<p>ಬೆಂಗಳೂರು: ‘ನೀರು ಕೇಳುವ ನೆಪದಲ್ಲಿ ಮನೆ ಬಳಿ ಬಂದ ಮಹಿಳೆ ಹಾಗೂ ಯುವಕ, ನನ್ನ ಕೈ--ಕಾಲುಗಳನ್ನು ಕಟ್ಟಿ 400 ಗ್ರಾಂ ಚಿನ್ನಾಭರಣ ದೋಚಿದರು’ ಎಂದು ಕವಿತಾ ಎಂಬುವರು ಕುಮಾರಸ್ವಾಮಿ ಲೇಔಟ್ ಠಾಣೆಗೆ ಶನಿವಾರ ದೂರು ಕೊಟ್ಟಿದ್ದಾರೆ.<br /> <br /> ‘ಸಂಜೆ 4 ಗಂಟೆ ಸುಮಾರಿಗೆ ಅತ್ತೆ ಹಾಗೂ ನಾನು ನಡುಮನೆಯಲ್ಲಿ ಮಲಗಿದ್ದೆವು. ಈ ವೇಳೆ ಬಾಗಿಲು ಬಡಿದ ಮಹಿಳೆ, ಕುಡಿಯಲು ನೀರು ಕೇಳಿದಳು. ಆಕೆಯೊಂದಿಗೆ ಒಬ್ಬ ಯುವಕ ಕೂಡ ಇದ್ದ. ನೀರು ತರಲು ಒಳಗೆ ಹೋಗುತ್ತಿದ್ದಂತೆಯೇ ಇಬ್ಬರೂ ನನ್ನನ್ನು ಹಿಂಬಾಲಿಸಿ ಬಂದು ಬಾಯಿಗೆ ಬಟ್ಟೆ ತುರುಕಿದರು. ನಂತರ ಕೈಕಾಲುಗಳನ್ನು ಕಟ್ಟಿ ಚಾಕುವಿನಿಂದ ಬೆದರಿಸಿದರು.<br /> <br /> ನಂತರ ಕೋಣೆಗೆ ತೆರಳಿ ಅಲ್ಮೆರಾದಲ್ಲಿದ್ದ 400 ಗ್ರಾಂ ತೂಕದ ಒಡವೆಗಳನ್ನು ದೋಚಿದರು’ ಎಂದು ಕವಿತಾ ದೂರಿನಲ್ಲಿ ಹೇಳಿದ್ದಾರೆ. ಆದರೆ, ಕವಿತಾ ಅತ್ತೆ ಪಾಪಮ್ಮ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ‘ಮಗ ಮಂಜುನಾಥ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಸೊಸೆ ಕವಿತಾ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾಳೆ.<br /> <br /> ಸಂಜೆ 4 ಗಂಟೆಗೆ ನಾನು ಸಹ ಆಕೆಯ ಜತೆಯೇ ಮಲಗಿದ್ದೆ. ಯಾವುದೇ ಕಳ್ಳರು ಮನೆಗೆ ನುಗ್ಗಿಲ್ಲ. ಈಕೆಯೇ ಆಭರಣ ತೆಗೆದುಕೊಂಡು ನಾಟಕವಾಡುತ್ತಿದ್ದಾಳೆ’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.<br /> <br /> ‘ಪ್ರಕರಣ ಸಂಬಂಧ ಕುಟುಂಬ ಸದಸ್ಯರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ನೀರು ಕೇಳುವ ನೆಪದಲ್ಲಿ ಮನೆ ಬಳಿ ಬಂದ ಮಹಿಳೆ ಹಾಗೂ ಯುವಕ, ನನ್ನ ಕೈ--ಕಾಲುಗಳನ್ನು ಕಟ್ಟಿ 400 ಗ್ರಾಂ ಚಿನ್ನಾಭರಣ ದೋಚಿದರು’ ಎಂದು ಕವಿತಾ ಎಂಬುವರು ಕುಮಾರಸ್ವಾಮಿ ಲೇಔಟ್ ಠಾಣೆಗೆ ಶನಿವಾರ ದೂರು ಕೊಟ್ಟಿದ್ದಾರೆ.<br /> <br /> ‘ಸಂಜೆ 4 ಗಂಟೆ ಸುಮಾರಿಗೆ ಅತ್ತೆ ಹಾಗೂ ನಾನು ನಡುಮನೆಯಲ್ಲಿ ಮಲಗಿದ್ದೆವು. ಈ ವೇಳೆ ಬಾಗಿಲು ಬಡಿದ ಮಹಿಳೆ, ಕುಡಿಯಲು ನೀರು ಕೇಳಿದಳು. ಆಕೆಯೊಂದಿಗೆ ಒಬ್ಬ ಯುವಕ ಕೂಡ ಇದ್ದ. ನೀರು ತರಲು ಒಳಗೆ ಹೋಗುತ್ತಿದ್ದಂತೆಯೇ ಇಬ್ಬರೂ ನನ್ನನ್ನು ಹಿಂಬಾಲಿಸಿ ಬಂದು ಬಾಯಿಗೆ ಬಟ್ಟೆ ತುರುಕಿದರು. ನಂತರ ಕೈಕಾಲುಗಳನ್ನು ಕಟ್ಟಿ ಚಾಕುವಿನಿಂದ ಬೆದರಿಸಿದರು.<br /> <br /> ನಂತರ ಕೋಣೆಗೆ ತೆರಳಿ ಅಲ್ಮೆರಾದಲ್ಲಿದ್ದ 400 ಗ್ರಾಂ ತೂಕದ ಒಡವೆಗಳನ್ನು ದೋಚಿದರು’ ಎಂದು ಕವಿತಾ ದೂರಿನಲ್ಲಿ ಹೇಳಿದ್ದಾರೆ. ಆದರೆ, ಕವಿತಾ ಅತ್ತೆ ಪಾಪಮ್ಮ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ‘ಮಗ ಮಂಜುನಾಥ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾನೆ. ಸೊಸೆ ಕವಿತಾ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾಳೆ.<br /> <br /> ಸಂಜೆ 4 ಗಂಟೆಗೆ ನಾನು ಸಹ ಆಕೆಯ ಜತೆಯೇ ಮಲಗಿದ್ದೆ. ಯಾವುದೇ ಕಳ್ಳರು ಮನೆಗೆ ನುಗ್ಗಿಲ್ಲ. ಈಕೆಯೇ ಆಭರಣ ತೆಗೆದುಕೊಂಡು ನಾಟಕವಾಡುತ್ತಿದ್ದಾಳೆ’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.<br /> <br /> ‘ಪ್ರಕರಣ ಸಂಬಂಧ ಕುಟುಂಬ ಸದಸ್ಯರು ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>