<p>ಬೆಂಗಳೂರು: ಜನಾಗ್ರಹದ ಐ ಪೇಯ್ಡ ಬ್ರೈಬ್ ಡಾಟ್ಕಾಂ ನೇತೃತ್ವದಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಭ್ರಷ್ಟಾಚಾರ ವಿರೋಧಿ ಅಭಿಯಾನ ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶನಿವಾರ ನಡೆಯಿತು.<br /> <br /> `ಕೇವಲ ಧರಣಿ ಮಾಡಬೇಡಿ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ~ ಎಂಬ ಘೋಷಣೆ ಮೂಲಕ ನಡೆದ ಅಭಿಯಾನದಲ್ಲಿ ನಗರದ ವಿವಿಧ ಕಾಲೇಜುಗಳ 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. <br /> <br /> ವಿದ್ಯಾರ್ಥಿಗಳಿಗೆ ಭಿತ್ತಿಪತ್ರ ಹಚ್ಚಲು ತರಬೇತಿ ನೀಡಲಾಯಿತು. ನಗರದಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಿಬಿಎಂಪಿಯ 198 ವಾರ್ಡ್ ಕಚೇರಿಗಳು, ನೋಂದಣಿ ಇಲಾಖೆ, ಬೆಸ್ಕಾಂ, ಜಲಮಂಡಲಿಯ ಸುಮಾರು 150 ಕಚೇರಿಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. <br /> <br /> ಭಿತ್ತಿಪತ್ರಗಳು ಅರಿತುಕೊಳ್ಳಲು ಸರಳವಾಗಿದ್ದು ಸಾರ್ವಜನಿಕರು ಸಂಪರ್ಕಿಸಲು ಎಸ್ಎಂಎಸ್ ಸಂಖ್ಯೆಯೊಂದನ್ನು ಅದರಲ್ಲಿ ಮುದ್ರಿಸಲಾಗಿದೆ. ಜನರು ಸರ್ಕಾರಿ ಅಧಿಕಾರಿಗಳೊಂದಿಗೆ ತಮ್ಮ ಸಕಾರಾತ್ಮಕ ಮತ್ತು ನಕಾರಾತ್ಮಕ ಅನುಭವಗಳನ್ನು ಈ ಮೂಲಕ ಹಂಚಿಕೊಳ್ಳಬಹುದಾಗಿದೆ. `ಇಲ್ಲಿ ನನಗೆ ಲಂಚ ಕೇಳಲಾಗಿದೆ~ ಅಥವಾ `ನನಗೆ ಲಂಚ ಕೇಳಿಲ್ಲ~ ಎಂಬ ಎರಡು ಆಯ್ಕೆಗಳು ಇದ್ದು ಜನರು ತಮ್ಮ ಅನುಭವವನ್ನು 561 6151ಗೆ ಚ್ಟಿಜಿಚಿಛಿ ಮತ್ತು ಚ್ಟಿಜಿಚಿಛಿ ಎಂದು ಎಸ್ಎಂಎಸ್ ಮಾಡಬಹುದು. <br /> <br /> ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ಸುಮಿತ್ ಮಾತನಾಡಿ, `ಸಮಾಜದಲ್ಲಿ ಇಂದು ಭ್ರಷ್ಟಾಚಾರ ದೊಡ್ಡ ಪಿಡುಗಾಗಿದೆ. ಈ ಬಗ್ಗೆ ಅರಿವು ಮೂಡಿಸಲು ಅಭಿಯಾನದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು~ ಎಂದು ವಿನಂತಿಸಿದರು. <br /> <br /> ಜನಾಗ್ರಹದ ಸಹಸ್ಥಾಪಕರಾದ ಸ್ವಾತಿ ರಾಮನಾಥನ್, ಜನಾಗ್ರಹದ ಆನ್ಲೈನ್ ಸಮನ್ವಯಕಾರ ಸುಬ್ರಹ್ಮಣ್ಯಂ ಇವಾಟುರಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಜನಾಗ್ರಹದ ಐ ಪೇಯ್ಡ ಬ್ರೈಬ್ ಡಾಟ್ಕಾಂ ನೇತೃತ್ವದಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಭ್ರಷ್ಟಾಚಾರ ವಿರೋಧಿ ಅಭಿಯಾನ ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶನಿವಾರ ನಡೆಯಿತು.<br /> <br /> `ಕೇವಲ ಧರಣಿ ಮಾಡಬೇಡಿ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿ~ ಎಂಬ ಘೋಷಣೆ ಮೂಲಕ ನಡೆದ ಅಭಿಯಾನದಲ್ಲಿ ನಗರದ ವಿವಿಧ ಕಾಲೇಜುಗಳ 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. <br /> <br /> ವಿದ್ಯಾರ್ಥಿಗಳಿಗೆ ಭಿತ್ತಿಪತ್ರ ಹಚ್ಚಲು ತರಬೇತಿ ನೀಡಲಾಯಿತು. ನಗರದಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಿಬಿಎಂಪಿಯ 198 ವಾರ್ಡ್ ಕಚೇರಿಗಳು, ನೋಂದಣಿ ಇಲಾಖೆ, ಬೆಸ್ಕಾಂ, ಜಲಮಂಡಲಿಯ ಸುಮಾರು 150 ಕಚೇರಿಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. <br /> <br /> ಭಿತ್ತಿಪತ್ರಗಳು ಅರಿತುಕೊಳ್ಳಲು ಸರಳವಾಗಿದ್ದು ಸಾರ್ವಜನಿಕರು ಸಂಪರ್ಕಿಸಲು ಎಸ್ಎಂಎಸ್ ಸಂಖ್ಯೆಯೊಂದನ್ನು ಅದರಲ್ಲಿ ಮುದ್ರಿಸಲಾಗಿದೆ. ಜನರು ಸರ್ಕಾರಿ ಅಧಿಕಾರಿಗಳೊಂದಿಗೆ ತಮ್ಮ ಸಕಾರಾತ್ಮಕ ಮತ್ತು ನಕಾರಾತ್ಮಕ ಅನುಭವಗಳನ್ನು ಈ ಮೂಲಕ ಹಂಚಿಕೊಳ್ಳಬಹುದಾಗಿದೆ. `ಇಲ್ಲಿ ನನಗೆ ಲಂಚ ಕೇಳಲಾಗಿದೆ~ ಅಥವಾ `ನನಗೆ ಲಂಚ ಕೇಳಿಲ್ಲ~ ಎಂಬ ಎರಡು ಆಯ್ಕೆಗಳು ಇದ್ದು ಜನರು ತಮ್ಮ ಅನುಭವವನ್ನು 561 6151ಗೆ ಚ್ಟಿಜಿಚಿಛಿ ಮತ್ತು ಚ್ಟಿಜಿಚಿಛಿ ಎಂದು ಎಸ್ಎಂಎಸ್ ಮಾಡಬಹುದು. <br /> <br /> ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ಸುಮಿತ್ ಮಾತನಾಡಿ, `ಸಮಾಜದಲ್ಲಿ ಇಂದು ಭ್ರಷ್ಟಾಚಾರ ದೊಡ್ಡ ಪಿಡುಗಾಗಿದೆ. ಈ ಬಗ್ಗೆ ಅರಿವು ಮೂಡಿಸಲು ಅಭಿಯಾನದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು~ ಎಂದು ವಿನಂತಿಸಿದರು. <br /> <br /> ಜನಾಗ್ರಹದ ಸಹಸ್ಥಾಪಕರಾದ ಸ್ವಾತಿ ರಾಮನಾಥನ್, ಜನಾಗ್ರಹದ ಆನ್ಲೈನ್ ಸಮನ್ವಯಕಾರ ಸುಬ್ರಹ್ಮಣ್ಯಂ ಇವಾಟುರಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>