಾಳಿಕೆಯ ಕರಡಿನಲ್ಲಿದ್ದ ಸಣ್ಣ -ಪುಟ್ಟ ದೋಷ ಸರಿಮಾಡಿದರು ಎಂದರು. `ಈಗ ಎಲ್ಲ ಪಕ್ಷದಲ್ಲಿನ ಒಳ್ಳೆಯವರು ಎಂದು ಗುರುತಿಸಲ್ಪಡುವವರು ಜನತಾ ಪರಿವಾರದಿಂದ ಹೋದವರೇ ಆಗಿದ್ದಾರೆ~ ಎಂದು ಹೇಳಿದರು.<br /> <br /> ಜೆಡಿಯು ಮುಖಂಡ ಡಾ.ಎಂ.ಪಿ. ನಾಡಗೌಡ, `ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತಾ ಪರಿವಾರದಿಂದ ಹೆಗಡೆ ಅವರನ್ನು ಉಚ್ಚಾಟಿಸಲಾಯಿತು. ಈ ನಿರ್ಣಯಕ್ಕೆ ಒಪ್ಪಿಗೆ ಪಡೆಯಲು ನನ್ನ ಕೈ ಎತ್ತಿಸಿದ್ದರು. ಅವರನ್ನು ಪಕ್ಷದಿಂದ ಹೊರಕಳಿಸುವ ಪಾಪದಲ್ಲಿ ನಾನೂ ಇಷ್ಟವಿಲ್ಲದೇ ಪಾಲುದಾರನಾದೆ~ ಎಂದರು.<br /> <br /> ಮಾಜಿ ಸಭಾಪತಿ ಬಿ.ಎಲ್.ಶಂಕರ್, `ಭ್ರಷ್ಟಾಚಾರ ಇಂದು ಎಲ್ಲ ವಲಯದಲ್ಲೂ ಇದೆ. ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಲು ತೆರಿಗೆ ವಂಚಿಸಿದ ಸಿನಿಮಾ ನಟರು ಭಾಗವಹಿಸಿ ಪೆರೇಡ್ ಮಾಡಿದರು. ಅವರ ಬಗ್ಗೆ ಮಾತನಾಡದವರು, ಬರೀ ರಾಜಕಾರಣಿಗಳು ಬಗ್ಗೆ ಮಾತ್ರ ಧ್ವನಿ ಎತ್ತುತ್ತಿದ್ದಾರೆ~ ಎಂದು ವ್ಯಂಗ್ಯವಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಂ, ಭಾರತ ಯಾತ್ರಾ ಕೇಂದ್ರದ ಮುಖಂಡ ನಾಗರಾಜಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong> `ಇಂದಿನ ರಾಜಕೀಯ ಅಸ್ಥಿರತೆಗೆ ರಾಮಕೃಷ್ಣ ಹೆಗಡೆ, ಎಚ್. ಡಿ.ದೇವೇಗೌಡ ಮತ್ತು ಜೆ.ಎಚ್. ಪಟೇಲ್ ಅವರೇ ಕಾರಣ~ ಎಂದು ವಿಧಾನಪರಿಷತ್ ಸದಸ್ಯ ಎಂ. ಸಿ. ನಾಣಯ್ಯ ಅವರು ನುಡಿದರು.<br /> <br /> `ಭಾರತ ಯಾತ್ರಾ ಕೇಂದ್ರ~ವು ಕರ್ನಾಟಕ ಚಿತ್ರಕಲಾ ಪರಿಷತ್ ಮತ್ತು ರಾಜ್ಯ ರಾಜಕೀಯ ಚಿಂತಕರ ವೇದಿಕೆಯ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ರಾಮಕೃಷ್ಣ ಹೆಗಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, `ಈ ಮೂವರೂ ಮುಖಂಡರು ತಮ್ಮ ಪ್ರತಿಷ್ಠೆ ಬದಿಗಿಟ್ಟಿದ್ದರೆ ಜನತಾ ಪರಿವಾರ ಇಂದಿಗೂ ಅಧಿಕಾರದಲ್ಲಿ ಮುಂದುವರೆಯುತ್ತಿತ್ತು~ ಎಂದರು. <br /> <br /> `1983ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಜನತಾ ಪರಿವಾರದ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು. ಜನಪರ ಆಡಳಿತ ನೀಡಿತು. ಆ ನಂತರ ಈ ಮೂವರು ನಾಯಕರು ತೆಗೆದುಕೊಂಡ ಭಿನ್ನ ನಿಲುವುಗಳಿಂದ ರಾಜ್ಯ ರಾಜಕೀಯ ಅಸ್ಥಿರತೆಯತ್ತ ನಡೆಯಿತು~ ಎಂದರು.<br /> <br /> ಬಳ್ಳಾರಿಯು ರಾಜ್ಯದಲ್ಲಿದೆಯೋ ಇಲ್ಲ ವೋ ಎಂಬ ಬಗ್ಗೆ ಸಂಶಯ ಬರುತ್ತಿದೆ. ಅದೇ ಒಂದು ಪ್ರತ್ಯೇಕ ರಾಷ್ಟ್ರದಂತಾಗಿದೆ ಎಂದು ವ್ಯಂಗ್ಯವಾಡಿದ ನಾಣಯ್ಯ, ಈ ಪರಿಸ್ಥಿತಿಗೆ ಕಾರಣ ಏನೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.<br /> <br /> ಪ್ರಶಸ್ತಿ ಪ್ರದಾನ ಮಾಡಿದ ಸಚಿವ ಗೋವಿಂದ ಎಂ.ಕಾರಜೋಳ ಮಾತನಾಡಿ, `ರಾಜಕಾರಣದಲ್ಲಿ ಎಷ್ಟೋ ಜನ ಬಂದು ಹೋಗಿದ್ದಾರೆ. ಆದರೆ ಹೆಗಡೆ ಅವರಂತೆ ತತ್ವ-ಸಿದ್ಧಾಂತಗಳ ಮೂಲಕ ಕಟಿಬದ್ಧವಾಗಿ ಕೆಲಸ ಮಾಡಿದವರು ನಾಣಯ್ಯ. ಕಾನೂನು ಸಚಿವರಾಗಿ ಕೆಲಸ ಮಾಡಿದ ಅವರು, ಮೌಲ್ಯಕ್ಕೆ ಬೆಲೆ ಕೊಟ್ಟರು~ ಎಂದರು.<br /> <br /> ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಮಾತನಾಡಿ, `ಒಂದು ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ನಾನು ಟೀಕಿಸಿದ್ದೆ. ಅವರ ವಿರುದ್ಧ ದೂರು ನೀಡಿದ್ದೆ. ಆ ಬಗ್ಗೆ ಪೂರ್ವಗ್ರಹ ಪೀಡಿತರಾಗದೇ ನನಗೆ ಚುನಾವಣಾ ಪ್ರಣಾಳಿಕೆ ತಯಾರಿಸುವ ಜವಾಬ್ದಾರಿ ವಹಿಸಿದ್ದರು. <br /> <br /> ಶಿವಮೊಗ್ಗದಿಂದ ಹೊಳೆಹೊನ್ನೂರಿಗೆ ಚುನಾವಣಾ ಪ್ರಚಾರಕ್ಕೆ ಹೊರಟಿದ್ದ ಅವರು, ತಮ್ಮಂದಿಗೆ ಕರೆದುಕೊಂಡು ಹೋಗಿ, ಪ್ರಣಾಳಿಕೆಯ ಕರಡಿನಲ್ಲಿದ್ದ ಸಣ್ಣ -ಪುಟ್ಟ ದೋಷ ಸರಿಮಾಡಿದರು ಎಂದರು. `ಈಗ ಎಲ್ಲ ಪಕ್ಷದಲ್ಲಿನ ಒಳ್ಳೆಯವರು ಎಂದು ಗುರುತಿಸಲ್ಪಡುವವರು ಜನತಾ ಪರಿವಾರದಿಂದ ಹೋದವರೇ ಆಗಿದ್ದಾರೆ~ ಎಂದು ಹೇಳಿದರು.<br /> <br /> ಜೆಡಿಯು ಮುಖಂಡ ಡಾ.ಎಂ.ಪಿ. ನಾಡಗೌಡ, `ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತಾ ಪರಿವಾರದಿಂದ ಹೆಗಡೆ ಅವರನ್ನು ಉಚ್ಚಾಟಿಸಲಾಯಿತು. ಈ ನಿರ್ಣಯಕ್ಕೆ ಒಪ್ಪಿಗೆ ಪಡೆಯಲು ನನ್ನ ಕೈ ಎತ್ತಿಸಿದ್ದರು. ಅವರನ್ನು ಪಕ್ಷದಿಂದ ಹೊರಕಳಿಸುವ ಪಾಪದಲ್ಲಿ ನಾನೂ ಇಷ್ಟವಿಲ್ಲದೇ ಪಾಲುದಾರನಾದೆ~ ಎಂದರು.<br /> <br /> ಮಾಜಿ ಸಭಾಪತಿ ಬಿ.ಎಲ್.ಶಂಕರ್, `ಭ್ರಷ್ಟಾಚಾರ ಇಂದು ಎಲ್ಲ ವಲಯದಲ್ಲೂ ಇದೆ. ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಲು ತೆರಿಗೆ ವಂಚಿಸಿದ ಸಿನಿಮಾ ನಟರು ಭಾಗವಹಿಸಿ ಪೆರೇಡ್ ಮಾಡಿದರು. ಅವರ ಬಗ್ಗೆ ಮಾತನಾಡದವರು, ಬರೀ ರಾಜಕಾರಣಿಗಳು ಬಗ್ಗೆ ಮಾತ್ರ ಧ್ವನಿ ಎತ್ತುತ್ತಿದ್ದಾರೆ~ ಎಂದು ವ್ಯಂಗ್ಯವಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಂ, ಭಾರತ ಯಾತ್ರಾ ಕೇಂದ್ರದ ಮುಖಂಡ ನಾಗರಾಜಮೂರ್ತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>