ವಂಚನೆ ವಿರುದ್ಧ ಹೋರಾಟ: ‘ಕೆ.ಜಿ.ಹಳ್ಳಿಯ ಉದ್ಯಮಿಯೊಬ್ಬರು, ‘ಆಲಾ ವೆಂಚರ್ಸ್ ಕಂಪನಿ’ ಆರಂಭಿಸಿ ದ್ದರು. ತಿಂಗಳಿಗೆ ಶೇ 10ರಷ್ಟು ಬಡ್ಡಿ ಆಮಿಷ ವೊಡ್ಡಿ ಜನರಿಂದ ಹಣ ಸಂಗ್ರಹಿಸಿ ವಂಚಿಸಿದ್ದರು. ಹಣ ಕಳೆದು ಕೊಂಡವರ ಪರ ಜುಬೇರ್ ಹೋರಾಟ ಮಾಡುತ್ತಿದ್ದರು. ಪ್ರಕರಣದ ಆರೋಪಿಗಳ ಜೊತೆಗಿನ ಮೊಬೈಲ್ ಸಂಭಾಷಣೆಗಳನ್ನು ಜುಬೇರ್, ಯೂಟ್ಯೂಬ್ಗೆ ಅಪ್ಲೋಡ್ ಮಾಡುತ್ತಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಆರೋಪಿಗಳು, ಜೀವ ಬೆದರಿಕೆ ಹಾಕುತ್ತಿದ್ದರು’ ಎಂಬುದಾಗಿ ಸಂಬಂಧಿಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.