<p><span style="font-size: 26px;"><strong>ಬೆಂಗಳೂರು:</strong> `ಪುಸ್ತಕೋದ್ಯಮ ಮತ್ತು ಪುಸ್ತಕ ಸಂಸ್ಕೃತಿಯ ನಡುವೆ ಅನುಸಂಧಾನ ಏರ್ಪಡುವ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದೆ' ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.</span><br /> <br /> ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಅಂಕಿತ ಪುಸ್ತಕ' ಪ್ರಶಸ್ತಿಯನ್ನು `ಅಕ್ಷರ ಪ್ರಕಾಶನ'ಕ್ಕೆ ಪ್ರದಾನ ಮಾಡಿ ಅವರು ಮಾತನಾಡಿದರು.<br /> <br /> `ಸಂಪಾದನೆ ಮತ್ತು ಮಾರುಕಟ್ಟೆಯನ್ನೇ ಮುಖ್ಯ ಧ್ಯೇಯವಾಗಿಸಿಕೊಂಡ ಪುಸ್ತಕೋದ್ಯಮ ಮತ್ತು ಸಂವೇದನೆಗೆ ಒತ್ತು ನೀಡುವ ಪುಸ್ತಕ ಸಂಸ್ಕೃತಿಯ ನಡುವೆ ಸಮನ್ವಯತೆ ಸಾಧಿಸಿದಾಗ ಮಾತ್ರ ಪ್ರಸ್ತುತ ಅಕ್ಷರ ಲೋಕ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ' ಎಂದು ಹೇಳಿದರು.<br /> <br /> `ನವ್ಯ ಸಾಹಿತ್ಯವನ್ನು ಬೆಳೆಸುವಲ್ಲಿ `ಅಕ್ಷರ ಪ್ರಕಾಶನ' ತನ್ನದೇ ಪಾತ್ರವನ್ನು ವಹಿಸಿದೆ. ನವ್ಯ ಸಾಹಿತ್ಯಧಾರೆಯಲ್ಲಿದ್ದವರೆಲ್ಲರೂ ಸಮಾಜವಾದಿಗಳಲ್ಲ. ಆದರೆ, ಕೆ.ವಿ.ಸುಬ್ಬಣ್ಣ ಸಮಾಜವಾದ ಸಿದ್ಧಾಂತವನ್ನು ಒಪ್ಪಿಕೊಂಡವರು. ಸಾಹಿತ್ಯ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುವಾಗ ಈ ಪ್ರಕಾಶನದ ಹುಟ್ಟು, ಬೆಳವಣಿಗೆ ಮತ್ತು ಕೊಡುಗೆಗಳು ಕುತೂಹಲ ಹುಟ್ಟಿಸುತ್ತದೆ' ಎಂದರು.<br /> <br /> `ಯಾವುದೇ ಕ್ಷೇತ್ರದ ಸಾಮಾಜಿಕ ಸೂಕ್ಷ್ಮಗಳು ನಶಿಸಲು ಜಾಹೀರಾತುಕರಣವೇ ಪ್ರಮುಖ ಕಾರಣ. ಇದು ಪುಸ್ತಕ ಲೋಕಕ್ಕೂ ಅಂಟಿಕೊಂಡ ವ್ಯಾಧಿ. ಪುಸ್ತಕ ಪ್ರಕಟಣೆ ಹಾಗೂ ಮಾರಾಟದ ವಿಚಾರದಲ್ಲಿ ಪ್ರಕಾಶಕರು ಒಂದು ನಿರ್ದಿಷ್ಟ ಸಿದ್ಧಾಂತವನ್ನು ರೂಪಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.<br /> <br /> ಪ್ರಶಸ್ತಿ ಸ್ವೀಕರಿಸಿದ ಅಕ್ಷರ ಪ್ರಕಾಶನದ ಕೆ.ವಿ.ಅಕ್ಷರ, `ಅಕ್ಷರ ಪ್ರಕಾಶನಕ್ಕೆ ಈಗ 57 ವರ್ಷ. ನನಗೆ 53 ವರ್ಷ ವಯಸ್ಸು. ನನಗಿಂತ ಮೊದಲು ಹುಟ್ಟಿದ ಈ ಪ್ರಕಾಶನದಿಂದಲೇ ನನಗೆ ಈ ಹೆಸರು ಬಂತು' ಎಂದ ಅವರು, 94ರಲ್ಲಿ ಅಂಕಿತ ಪ್ರಕಾಶನವು ಹುಟ್ಟಿದ ಸಂದರ್ಭದಲ್ಲಿ ಕಂಬತ್ತಳ್ಳಿ ಅವರಲ್ಲಿ `ಈ ಉದ್ಯಮದಲ್ಲಿ ಮುಂದುವರಿಯಬೇಕಾ?' ಎಂದು ಕೇಳಿದ್ದೆ. ಅವರೀಗ ನನ್ನ ತಪ್ಪುಕಲ್ಪನೆಯನ್ನು ಸುಳ್ಳುಮಾಡಿ ನನಗೆ ಪ್ರಶಸ್ತಿ ನೀಡುತ್ತಿರುವುದು ಆಶ್ಚರ್ಯವಾಗಿದೆ ಎಂದು ತಿಳಿಸಿದರು.<br /> <br /> `ಪ್ರಕಾಶಕರು ಪುಸ್ತಕಗಳ ಪ್ರಕಟಣೆಯ ಆಯ್ಕೆಯ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗಬಾರದು. ಆದರೆ, ಪ್ರಕಟಣೆಯಾದ ಪುಸ್ತಕಗಳಿಗೆ ಮಾರುಕಟ್ಟೆ ಒದಗಿಸಿ, ಅದನ್ನು ಓದುಗರಿಗೆ ತಲುಪಿಸುವಾಗ ಉದ್ಯಮದ ನೀತಿಯನ್ನು ಅನುಸರಿಸಬೇಕು' ಎಂದು ಹೇಳಿದರು.<br /> <br /> `ಸರ್ಕಾರವು ಪ್ರಕಾಶಕರಿಂದ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಹಾಳುಗೆಡವುತ್ತಿದೆ. ಈ ಧೋರಣೆಯನ್ನು ಪ್ರಕಾಶಕರೆಲ್ಲರೂ ಒಕ್ಕೂರಲಿನಿಂದ ವಿರೋಧಿಸಬೇಕು'ಎಂದು ಒತ್ತಾಯಿಸಿದರು.ಪ್ರಶಸ್ತಿಯು ರೂ 25 ಸಾವಿರ ಹಾಗೂ ಫಲಕವನ್ನು ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಬೆಂಗಳೂರು:</strong> `ಪುಸ್ತಕೋದ್ಯಮ ಮತ್ತು ಪುಸ್ತಕ ಸಂಸ್ಕೃತಿಯ ನಡುವೆ ಅನುಸಂಧಾನ ಏರ್ಪಡುವ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದೆ' ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.</span><br /> <br /> ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ `ಅಂಕಿತ ಪುಸ್ತಕ' ಪ್ರಶಸ್ತಿಯನ್ನು `ಅಕ್ಷರ ಪ್ರಕಾಶನ'ಕ್ಕೆ ಪ್ರದಾನ ಮಾಡಿ ಅವರು ಮಾತನಾಡಿದರು.<br /> <br /> `ಸಂಪಾದನೆ ಮತ್ತು ಮಾರುಕಟ್ಟೆಯನ್ನೇ ಮುಖ್ಯ ಧ್ಯೇಯವಾಗಿಸಿಕೊಂಡ ಪುಸ್ತಕೋದ್ಯಮ ಮತ್ತು ಸಂವೇದನೆಗೆ ಒತ್ತು ನೀಡುವ ಪುಸ್ತಕ ಸಂಸ್ಕೃತಿಯ ನಡುವೆ ಸಮನ್ವಯತೆ ಸಾಧಿಸಿದಾಗ ಮಾತ್ರ ಪ್ರಸ್ತುತ ಅಕ್ಷರ ಲೋಕ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ' ಎಂದು ಹೇಳಿದರು.<br /> <br /> `ನವ್ಯ ಸಾಹಿತ್ಯವನ್ನು ಬೆಳೆಸುವಲ್ಲಿ `ಅಕ್ಷರ ಪ್ರಕಾಶನ' ತನ್ನದೇ ಪಾತ್ರವನ್ನು ವಹಿಸಿದೆ. ನವ್ಯ ಸಾಹಿತ್ಯಧಾರೆಯಲ್ಲಿದ್ದವರೆಲ್ಲರೂ ಸಮಾಜವಾದಿಗಳಲ್ಲ. ಆದರೆ, ಕೆ.ವಿ.ಸುಬ್ಬಣ್ಣ ಸಮಾಜವಾದ ಸಿದ್ಧಾಂತವನ್ನು ಒಪ್ಪಿಕೊಂಡವರು. ಸಾಹಿತ್ಯ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುವಾಗ ಈ ಪ್ರಕಾಶನದ ಹುಟ್ಟು, ಬೆಳವಣಿಗೆ ಮತ್ತು ಕೊಡುಗೆಗಳು ಕುತೂಹಲ ಹುಟ್ಟಿಸುತ್ತದೆ' ಎಂದರು.<br /> <br /> `ಯಾವುದೇ ಕ್ಷೇತ್ರದ ಸಾಮಾಜಿಕ ಸೂಕ್ಷ್ಮಗಳು ನಶಿಸಲು ಜಾಹೀರಾತುಕರಣವೇ ಪ್ರಮುಖ ಕಾರಣ. ಇದು ಪುಸ್ತಕ ಲೋಕಕ್ಕೂ ಅಂಟಿಕೊಂಡ ವ್ಯಾಧಿ. ಪುಸ್ತಕ ಪ್ರಕಟಣೆ ಹಾಗೂ ಮಾರಾಟದ ವಿಚಾರದಲ್ಲಿ ಪ್ರಕಾಶಕರು ಒಂದು ನಿರ್ದಿಷ್ಟ ಸಿದ್ಧಾಂತವನ್ನು ರೂಪಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.<br /> <br /> ಪ್ರಶಸ್ತಿ ಸ್ವೀಕರಿಸಿದ ಅಕ್ಷರ ಪ್ರಕಾಶನದ ಕೆ.ವಿ.ಅಕ್ಷರ, `ಅಕ್ಷರ ಪ್ರಕಾಶನಕ್ಕೆ ಈಗ 57 ವರ್ಷ. ನನಗೆ 53 ವರ್ಷ ವಯಸ್ಸು. ನನಗಿಂತ ಮೊದಲು ಹುಟ್ಟಿದ ಈ ಪ್ರಕಾಶನದಿಂದಲೇ ನನಗೆ ಈ ಹೆಸರು ಬಂತು' ಎಂದ ಅವರು, 94ರಲ್ಲಿ ಅಂಕಿತ ಪ್ರಕಾಶನವು ಹುಟ್ಟಿದ ಸಂದರ್ಭದಲ್ಲಿ ಕಂಬತ್ತಳ್ಳಿ ಅವರಲ್ಲಿ `ಈ ಉದ್ಯಮದಲ್ಲಿ ಮುಂದುವರಿಯಬೇಕಾ?' ಎಂದು ಕೇಳಿದ್ದೆ. ಅವರೀಗ ನನ್ನ ತಪ್ಪುಕಲ್ಪನೆಯನ್ನು ಸುಳ್ಳುಮಾಡಿ ನನಗೆ ಪ್ರಶಸ್ತಿ ನೀಡುತ್ತಿರುವುದು ಆಶ್ಚರ್ಯವಾಗಿದೆ ಎಂದು ತಿಳಿಸಿದರು.<br /> <br /> `ಪ್ರಕಾಶಕರು ಪುಸ್ತಕಗಳ ಪ್ರಕಟಣೆಯ ಆಯ್ಕೆಯ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗಬಾರದು. ಆದರೆ, ಪ್ರಕಟಣೆಯಾದ ಪುಸ್ತಕಗಳಿಗೆ ಮಾರುಕಟ್ಟೆ ಒದಗಿಸಿ, ಅದನ್ನು ಓದುಗರಿಗೆ ತಲುಪಿಸುವಾಗ ಉದ್ಯಮದ ನೀತಿಯನ್ನು ಅನುಸರಿಸಬೇಕು' ಎಂದು ಹೇಳಿದರು.<br /> <br /> `ಸರ್ಕಾರವು ಪ್ರಕಾಶಕರಿಂದ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಹಾಳುಗೆಡವುತ್ತಿದೆ. ಈ ಧೋರಣೆಯನ್ನು ಪ್ರಕಾಶಕರೆಲ್ಲರೂ ಒಕ್ಕೂರಲಿನಿಂದ ವಿರೋಧಿಸಬೇಕು'ಎಂದು ಒತ್ತಾಯಿಸಿದರು.ಪ್ರಶಸ್ತಿಯು ರೂ 25 ಸಾವಿರ ಹಾಗೂ ಫಲಕವನ್ನು ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>